Publish Date: Thu, 23 Mar 2023 (15:47 IST)
Updated Date: Thu, 23 Mar 2023 (15:51 IST)
25 ಸಾವಿರ ಕೋಟಿ ಸಾಲಮನ್ನಾ ಮಾಡಿದ ಬಗ್ಗೆ ಉಲ್ಲೇಖಿಸಿ ರೈತರಿಗೆ ಭಾವನಾತ್ಮಕ ಪತ್ರ ಬರೆಯಲು ಮಾಜಿ ಸಿಎಂ H.D. ಕುಮಾರಸ್ವಾಮಿ ಸಿದ್ಧತೆ ಮಾಡಿಕೊಂಡಿದ್ದಾರೆ. ಸಾಲಮನ್ನಾದಿಂದ 27 ಲಕ್ಷ ಕುಟುಂಬಗಳಿಗೆ ಅನುಕೂಲವಾಗಿದೆ.. ಸಾಲಮನ್ನಾ ಪಡೆದ ರೈತರನ್ನು ಮತಗಳಾಗಿ ಪರಿವರ್ತಿಸಲು HDK ಪ್ಲಾನ್ ಮಾಡಿಕೊಂಡಿದ್ದಾರೆ. ಪಂಚರತ್ನ ರಥಯಾತ್ರೆಯ ಬಗ್ಗೆ ಕೂಡ ಪತ್ರದಲ್ಲಿ HDK ಉಲ್ಲೇಖಿಸಿದ್ದಾರೆ. ರಾಜ್ಯದೆಲ್ಲೆಡೆ ಇದೇ ಪತ್ರ ಹಂಚಿ ಪ್ರಚಾರ ನಡೆಸಲು H.D. ಕುಮಾರಸ್ವಾಮಿ ಪ್ಲ್ಯಾನ್ ಮಾಡಿಕೊಂಡಿದ್ದಾರೆ. ವಿಪಕ್ಷಗಳ ಬಗ್ಗೆ ಪತ್ರದಲ್ಲಿ HDK ಟೀಕೆ ಮಾಡಿ, ಕಾಂಗ್ರೆಸ್, BJP ಜೊತೆಗಿನ ಸಮ್ಮಿಶ್ರ ಸರ್ಕಾರದ ಬಗ್ಗೆ ಉಲ್ಲೇಖಿಸಲಿದ್ದಾರೆ.