Select Your Language

Notifications

webdunia
webdunia
webdunia
webdunia

ಶೋಬಾ ಕರಂದ್ಲಾಜೆ ಬಾಯಿಗೆ ಬೀಗ ಹಾಕಿಸಬೇಕು: ಈಶ್ವರಪ್ಪ ಬೆಂಬಲಿಗರು

ಶೋಭಾ ಕರಂದ್ಲಾಜೆ
ಬೆಂಗಳೂರು , ಶನಿವಾರ, 2 ಜುಲೈ 2016 (14:00 IST)
ಉಡುಪಿ ಕ್ಷೇತ್ರದ ಸಂಸದೆ ಶೋಭಾ ಕರಂದ್ಲಾಜೆ ಖಾಸಗಿ ಚಾನೆಲ್‌ಗಳಿಗೆ ಸಂದರ್ಶನ ನೀಡಿ ಬಾಯಿಗೆ ಬಂದಂತೆ ಮಾತನಾಡುತ್ತಿರುವುದರಿಂದ ಅವರ ಬಾಯಿಗೆ ಬೀಗ ಹಾಕಿಸಲು ಹೈಕಮಾಂಡ್‌ಗೆ ದೂರು ನೀಡುತ್ತೇವೆ ಎಂದು ಬಿಜೆಪಿ ಅತೃಪ್ತರು ಗುಡುಗಿದ್ದಾರೆ.
 
ಪದಾಧಿಕಾರಿಗಳ ನೇಮಕ ಕುರಿತಂತೆ ಖಾಸಗಿ ಚಾನೆಲ್‌ಗಳಿಗೆ ಸಂದರ್ಶನ ನೀಡಿದ ಕರಂದ್ಲಾಜೆ, ಪಕ್ಷದ ನಿಯಮಗಳಿಗೆ ಎಲ್ಲರು ಬದ್ಧರಾಗಿರಬೇಕು. ರಾಜ್ಯಧ್ಯಕ್ಷ ಯಡಿಯೂರಪ್ಪ ತೆಗೆದುಕೊಂಡ ತೀರ್ಮಾನವನ್ನು ಗೌರವಿಸಬೇಕು. ಬಿಜೆಪಿ ಅತೃಪ್ತ ನಾಯಕರು ಪಕ್ಷ ವಿರೋಧಿ ಧೋರಣೆ ತಳೆದಿದ್ದಾರೆ ಎಂದು ಆರೋಪಿಸಿದ್ದರು
 
ಬಿಜೆಪಿ ಹಿರಿಯ ಮುಖಂಡ ಕೆ.ಎಸ್.ಈಶ್ವರಪ್ಪ ಅವರಿಗೆ ನನ್ನ ವಯಸ್ಸಿಗಿಂತಲೂ ಹೆಚ್ಚಿನ ಅನುಭವವಿದೆ. ಪದಾಧಿಕಾರಿಗಳ ನೇಮಕದಲ್ಲಿ ನಾನು ಯಾವುದೇ ರೀತಿಯ ಹಸ್ತಕ್ಷೇಪ ಮಾಡಿಲ್ಲ. ಇನ್ನೊಬ್ಬರ ವಿಷಯದಲ್ಲಿ ಹಸ್ತಕ್ಷೇಪ ಮಾಡುವವರಿಗೆ ಇಂತಹ ವಿಷಯಗಳು ಗೊತ್ತಿರುತ್ತವೆ ಎಂದು ಟಾಂಗ್ ನೀಡಿದ್ದರು.
 
ಪದಾಧಿಕಾರಿಗಳ ನೇಮಕದಲ್ಲಿ ಕರಂದ್ಲಾಜೆ ಹಸ್ತಕ್ಷೇಪದಿಂದ ಗೊಂದಲಗಳು ಉಂಟಾಗಿವೆ ಎಂದು ಈಶ್ವರಪ್ಪ ಪರ ಬೆಂಬಲಿಗರು ಕಿಡಿಕಾರಿದ್ದಾರೆ. 

 ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಭಿನ್ನಮತ ದೆಹಲಿಗೆ ಶಿಫ್ಟ್: ದೆಹಲಿಗೆ ಹೊರಟ ಈಶ್ವರಪ್ಪ, ಅವರ ಬೆಂಬಲಿಗರು