Webdunia - Bharat's app for daily news and videos

Install App

ಹಲ್ಲೆಗೊಳಗಾದ ಯೋಧನ ಮನೆಗೆ ಭೇಟಿ ನೀಡಿದ ಸಚಿವ ಮಾಡಿದ್ದೇನು?

Webdunia
ಗುರುವಾರ, 7 ಮಾರ್ಚ್ 2019 (16:10 IST)
ಕ್ಷುಲ್ಲಕ ಕಾರಣಕ್ಕಾಗಿ ಹಲ್ಲೆಗೊಳಗಾಗಿದ್ದ ನಿವೃತ್ತ CRPF ಯೋಧನ ಮನೆಗೆ ಸಚಿವರು ಭೇಟಿ ನೀಡಿದರು.

ಪರಮೇಶ್ವರಪ್ಪ ಬಾರಂಗಿ ಮನೆಗೆ ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ಖಾನ್ ಭೇಟಿ ನೀಡಿದ್ರು. ಬ್ಯಾಡಗಿ ತಾಲೂಕಿನ ಕುಮ್ಮೂರು ಗ್ರಾಮದ ಯೋಧನ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿ, ಮಾತನಾಡಿದ ಸಚಿವರು ಹಲ್ಲೆಗೊಳಗಾದ ಯೋಧನಿಗೆ ಬೆಂಗಳೂರು ವಿಕ್ರಂ ಆಸ್ಪತ್ರೆಯಲ್ಲಿ ಹಲ್ಲು ನೋವಿಗೆ ಚಿಕಿತ್ಸೆ ಕೊಡಿಸುತ್ತೇನೆ. ಪೊಲೀಸ್ ಅಥವಾ ಮೆಟ್ರೊ ಇಲಾಖೆಯಲ್ಲಿ ಉದ್ಯೋಗ ಕೊಡಿಸುವುದಾಗಿ ಭರವಸೆ ನೀಡಿದ್ರು. ತಪ್ಪಿತಸ್ಥರಿಗೆ ಈಗಾಗಲೇ ಜೈಲು ಶಿಕ್ಷೆಯಾಗಿದೆ. ಈ ತರಹದ ಘಟನೆ ನಡೆದಿದ್ದು ತಪ್ಪು, ಇದಕ್ಕೆ ರಾಜಕೀಯ ಅಥವಾ ಕೋಮು ಭಾವನೆ ಬೆರೆಸುವುದು ಬೇಡ ಎಂದು ತಿಳಿಸಿದ್ರು. ಇನ್ನೂ ಲೋಕಸಭಾ ಚುನಾವಣೆ ವಿಷಯವಾಗಿ ಮಾತನಾಡಿದ ಸಚಿವರು, ಜಿಲ್ಲಾ ಉಸ್ತುವಾರಿ ಸಚಿವನಾಗಿ ನನಗೆ ಇಲ್ಲಿಯ ಎಮ್ ಪಿ ಹೆಸರು ಗೊತ್ತಿಲ್ಲ, ಇಲ್ಲಿಯ ಜನಸಾಮಾನ್ಯರು ಎಮ್ ಪಿ ಎಲ್ಲಿದ್ದಾರೆ ಅಂತಾ ಕೇಳುತ್ತಿದ್ದಾರೆ ಎಂದ್ರು. 

ಕಳೆದ ಬಾರಿ ಹಾವೇರಿ ಲೋಕಸಭಾ ಕ್ಷೇತ್ರದಿಂದ ಸಲೀಂ ಅಹಮದ್ ಅಲ್ಪ ಮತಗಳ ಅಂತರದಿಂದ ಸೋಲು ಅನುಭವಿಸಿದ್ದಾರೆ. ಬದಲಾವಣೆ ಬೇಕು ಅಂತಾ ಜನ ಭಾವಿಸುತ್ತಿದ್ದಾರೆ ಎಂದ್ರು. ಮೋದಿ ಹವಾದಲ್ಲಿ ಕಳೆದ ಬಾರಿ ಸಂಸದ ಶಿವಕುಮಾರ ಉದಾಸಿ ಗೆದ್ದಿದ್ದಾರೆ. ಈಗ ಮೋದಿ ಹವಾ ಹೋಗಿ ಎರಡು ವರ್ಷವಾಯಿತು. ಇನ್ನೂ ಮೋದಿ ಪ್ರಧಾನಿ ಆದಾಗ ಆಚ್ಚೆ ದಿನ್ ಆಯೇಗಾ ಅಂದ್ರು. ಆದ್ರೆ ಒಳ್ಳೆ ದಿನ ಬಂದಿದ್ದು ದೇಶಕ್ಕಲ್ಲ ಮೋದಿಯ ಹತ್ತು ಲಕ್ಷದ ಕೋಟ್ ಹಾಕಿದರಲ್ಲ ಅವರಿಗೆ ಒಳ್ಳೆಯ ದಿನ ಬಂತು ಎಂದ್ರು.  



ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

India Pakistan: ಪಾಕಿಸ್ತಾನದ ಮೇಲೆ ಯುದ್ಧ ಮಾಡುವ ತಾಕತ್ತು ಭಾರತಕ್ಕಿಲ್ಲ, ಅದಕ್ಕೆ ನಾವು ಬಿಡುವುದೂ ಇಲ್ಲ: ಉಗ್ರ ಗುರುಪತ್ವಂತ್ ಸಿಂಗ್ ಪನ್ನು

18 ಶಾಸಕರ ಅಮಾನತು ರದ್ದು ಮಾಡಲು ವಿಜಯೇಂದ್ರ ಆಗ್ರಹ

Pehalgam ದಾಳಿಯಾದ್ರೂ ಪ್ರವಾಸಿಗರಿಗೆ ಚಿಂತೆಯಿಲ್ಲ: ದಾಳಿ ನಡೆದ ಕಾಶ್ಮೀರಕ್ಕೆ ಪ್ರವಾಸಿಗರ ದಂಡು

Pehalgam attack: ಪಹಲ್ಗಾಮ್ ಉಗ್ರರ ಸಂಚು ಹೇಗಿತ್ತು, ದಾಳಿಗೆ ಮುನ್ನ ಏನು ಮಾಡಿದ್ದರು ಇಲ್ಲಿದೆ ವಿವರ

Arecanut price today: ಅಡಿಕೆ ಬೆಳೆಗಾರರಿಗೆ ಇಂದು ಬಂಪರ್ ಸುದ್ದಿ, ಇಂದಿನ ದರ ಎಷ್ಟಾಗಿದೆ ನೋಡಿ

ಮುಂದಿನ ಸುದ್ದಿ
Show comments