Webdunia - Bharat's app for daily news and videos

Install App

ದೇವೇಗೌಡರನ್ನ ಪ್ರಧಾನಿ ಮಾಡಿದ್ದು ಕಾಂಗ್ರೆಸ್ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಎಚ್ ಡಿಕೆ ಕಿಡಿ

Webdunia
ಸೋಮವಾರ, 6 ಜೂನ್ 2022 (19:14 IST)
ದೇವೇಗೌಡರನ್ನು ಪ್ರಧಾನಿ ಮಾಡಿದ್ದು ಕಾಂಗ್ರೆಸ್ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಕಿಡಿಕಾರಿದ್ದಾರೆ. ಕಲಬುರಗಿ ಜಿಲ್ಲೆಯ ಆಳಂದ ಪಟ್ಟಣದಲ್ಲಿ ಮಾತನಾಡಿದ ಅವರು, ದೇವೇಗೌಡರು ಪ್ರಧಾನಿ ಆದಾಗ ಸಿದ್ದರಾಮಯ್ಯ ಕಾಂಗ್ರೆಸ್ ನಲ್ಲಿರಲಿಲ್ಲ, ಜನತಾದಳದಲ್ಲಿದ್ದರು.ಆಗ ಇದ್ದ ಯುನೈಟೆಡ್ ಪ್ರಂಟ್ ದೇವೆಗೌಡರು ಪ್ರಧಾನಿ ಅಭ್ಯರ್ಥಿ  ಅಂತ ತೀರ್ಮಾನ ಮಾಡಿತ್ತು.ಅದಕ್ಕೆ ಕಾಂಗ್ರೆಸ್ ನವರು ಬೆಂಬಲ ನೀಡಿದ್ದರು. ಇದೇ ಸಿದ್ದರಾಮಯ್ಯ ಪಕ್ಷ ಸಂಘಟನೆ ಬಗ್ಗೆ ಗಮನವೇ ಕೊಡಲಿಲ್ಲ. ಸಿಎಂ ಕುರ್ಚಿ ಮೇಲೆ ಟವೆಲ್ ಹಾಕೋದರಲ್ಲಿ ಬ್ಯುಜಿಯಾಗಿದ್ದರು.ದೇವೇಗೌಡರು ಪ್ರಧಾನಿಯಾಗಿದ್ದಾಗ ಮೈಸೂರು ನಲ್ಲಿ ನಡೆದ ಚುನಾವಣೆಯಲ್ಲಿ ಜನತಾದಳ ಅಭ್ಯರ್ಥಿ ಸೋಲಿಗೆ ಇದೇ ಸಿದ್ದರಾಮಯ್ಯ ಕಾರಣರಾಗಿದ್ದರು ಎಂದು ಕಿಡಿಕಾರಿದರು. 2018ರಲ್ಲಿ ನಾನು ಕಾಂಗ್ರೆಸ್ಸಿಗರ ಮನೆ ಬಾಗಿಲಿಗೆ ಹೋಗಿರಲಿಲ್ಲ. ಬಿಜೆಪಿ 108 ಸ್ಥಾನ ಗೆಲ್ಲಲು ಸಿದ್ದರಾಮಯ್ಯ ಕಾರಣ. ಕುಮಾರಸ್ವಾಮಿಯನ್ನು ನಾವೇ ಸಿಎಂ ಮಾಡಿದ್ದು ಅಂತ ಹೇಳೋ ಸಿದ್ದರಾಮಯ್ಯ ನನ್ನ ಅಧಿಕಾರದಿಂದ ಯಾಕೆ ತೆಗೆದರು ಎಂದು ಪ್ರಶ್ನಿಸಿದ್ದಾರೆ. ದೋಸ್ತಿ ಸರ್ಕಾರದಲ್ಲಿ ಅನೇಕ ಇಲಾಖೆಗಳನ್ನು ಹಂಚಿಕೊಂಡ ಕಾಂಗ್ರೆಸ್ಸಿಗರು ಕಮಿಷನ್ ಹಂಚಿಕೊಂಡರು. ಆಗ ನಡೆದ ಉಪಚುನಾವಣೆ ಖರ್ಚನ್ನು ನನ್ನಿಂದ ಮಾಡಿಸಿದ್ರು ಎಂದು ಕಿಡಿಕಾರಿದ್ದಾರೆ. ಕೋಮುವಾದಿ ಬಿಜೆಪಿ ದೂರವಿಡಲು ಜೆಡಿಎಸ್ ಅಭ್ಯರ್ಥಿಯನ್ನು ವಾಪಸ್ ಪಡೆಯಬೇಕೆಂದು ಸಿದ್ದರಾಮಯ್ಯ ಹೇಳಿದ್ದಾರೆ. ಅದೇ ಕೆಲಸ ಅವರೇ ಮಾಡಲಿ.‌ ಕೋಮುವಾದಿಗಳನ್ನು ದೂರ ಇಡಲು ತಾವೇ ವಾಪಾಸ್ ತಗೊಳ್ಳಲಿ. 2016 ರಲ್ಲಿ ನಾನು ಮುಸ್ಲಿಂ ಕ್ಯಾಂಡಿಡೇಟ್ ಹಾಕಿರಲಿಲ್ವಾ ?.8 ಜೆಡಿಎಸ್ 
ಶಾಸಕರನ್ನು ಖರೀದಿಸಿ ಮುಸ್ಲಿಂ ಅಭ್ಯರ್ಥಿಯನ್ನು ಸೋಲಿಸಿದ್ದು ಇದೇ ಸಿದ್ದರಾಮಯ್ಯ. ಆಗ ಸಿದ್ದರಾಮಯ್ಯಗೆ ಅನುಕಂಪ ಇರಲಿಲ್ವಾ ?  ಈ ಮನುಷ್ಯನಿಗೆ ನಮ್ಮ ಬಗ್ಗೆ ಮಾತನಾಡಲು  ಯಾವ ನೈತಿಕತೆ ಇದೆ  ಆಕ್ರೋಶ ಹೊರಹಾಕಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಕಳ್ಳರನ್ನು ಓಡಿಸಿ ಎಂದು ಭರ್ಜರಿ ಭಾಷಣ ಮಾಡಿದ ಲಾಲೂ ಯಾದವ್: ಹೇಳಲು ತಕ್ಕ ವ್ಯಕ್ತಿ ಎಂದ ಪಬ್ಲಿಕ್

ಮೋದಿ ದೊಡ್ಡ ಮತಗಳ್ಳ, ಅವರನ್ನು ಓಡಿಸಬೇಕು ಎಂದ ಮಲ್ಲಿಕಾರ್ಜುನ ಖರ್ಗೆ: ನೆಟ್ಟಿಗರ ಪ್ರತಿಕ್ರಿಯೆ ನೋಡಿ

ಹಣೆಗೆ ಕುಂಕುಮ, ನಾಮ: ಎನ್ ಡಿಎ ಉಪರಾಷ್ಟ್ರಪತಿ ಸಿಪಿ ರಾಧಾಕೃಷ್ಣನ್ ನಿಜಕ್ಕೂ ಯಾರು

Karnataka Rains: ರಾಜ್ಯಾದ್ಯಂತ ಈ ದಿನದವರೆಗೂ ಇರಲಿದೆ ಭಾರೀ ಮಳೆ

ಭಾರೀ ಮಳೆ ಮುನ್ಸೂಚನೆ: ನಾಳೆ ಈ ಭಾಗದ ಶಾಲಾ ಮಕ್ಕಳಿಗೆ ರಜೆ ಘೋಷಣೆ

ಮುಂದಿನ ಸುದ್ದಿ
Show comments