Select Your Language

Notifications

webdunia
webdunia
webdunia
webdunia

ಜಂತಕಲ್ ಮೈನಿಂಗ್ ಅಕ್ರಮ: ಗಗನ್ ಬಡೇರಿಯಾಗೆ ನಿರೀಕ್ಷಣಾ ಜಾಮೀನು ಮಂಜೂರು

ಜಂತಕಲ್ ಮೈನಿಂಗ್ ಅಕ್ರಮ: ಗಗನ್ ಬಡೇರಿಯಾಗೆ ನಿರೀಕ್ಷಣಾ ಜಾಮೀನು ಮಂಜೂರು
ಬೆಂಗಳೂರು , ಬುಧವಾರ, 12 ಜುಲೈ 2017 (17:00 IST)
ಜಂತಕಲ್ ಮೈನಿಂಗ್ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಐಎಎಸ್ ಅಧಿಕಾರಿ ಗಂಗರಾಮ್ ಬಡೇರಿಯಾ ಪುತ್ರ ಗಗನ್ ಬಡೇರಿಯಾಗೆ ಹೈಕೋರ್ಟ್ ಏಕಸದಸ್ಯ ಪೀಠ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.

ಗಂಗಾರಾಮ್ ಬಡೇರಿಯಾ ಗಣಿ ಇಲಾಖೆ ನಿರ್ದೇಶಕರಾಗಿದ್ದಾಗ ಅಕ್ರಮವಾಗಿ ಜಂತಕಲ್ ಮೈನಿಂಗ್`ಗೆ ಪರ್ಮಿಟ್ ನೀಡಿದ ಪ್ರಕರಣದಲ್ಲಿ ಗಂಗಾರಾಮ್ ಪುತ್ರ ಗಗನ್`ಗೆ 20 ಲಕ್ಷ ರೂಪಾಯಿ ಕಿಕ್ ಬ್ಯಾಂಕ್ ಸಂದಾಯವಾಗಿರುವ ಆರೋಪವಿದೆ. ಸುಪ್ರೀಂಕೋರ್ಟ್ ನೇಮಿಸಿರುವ ವಿಶೇಷ ತನಿಖಾ ತಂಡ ಎಫ್ಐಆರ್ ದಾಖಲಿಸಿದ್ದು, ವಿಚಾರಣೆ ನಡೆಸುತ್ತಿದೆ. ಇದೇವೇಳೆ, ತನಿಖಾಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾಗುವಂತೆ ಹೈಕೋರ್ಟ್ ಗಗನ್ ಸೂಚಿಸಿದೆ.

ಇದೇ ಪ್ರಕರಣದಲ್ಲಿ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರಿಗೂ ಹೈಕೋರ್ಟ್ ನಿರೀಕ್ಷಣಾ ಜಾಮೀನು ನೀಡಿದೆ. ಇದೇ ಪ್ರಕರಣದಲ್ಲಿ ಮಾಜಿ ಸಚಿವ ಜನಾರ್ದನ ರೆಡ್ಡಿ ಎಸ್`ಐಟಿ ಮುಂದೆ ಹಾಜರಾಗಿ ದಾಖಲೆ ಪತ್ರಗಳನ್ನ ನೀಡಿದ್ದಾರೆ.

 ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

 

Share this Story:

Follow Webdunia kannada

ಮುಂದಿನ ಸುದ್ದಿ

ಕಾಮುಕ ಉಮೇಶ್‌ರೆಡ್ಡಿಗಿಂತಲೂ ವಿಕೃತ ಕಾಮಿ ಅರೆಸ್ಟ್