Select Your Language

Notifications

webdunia
webdunia
webdunia
webdunia

ತಾಯಿ ಜೊತೆ ಜಗಳವಾಡುತ್ತಿದ್ದವ ಕೊಲೆಯಾದ!

ತಾಯಿ ಜೊತೆ ಜಗಳವಾಡುತ್ತಿದ್ದವ ಕೊಲೆಯಾದ!
ಬೀದರ್ , ಬುಧವಾರ, 19 ಅಕ್ಟೋಬರ್ 2022 (15:03 IST)
ಬೀದರ್ : ಕತ್ತು ಕೊಯ್ದು ಯುವಕನ ಭೀಕರವಾಗಿ ಕೊಲೆ ಮಾಡಿದ ಘಟನೆ ಬೀದರ್ ಜಿಲ್ಲೆಯ ಚಿಟಗುಪ್ಪ ತಾಲೂಕಿನ ದೇವಗಿರಿ ತಾಂಡದಲ್ಲಿ ನಡೆದಿದೆ.

30 ವರ್ಷದ ತಾರಾಸಿಂಗ್ ಪವಾರ್ ಕೊಲೆಯಾದ ದುರ್ವೈವಿ ಯುವಕ. ಮಾರಕಾಸ್ತ್ರಗಳಿಂದ ಈತನ ಕುತ್ತಿಗೆ ಕೊಯ್ದು ಬರ್ಬರವಾಗಿ ಕೊಲೆ ಮಾಡಲಾಗಿದೆ.

ಕೊಲೆ ನಿಖರ ಕಾರಣ ತಿಳಿದು ಬಂದಿಲ್ಲ. ಆದರೆ ಕುಡಿದು ಬಂದು ಪ್ರತಿನಿತ್ಯ ತಾಯಿ ಭೀಮಣಿಭಾಯಿ ಜೊತೆ ಜಗಳವಾಡುತ್ತಿದ್ದ. ನಿನ್ನೆ ರಾತ್ರಿಯೂ ತಾಯಿ ಜೊತೆ ಜಗಳವಾಡಿ ಮನೆಯಿಂದ ಹೊರಗೆ ಹೋದಾಗ ಕೊಲೆ ನಡೆದಿದೆ.

ವಿಷಯ ತಿಳಿದು ಬೇಮಳಖೇಡಾ ಪೊಲೀಸರು ಸ್ಥಳಕ್ಕೆ ಭೇಟಿ ಪರಿಶೀಲನೆ ಮಾಡಿತ್ತಿದ್ದು, ಈ ಕುರಿತು ಪ್ರಕರಣ ದಾಖಲಿಸಿಕೊಂಡು ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ದೆಹಲಿಯಲ್ಲಿ ರೋಡ್‌ಶೋ, ಉದ್ಯಮಿಗಳ ಜತೆ ಅಶ್ವತ್ಥನಾರಾಯಣ ಭೇಟಿ