Webdunia - Bharat's app for daily news and videos

Install App

ಹಿರಿಯಡ್ಕ ಪೊಲೀಸ್ ಠಾಣೆಯ ಅಧಿಕಾರಿ ಅರೆಸ್ಟ್

Webdunia
ಸೋಮವಾರ, 4 ಜೂನ್ 2018 (19:31 IST)
ದನದ ವ್ಯಾಪಾರಿ ಹುಸೇನಬ್ಬ( 62) ಸಂಶಯಾಸ್ಪದ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿರಿಯಡ್ಕ ಎಸ್ಸೈ ಬಂಧನ ಆಗಿದೆ ಎಂದು ಮೂಲಗಳು ತಿಳಿಸಿವೆ. 
ಡಿ.ಎನ್.ಕುಮಾರ್ ಬಂಧಿತ ಹಿರಿಯಡ್ಕ ಠಾಣಾ ಎಸ್ಸೈ ಆಗಿದ್ದಾರೆ. ಪೊಲೀಸ್ ಜೀಪು ಚಾಲಕ ಗೋಪಾಲ್ ಹಾಗೂ ಹೆಡ್ ಕಾನ್ ಸ್ಟೇಬಲ್ ಮೋಹನ ಕೋತ್ವಾಲ್ ಬಂಧನವಾಗಿದೆ ಎನ್ನಲಾಗಿದೆ. 
 
ಬಜರಂಗದಳ ಕಾರ್ಯಕರ್ತರಿಂದ ಹಲ್ಲೆಗೊಳಗಾಗಿದ್ದ ಹುಸೇನಬ್ಬ ಸಾವನ್ನಪ್ಪಿದ್ದರು. ಘಟನಾ ಸ್ಥಳದಲ್ಲಿದ್ದ ಎಸ್ಸೈ ಕುಮಾರ್ ಕೃತ್ಯ ಬೆಳಕಿಗೆ ಬಂದ ನಂತರ ಎಸ್ಸೈ ಡಿ.ಎನ್.ಕುಮಾರ್ ಅಮಾನತಾಗಿದ್ದರು. 
 
ಬಜರಂಗದಳ ಕಾರ್ಯಕರ್ತರು ಹುಸೇನಬ್ಬ ಮೇಲೆ ಹಲ್ಲೆ ಮಾಡಿದ್ದರು. ಅಕ್ರಮ ಗೋ ಸಾಗಾಟದ ಕಾರಣಕ್ಕೆ ನಡೆದಿದ್ದ ಹಲ್ಲೆ ಘಟನೆ ಅದಾಗಿತ್ತು. ಹಲ್ಲೆ ಗೊಳಗಾದ ಹುಸೇನಬ್ಬ ಪೊಲೀಸ್ ಜೀಪಿನಲ್ಲಿ ಸಾವನ್ನಪ್ಪಿದ್ದರು. 
 
ಆರೋಪಿಗಳ ಸಹಾಯ ಪಡೆದು ಶವವನ್ನು ಸಾಗಿಸಿದ್ದ ಎಸ್ಸೈ ಕುಮಾರ್. ಹೃದಯಾಘಾತದಿಂದ ಸತ್ತರೆಂದು ಬಿಂಬಿಸುವ ಪ್ರಯತ್ನ ನಡೆಸಿದ್ದರು. ಘಟನಾ ಸ್ಥಳದಿಂದ ಒಂದು ಕಿಮೀ ದೂರ ಶವ ಇರಿಸಿದ್ದರು ಎಂದು ಆರೋಪಿಸಲಾಗಿದೆ. 
 
ಈ ಕಾರಣಕ್ಕೆ ಮೂವರು ಪೊಲೀಸರ ದಸ್ತಗಿರಿ ಮಾಡಲಾಗಿದೆ. ಸೂರಿ, ಪ್ರಸಾದ್, ಉಮೇಶ್, ಚೇತನ್, ಶೈಲೇಶ್,ಗಣೇಶ್ ನಾಯ್ಕ್ ರತನ್ ಈಗಾಗಲೇ ಬಂಧನವಾಗಿದ್ದಾರೆ. ಬಂಧಿತರು ಭಜರಂಗದಳ ಕಾರ್ಯಕರ್ತರು ಆಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
 
ಮೃತ ಹುಸೇನಬ್ಬ ಮಂಗಳೂರು ಜೋಕಟ್ಟೆ ನಿವಾಸಿಯಾಗಿದ್ದಾರೆ. ಮೇ.30 ರಂದು ಇಂತಹ ಹೀನ ಕೃತ್ಯ ನಡೆದಿತ್ತು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಸೆ.1ರಂದು ಧರ್ಮಸ್ಥಳ ಚಲೋ, ಬೃಹತ್ ಸಮಾವೇಶ:ವಿಜಯೇಂದ್ರ

ಧರ್ಮಸ್ಥಳದ ವಿರುದ್ಧ ದೊಡ್ಡ ಷಡ್ಯಂತ್ರ: ಎಸ್.ಆರ್.ವಿಶ್ವನಾಥ್

ಟಿಪ್ಪು ಸುಲ್ತಾನ್ ದಸರಾ ಮಾಡಿದ್ರು: ತನ್ವೀರ್ ಸೇಠ್ ಹೇಳಿಕೆ

ಬಾನು ಮುಷ್ತಾಕ್ ಹಿಂದೂ ಸಂಸ್ಕೃತಿ ಒಪ್ಪಿ ಬರ್ತಾರಾ: ಬಿವೈ ವಿಜಯೇಂದ್ರ

ಧರ್ಮಸ್ಥಳ ಪ್ರಕರಣದಲ್ಲಿ ಎಸ್ಐಟಿಗೆ ಸೂಚಿಸಿದ ದೆಹಲಿ ನಾಯಕ ಯಾರು: ತೇಜಸ್ವಿ ಸೂರ್ಯ

ಮುಂದಿನ ಸುದ್ದಿ
Show comments