Webdunia - Bharat's app for daily news and videos

Install App

ಖರ್ಗೆ ಆರಿದ ದೀಪ - ಮೋದಿ ಎಷ್ಟು ವೋಲ್ಟೇಜ್ ಬಲ್ಪ್?

Webdunia
ಭಾನುವಾರ, 9 ಫೆಬ್ರವರಿ 2020 (15:19 IST)
ನರೇಂದ್ರ ಮೋದಿ ಜೀರೋ ಕ್ಯಾಂಡಲ್ ಬಲ್ಪ್. ಹೀಗಂತ ಮಲ್ಲಿಕಾರ್ಜುನ ಖರ್ಗೆ ಕುಟುಕಿದ್ದೇ ತಡ, ಈ ಕುರಿತು ವಾಗ್ಯುದ್ಧ ಜೋರಾಗಿ ನಡೆಯುತ್ತಿದೆ.

ಪ್ರಧಾನಿ ಮೋದಿಯವರು ಏನು? ಅವರ ಸಾಧನೆ ಏನು? ಅವರ ಪ್ರಕಾಶ ಜಗತ್ತಿಗೆ ಬೆಳಕು ಕೊಡುತ್ತಿದೆ.
‌ನರೇಂದ್ರ ಮೋದಿಯವರು ತೌಸಂಡ್ ವೋಲ್ಟಿನ ಲೈಟ್. ಖರ್ಗೆ ರಾಜಕೀಯವಾಗಿ ಆರಿದ ದೀಪ. ಕತ್ತಲಲ್ಲಿದ್ದಾರೆ, ಸೋತಿದ್ದಾರೆ. ಹೀಗಂತ ಚಿತ್ರದುರ್ಗದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ವ್ಯಂಗ್ಯವಾಡಿದ್ದಾರೆ.
ಖರ್ಗೆಯವರನ್ನು ಕಾಂಗ್ರೆಸ್ ನವರು ಕನಿಷ್ಠ ರಾಜ್ಯಸಭೆ, ವಿಧಾನ ಪರಿಷತ್ ಗೂ ಕಳಿಸಲಿಲ್ಲ. ಆ ದುಖಃದಲ್ಲಿ ಖರ್ಗೆಯವರು ಆ ಮಾತು ಹೇಳಿದ್ದಾರೆ ಎಂದಿದ್ದಾರೆ.

ಇನ್ನು, ಬಿಜೆಪಿ ಸಂವಿಧಾನ ವಿರೋಧಿ ಕೆಲಸ ಮಾಡುತ್ತಿದೆ ಎಂಬ HD ದೇವೇಗೌಡರ ಹೇಳಿಕೆಗೆ ಪ್ರತಿಕ್ರಿಯಿಸಿದ ಕಟೀಲ್, ಬ್ರಿಟೀಷರು ಈ ದೇಶದಲ್ಲಿ ಡಿವೈಡ್ ಅಂಡ್ ರೂಲ್ ಮಾಡಿದ್ದರು. ದೇಶದಲ್ಲಿ ಆಡಳಿತ ಉಳಿಸಬೇಕು ಎಂದು ಹಿಂದೂ ಮುಸ್ಲಿಂರಲ್ಲಿ ಬೇಧ ಭಾವ ತಂದ್ರು. ಬಳಿಕ ಅದನ್ನು ಕಾಂಗ್ರೆಸ್ ಮುಂದುವರೆಸಿತು. ಕಾಂಗ್ರೆಸ್ ನ ಇನ್ನೊಂದು ಮುಖವೇ ದೇವೇಗೌಡರು ಅಂತ ಟೀಕೆ ಮಾಡಿದ್ದಾರೆ.

ದೇವೇಗೌಡರಿಗೆ ದೇಶದ ಸಂವಿಧಾನದ ಬಗ್ಗೆ ನಂಬಿಕೆ‌ ಇಲ್ಲ. ಬಿಜೆಪಿ ಸಂವಿಧಾನದ ಮೇಲೆ‌ಗೌರವ ಇಟ್ಟು ಅಂಬೇಡ್ಕರ್ ಗೆ ಗೌರವ ನೀಡುತ್ತಿದೆ. ನಮ್ಮಲ್ಲಿ ಭಾರಾತ್ ಮಾತಾಕಿ‌ ಜೈ ಇದೆಯೇ ಹೊರತು‌ ವ್ಯಕ್ತಿ ಆಧಾರಿತ ಇಲ್ಲ. ಜೆಡಿಎಸ್ ನಲ್ಲಿ ಈ ವರೆಗೆ ಭಾರತ್ ಮಾತಾ ಕಿ  ಜೈ ಅಂತ ‌ಹೇಳಿಲ್ಲ, ರಾಷ್ಟ್ರ ಧ್ವಜ ಹಾರಿಸಿಲ್ಲ ಅಂತ ದೂರಿದ್ದಾರೆ.

 

 

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments