Select Your Language

Notifications

webdunia
webdunia
webdunia
webdunia

ಕಂಬಳದ ಪರವಾಗಿಯೇ ರಾಜ್ಯ ಹೈಕೋರ್ಟ್ ತೀರ್ಪು: ಯಡಿಯೂರಪ್ಪ ವಿಶ್ವಾಸ

ಕಂಬಳದ ಪರವಾಗಿಯೇ ರಾಜ್ಯ ಹೈಕೋರ್ಟ್ ತೀರ್ಪು: ಯಡಿಯೂರಪ್ಪ ವಿಶ್ವಾಸ
ಮಂಗಳೂರು , ಸೋಮವಾರ, 23 ಜನವರಿ 2017 (16:01 IST)
ಕಂಬಳದ ಪರವಾಗಿಯೇ ರಾಜ್ಯ ಹೈಕೋರ್ಟ್ ತೀರ್ಪು ನೀಡುವ ವಿಶ್ವಾಸ ಇದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅಭಿಪ್ರಾಯಪಟ್ಟಿದ್ದಾರೆ.
 
ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಂಬಳ ಜನಪದ ಕ್ರೀಡೆ. ಇದರಿಂದ ಇದುವರೆಗೂ ಯಾವುದೇ ಹಾನಿಯಾಗಿಲ್ಲ. ಕಂಬಳದ ಕೋಣವನ್ನು ಮಗುವಿನಂತೆ ನಡೆಸಿಕೊಳ್ಳಲಾಗುತ್ತದೆ. ಈ ನಿಟ್ಟಿನಲ್ಲಿ ರಾಜ್ಯ ಸರಕಾರ, ಕೇಂದ್ರ ಸರಕಾರಕ್ಕೆ ಸೂಕ್ತ ರೀತಿಯಲ್ಲಿ ಮನವರಿಕೆ ಮಾಡಿಕೊಡಬೇಕು ಎಂದು ಆಗ್ರಹಿಸಿದರು.
 
ಜನವರಿ 25 ರಂದು ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಮಂಗಳೂರಿಗೆ ಆಗಮಿಸಲಿದ್ದು, ಈ ವೇಳೆ ಅವರ ಜೊತೆ ಕಂಬಳದ ಕುರಿತಂತೆ ಬಿಜಿಪಿ ನಾಯಕರು ಚರ್ಚಿಸಲಿದ್ದಾರೆ ಎಂದರು.  
 
ಬ್ರಿಗೇಡ್ ಕುರಿತು ಮಾತನಾಡಲ್ಲ....
 
ರಾಯಣ್ಣ ಬ್ರಿಗೇಡ್ ಕುರಿತು ಪಕ್ಷದ ವರಿಷ್ಠರ ಗಮನಕ್ಕೆ ತರಲಾಗಿದೆ. ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಅವರ ಮನವೊಲಿಸುವ ಕುರಿತು ವರಿಷ್ಠರೇ ನಿರ್ಧರಿಸಲಿದ್ದಾರೆ. ಪಕ್ಷದಲ್ಲಿ ನಾನು ಏಕಪಕ್ಷೀಯ ನಿರ್ಧಾರ ಕೈಗೊಳ್ಳುತ್ತೇನೆ ಎನ್ನುವ ಆರೋಪದಲ್ಲಿ ಸತ್ಯಾಂಶ ಇಲ್ಲ ಎಂದು ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ತಿಳಿಸಿದರು. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಶ್ರೀಮಂತ ಮಠಗಳಿಗೆ ಹಣ ನೀಡಲು ಸಾಧ್ಯವಿಲ್ಲ:ಈಶ್ವರಪ್ಪಗೆ ಸಚಿವ ಅಂಜನೇಯ ತಿರುಗೇಟು