Webdunia - Bharat's app for daily news and videos

Install App

ಮನೆ ಕೆಲಸದಾಕೆಯಿಂದ ದರೋಡೆ: ಕೋಟಿ ರೂ. ಮೌಲ್ಯದ ಒಡವೆ ಕಳವು

Webdunia
ಗುರುವಾರ, 24 ಫೆಬ್ರವರಿ 2022 (10:10 IST)
ಬೆಂಗಳೂರು: ಮನೆ ಕೆಲಸದಾಕೆಯ ಸಹಾಯದಿಂದ ನೇಪಾಳಿ ಗ್ಯಾಂಗ್ ಮನೆಗೆ ಕನ್ನ ಹಾಕಿ 1 ಕೋಟಿ ರೂ. ದರೋಡೆ ಮಾಡಿದ ಘಟನೆ ಬಸವೇಶ್ವರ ನಗರದಲ್ಲಿ ನಡೆದಿದೆ.

ಪತಿ ಮತ್ತು ಪುತ್ರ ಕಾಲೇಜಿಗೆ ಹೋದ ಮೇಲೆ ಮನೆ ಒಡತಿ ಕೆಲಸದಾಕೆಯನ್ನು ಬಿಟ್ಟು ದೇವಸ್ಥಾನಕ್ಕೆ ಹೋಗಿದ್ದಳು. ಈ ವೇಳೆ ಮನೆ ಕೆಲಸದಾಕೆ ತನ್ನ ಪತಿ ಮತ್ತು ನೇಪಾಳಿ ಗ್ಯಾಂಗ್ ನ್ನು ಕರೆದುಕೊಂಡು ಮನೆಗೆ ಬಂದಿದ್ದಳು.

ಮನೆಯಲ್ಲಿದ್ದ 94 ಲಕ್ಷ ರೂ. ಮೌಲ್ಯದ ಚಿನ್ನ, 10 ಲಕ್ಷ ರೂ. ನಗದು ದೋಚಿದ್ದಾರೆ. ದರೋಡೆಕೋರರ ಗುಂಪು ಮನೆಯಲ್ಲಿದ್ದಾಗಲೇ ಒಡತಿ ಮನೆಗೆ ಬಂದಿದ್ದಾಳೆ. ಬಾಗಿಲು ತೆಗೆಯಲು ತಡವಾದಾಗ ಮಹಿಳೆ ಪ್ರಶ್ನಿಸಿದ್ದಾಳೆ. ಇದಕ್ಕೆ ಮನೆಕೆಲಸದಾಕೆ ವಾಶ್ ರೂಂನಲ್ಲಿದ್ದೆ ಎಂದು ಸುಳ್ಳು ಹೇಳಿದ್ದಾಳೆ. ಮನೆ ಒಳಗೆ ಬಂದ ಮೇಲೆ ಒಡತಿಯ ಬಾಯಿಗೆ ಬಟ್ಟೆ ತುರುಕಿ, ಕೈ ಕಾಲು ಕಟ್ಟಿ ಹಾಕಿ ಗ್ಯಾಂಗ್ ತನ್ನ ಕೆಲಸ ಮುಗಿಸಿದೆ.  ಈ ಬಗ್ಗೆ ಮಾಲಿಕರು ಬಸವೇಶ್ವರ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments