Select Your Language

Notifications

webdunia
webdunia
webdunia
webdunia

ಸಂದರ್ಶನಕ್ಕೆ ಬಂದವರು ಮಸಣ ಸೇರಿದರು

ಸಂದರ್ಶನಕ್ಕೆ ಬಂದವರು ಮಸಣ ಸೇರಿದರು
ಚಿತ್ರದುರ್ಗ , ಶನಿವಾರ, 30 ಏಪ್ರಿಲ್ 2016 (09:01 IST)
ಚಳ್ಳಕೆರೆ ತಾಲ್ಲೂಕಿನ ಹೆಗ್ಗೆರೆ ಗೇಟ್ ಬಳಿ ಭೀಕರ ಸರಣಿ ಅಪಘಾತ ನಡೆದಿದ್ದು  ಒಟ್ಟು 8 ಜನರು ದುರ್ಮರಣವನ್ನಪ್ಪಿದ್ದಾರೆ. 
 
ರಾಷ್ಟ್ರೀಯ ಹೆದ್ದಾರಿ 150 (ಎ) ನಲ್ಲಿ ಬೆಳಗ್ಗೆ ಸುಮಾರು 4.30 ರ ವೇಳೆಗೆ ಖಾಸಗಿ ಬಸ್‌‌‌, ಸರ್ಕಾರಿ ಬಸ್‌‌ ಮತ್ತು ಕ್ರೂಸರ್‌ ನಡುವೆ ಅಪಘಾತ ಸಂಭವಿಸಿದೆ. ಕೆಎಸ್‌‌ಆರ್‌ಟಿಸಿ ಬಸ್‌‌- ಕ್ರೂಸರ್‌ ಮುಖಾಮುಖಿ‌ ಡಿಕ್ಕಿಯಾಗಿದ್ದು ಹಿಂದಿನಿಂದ ಬರುತ್ತಿದ್ದ ಖಾಸಗಿ ಬಸ್‌ ಸಹ ಕ್ರೂಸರ್‌ಗೆ ಡಿಕ್ಕಿ ಹೊಡೆದಿದೆ. ಕ್ರೂಸರ್ ಬೆಂಗಳೂರಿನಿಂದ ಬಳ್ಳಾರಿಗೆ ವಾಪಸ್ಸಾಗುತ್ತಿದ್ದರೆ, ಸರ್ಕಾರಿ ಬಸ್ ದೇವದುರ್ಗದಿಂದ ಬೆಂಗಳೂರಿನ ಕಡೆ ಸಾಗುತ್ತಿತ್ತು. 
 
ಘಟನೆಯಲ್ಲಿ ಕ್ರೂಸರ್ ಚಾಲಕ ಸೇರಿ 7 ವಿದ್ಯಾರ್ಥಿನಿಯರು ಸೇರಿ 8 ಜನರು ಸಾವನ್ನಪ್ಪಿದ್ದಾರೆ. ಮೃತರನ್ನು ಕ್ರೂಸರ್ ಚಾಲಕ ಚಂದ್ರೇಗೌಡ(35), ವಿದ್ಯಾರ್ಥಿನಿಯರಾದ ಶಾಂತಿ (20) , ಸುಧಾ (20), ಜಯಶ್ರೀ (21), ಶೃತಿ (21), ಹರ್ಷಿತಾ(21) ಸರಿತಾ(21), ಭಾರತಿ(21) ಎಂದು ಗುರುತಿಸಲಾಗಿದ್ದು ಇವರೆಲ್ಲರೂ ಬಳ್ಳಾರಿ ಜಿಲ್ಲೆಯ ಸಿರಗುಪ್ಪದ ನಿವಾಸಿಗಳಾಗಿದ್ದಾರೆ. 
 
ವಿದ್ಯಾರ್ಥಿನಿಯರು ಬೆಂಗಳೂರಿನಲ್ಲಿ ಸಂದರ್ಶನ ಮುಗಿಸಿ ಕ್ರೂಸರ್‌‌ನಲ್ಲಿ ಬೆಂಗಳೂರಿನಿಂದ ಬಳ್ಳಾರಿಗೆ ವಾಪಸ್ಸಾಗುತ್ತಿದ್ದರು. ಘಟನೆಯಲ್ಲಿ 7 ಜನರು ಗಂಭೀರವಾಗಿ ಗಾಯಗೊಂಡಿದ್ದು ಅವರನ್ನು ಚಳ್ಳಕೆರೆ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ಚಳ್ಳಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.   

Share this Story:

Follow Webdunia kannada

ಮುಂದಿನ ಸುದ್ದಿ

ನಾಪತ್ತೆಯಾಗಿದ್ದ ಮಾಲೀಕನ ಪತ್ತೆ ಹಚ್ಚಿದ ನಾಯಿಗಳು