Select Your Language

Notifications

webdunia
webdunia
webdunia
webdunia

ಮಳೆ ಪ್ರದೇಶದಲ್ಲಿ ಗೃಹ ಸಚಿವ

ಮಳೆ ಪ್ರದೇಶದಲ್ಲಿ ಗೃಹ ಸಚಿವ
ಹಾವೇರಿ , ಶನಿವಾರ, 8 ಆಗಸ್ಟ್ 2020 (22:33 IST)
ಮಳೆಯಿಂದ ಹಾನಿ ಉಂಟಾದ ಪ್ರದೇಶಗಳಲ್ಲಿ ಗೃಹ ಸಚಿವರು ಭೇಟಿ ನೀಡಿದ್ದರು.

ಹಾವೇರಿ ಜಿಲ್ಲೆಯಲ್ಲಿ ನಿರಂತರವಾಗಿ ಸುರಿದ ಮಳೆಯಿಂದ ಉಂಟಾದ ಹಾನಿ ಪ್ರದೇಶಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಜಿಲ್ಲೆಯ ಎಲ್ಲ ತಾಲ್ಲೂಕುಗಳಲ್ಲಿ ಅಗಸ್ಟ್ ನಲ್ಲಿ ವಾಡಿಕೆಗಿಂತ ಹೆಚ್ಚುವರಿ ಮಳೆಯಾಗುತ್ತಿದೆ.
ವೇಗವಾಗಿ ಬೀಸುತ್ತಿರುವ ಗಾಳಿಯಿಂದ ಮೆಕ್ಕೆಜೋಳ ಬೆಳೆಗೆ  ಸಾಕಷ್ಟು ಹಾನಿಯಾಗಿದೆ.

ಹಾನಗಲ್, ಶಿಗ್ಗಾಂವಿ ಹಾಗೂ ಸವಣೂರಿನಲ್ಲಿ ಮಳೆಯಿಂದ ಮನೆಗಳು ಹಾನಿಯಾಗಿವೆ‌. ಹಾನಿಯಾದ ಎಲ್ಲ ಮನೆಗಳನ್ನು ಸರ್ವೇ ಮಾಡುವ ಮೂಲಕ ಪರಿಹಾರ ನೀಡಲು ಅಗತ್ಯ ಕ್ರಮ ವಹಿಸಲಾಗಿದೆ ಎಂದು ತಿಳಿಸಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

100 ಕೋಟಿ ರೂ. ಮಾನಹಾಕಿ ಕೇಸ್ ಹಾಕಿದ ಮುಖ್ಯಮಂತ್ರಿ