Select Your Language

Notifications

webdunia
webdunia
webdunia
webdunia

ಮಸೀದಿ ರಸ್ತೆಯಲ್ಲೇ ಗಣೇಶ ಮೆರವಣಿಗೆ ಮಾಡ್ತೀವಿ, ಇನ್ಸ್ ಪೆಕ್ಟರ್ ಧನಂಜಯ್ ಕಣ್ತುಂಬಿಕೊಳ‍್ಳಲಿ: ಹಿಂದೂ ಸಂಘಟನೆ ಸವಾಲ್

Hindu Jagarana Vedike
ಮೈಸೂರು: ಮಸೀದಿ ರಸ್ತೆಯಲ್ಲೇ ಗಣೇಶ ಮೆರವಣಿಗೆ ಮಾಡ್ತೀವಿ, ಇನ್ಸ್ ಪೆಕ್ಟರ್ ಧನಂಜಯ್ ಕಣ್ತುಂಬಿಕೊಳ್ಳಲಿ ಎಂದು ಹಿಂದೂ ಜಾಗರಣ ವೇದಿಕೆ ಸವಾಲು ಹಾಕಿದೆ.

ಮಸೀದಿ ರಸ್ತೆಯಲ್ಲಿ ಮೆರವಣಿಗೆ ಹೋದರೆ ಗ್ರಹಚಾರ ಬಿಡಿಸ್ತೀವಿ ಎಂದಿ ಟಿ ನರಸೀಪುರ ಇನ್ಸ್ ಪೆಕ್ಟರ್ ಧನಂಜಯ್ ಧಮ್ಕಿ ಹಾಕಿದ್ದು ವಿವಾದಕ್ಕೆ ಕಾರಣವಾಗಿತ್ತು. ಇದರ ವಿರುದ್ಧ ಬಿಜೆಪಿ, ಹಿಂದೂ ಸಂಘಟನೆಗಳು ಈಗಾಗಲೇ ಪ್ರತಿಭಟನೆಯನ್ನೂ ನಡೆಸಿವೆ.

ಇದರ ಬೆನ್ನಲ್ಲೇ ಈಗ ಹಿಂದೂ ಜಾಗರಣ ವೇದಿಕೆ ಮಸೀದಿ ರಸ್ತೆಯಲ್ಲೇ ಗಣೇಶ ಮೆರವಣಿಗೆ ಮಾಡಲು ಹೊರಟಿದೆ. ಟಿ ನರಸೀಪುರದ ಪೊಲೀಸ್ ಠಾಣೆಯ ತುಸು ದೂರದಲ್ಲೇ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗಿದೆ. ಸೆಪ್ಟೆಂಬರ್ 18 ರಂದು ಗಣಪತಿ ಶೋಭಾಯಾತ್ರೆ ನಡೆಸಲು ಹಿಂದೂ ಜಾಗರಣ ವೇದಿಕೆ ತಯಾರಿ ನಡೆಸಿದೆ. ಇದಕ್ಕಾಗಿ ರಾಜ್ಯದ ಮೂಲೆ ಮೂಲೆಗಳಿಂದ ಸುಮಾರು 5 ಸಾವಿರ ಕಾರ್ಯಕರ್ತರನ್ನು ಜಮಾವಣೆ ಮಾಡಲು ಹೊರಟಿದೆ. ಇನ್ಸ್ ಪೆಕ್ಟರ್ ಧನಂಜಯ್ ಮುಂದೆಯೇ ವೈಭವದ ಶೋಭಾಯಾತ್ರೆ ನಡೆಸುತ್ತೇವೆ, ಅವರು ಕಣ್ತುಂಬಿಕೊಳ್ಳಲಿ ಎಂದು ಹಿಂದೂ ಜಾಗರಣ ವೇದಿಕೆ ಸವಾಲು ಹಾಕಿದೆ.

Share this Story:

Follow Webdunia kannada

ಮುಂದಿನ ಸುದ್ದಿ

Karnataka Weather: ಗುಡ್ ನ್ಯೂಸ್, ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಸಣ್ಣ ಮಳೆ ಸಾಧ್ಯತೆ