Webdunia - Bharat's app for daily news and videos

Install App

ಹಾಸನಾಂಬ ಜಾತ್ರೆಗೆ ಸಿಎಂ ಸಿದ್ದರಾಮಯ್ಯಗೆ ಆಹ್ವಾನ: ಯಾವಾಗಿನಿಂದ ಇಲ್ಲಿದೆ ವಿವರ

Krishnaveni K
ಗುರುವಾರ, 17 ಅಕ್ಟೋಬರ್ 2024 (09:53 IST)
ಬೆಂಗಳೂರು: ಇತಿಹಾಸ ಪ್ರಸಿದ್ಧ ಹಾಸನಾಂಬ ದೇವಾಲಯ ಜಾತ್ರೆಗೆ ಸಿಎಂ ಸಿದ್ದರಾಮಯ್ಯಗೆ ಜಿಲ್ಲಾಡಳಿತ ವತಿಯಿಂದ ಅಧಿಕೃತ ಆಹ್ವಾನ ನೀಡಲಾಗಿದೆ. ಹಾಸನಾಂಬ ದೇವಾಲಯ ತೆರೆಯುವ ದಿನಾಂಕ ಇತ್ಯಾದಿ ವಿವರ ಇಲ್ಲಿದೆ ನೋಡಿ.

ಹಾಸನಾಂಬ ದೇಗುಲವನ್ನು ವರ್ಷಕ್ಕೊಮ್ಮೆ ಮಾತ್ರ ಭಕ್ತರ ದರ್ಶನಕ್ಕೆ ತೆರೆಯಲಾಗುತ್ತದೆ. ಈ ಬಾರಿ ಅಕ್ಟೋಬರ್ 24 ರಿಂದ ನವೆಂಬರ್ 3ರ ವರೆಗೆ ನಡೆಯಲಿದೆ.  ಹಾಸನಾಂಬ ಜಾತ್ರೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ  ಜಿಲ್ಲಾಡಳಿತದ ವತಿಯಿಂದ ಅಧಿಕೃತವಾಗಿ ಆಹ್ವಾನ‌ ನೀಡಲಾಯಿತು.

ಸಂಸದರಾದ ಶ್ರೇಯಸ್ ಪಟೇಲ್ , ಶಾಸಕರಾದ ಶಿವಲಿಂಗೇಗೌಡ, ಜಿಲ್ಲಾಧಿಕಾರಿ ಸಿ.ಸತ್ಯಭಾಮ , ಜಿಲ್ಲಾ ಸರ್ಜನ್ ಕೃಷ್ಣಮೂರ್ತಿ, ಮುಖಂಡರಾದ ಹೆಚ್.ಕೆ.ಮಹೇಶ್  ಉಪಸ್ಥಿತರಿದ್ದರು.  ಈ ಬಾರಿಯೂ ಎಂದಿನಂತೇ ಲಕ್ಷಾಂತರ ಮಂದಿ ಹಾಸನಾಂಬ ದೇವಾಲಯ ದರ್ಶನಕ್ಕೆ ಆಗಮಿಸುವ ನಿರೀಕ್ಷೆಯಿದೆ.

ಅತ್ಯಂತ ಕಾರಣಿಕ ದೇವಾಲಯ ಇದಾಗಿದ್ದು, ಜಾತ್ರೆಯ ಕೊನೆಯ ದಿನ ಮುಚ್ಚಲಾಗುವ ದೇವಾಲಯದ ಗರ್ಭಗುಡಿಯನ್ನು ಮುಂದಿನ ವರ್ಷ ಜಾತ್ರೆ ಸಂದರ್ಭದಲ್ಲಿಯೇ ತೆರೆಯಲಾಗುತ್ತದೆ. ಹಿಂದಿನ ವರ್ಷ ಹಚ್ಚಿಟ್ಟ ದೀಪ ಮುಂದಿನ ವರ್ಷದವರೆಗೂ ಹಾಗೆಯೇ ಉರಿಯುತ್ತಿರುತ್ತದೆ ಎನ್ನುವುದೇ ಇಲ್ಲಿಯ ವಿಶೇಷ. ಸಾರ್ವಜನಿಕರು ಮಾತ್ರವಲ್ಲದೆ, ಸಾಕಷ್ಟು ರಾಜಕೀಯ ಗಣ್ಯರು, ಸೆಲೆಬ್ರಿಟಿಗಳೂ ಇಲ್ಲಿಗೆ ಬಂದು ದೇವಿಯ ದರ್ಶನ ಪಡೆದು ತೆರಳುತ್ತಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಜಾರ್ಖಂಡ್ ವಿದ್ಯಾರ್ಥಿಗಳ ಬಗ್ಗೆ ಕೇಳುತ್ತಿದ್ದಂತೇ ಎಲ್ಲವನ್ನೂ ಸಂಸತ್ ನಲ್ಲಿ ಚರ್ಚಿಸಕ್ಕಾಗಲ್ಲ ಎಂದು ಹೊರಟೇ ಹೋದ ಮಲ್ಲಿಕಾರ್ಜುನ ಖರ್ಗೆ Video

ಸದನದಲ್ಲಿ ಹಲವು ಜಟಾಪಟಿ ನಡುವೆ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡ ಅಮಿತ್‌ ಶಾ, ರಾಹುಲ್ ಗಾಂಧಿ, ಎಲ್ಲಿ ಗೊತ್ತಾ, Video

ಕರ್ನಾಟಕ ಬಂದ್ ದಿನ ಬೆಂಗಳೂರಿನ ಶಾಲೆಗಳಿಗೆ ರಜೆಯಿರುತ್ತಾ, ಇಲ್ಲಿದೆ ಉತ್ತರ

ರಾಜ್ಯದಲ್ಲಿ ಗೂಂಡಾಗಿರಿ ಸರಕಾರ- ಆರ್.ಅಶೋಕ್

ಕರ್ನಾಟಕ ಬಂದ್‌ ಕೂಗಿನ ಬೆನ್ನಲ್ಲೇ ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ಕರ್ನಾಟಕಕ್ಕೆ ಮತ್ತೆ ಆಘಾತ

ಮುಂದಿನ ಸುದ್ದಿ
Show comments