Publish Date: Thu, 22 Nov 2018 (18:36 IST)
Updated Date: Thu, 22 Nov 2018 (18:38 IST)
ಪ್ರಖ್ಯಾತ ದೇವಸ್ಥಾನವೊಂದರ ಮುಂದೆ ನಿಂತಿದ್ದ ಕಾರ್ ಏಕಾಏಕಿಯಾಗಿ ಬೆಂಕಿ ಹೊತ್ತಿ ಉರಿದ ಘಟನೆ ನಡೆದಿದೆ.
ಕಲಬುರಗಿಯ ಗಾಣಗಾಪುರ ದತ್ತನ ಗುಡಿ ಮುಂದೆ ಘಟನೆ ನಡೆದಿದೆ.
ಗಾಣಗಾಪುರದ ಪ್ರಖ್ಯಾತ ದತ್ತನ ದೇವಸ್ಥಾನದ ಮುಂಭಾಗದಲ್ಲಿ ಕಾರ್ ಗಳನ್ನು ನಿಲ್ಲಿಲಾಗಿತ್ತು. ದೇವಸ್ಥಾನಕ್ಕೆ ಬಂದಿದ್ದ ಭಕ್ತರ ಕಾರು ಬೆಂಕಿಗಾಹುತಿಯಾಗಿದೆ.
ಕಸಕ್ಕೆ ಹಾಕಿದ್ದ ಬೆಂಕಿಯ ಕಿಡಿ ಕಾರಿಗೆ ತಗುಲಿದೆ. ಹೀಗಾಗಿ ಬೆಂಕಿಯ ಕಿಡಿಯಿಂದ ಕಾರು ಹೊತ್ತು ಉರಿದಿದೆ. ಕಾರಿನಲ್ಲಿದ್ದ ಭಕ್ತರು ದೇಗುಲಕ್ಕೆ ತೆರಳಿದ ಹಿನ್ನಲೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಕುರಿತು ಗಾಣಗಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.