Publish Date: Sun, 23 Sep 2018 (19:53 IST)
Updated Date: Sun, 23 Sep 2018 (19:55 IST)
ರಾಜ್ಯ ರಾಜಕೀಯ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಎಲ್ಲ ಪಕ್ಷಗಳ ನಾಯಕರು ತೆರೆಮರೆಯಲ್ಲಿ ಬಿರುಸಿನ ರಾಜಕೀಯ ಆಟ ಶುರುವಿಟ್ಟುಕೊಂಡಿದ್ದರೆ, ಇಲ್ಲೊಬ್ಬ ಸಚಿವರ ನಮ್ ಸಿಎಂ ಬಹಳ ಕೂಲ್ ಇದ್ದಾರೆ ಎಂದಿದ್ದಾರೆ.
ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಬಗ್ಗೆಯೂ ಚರ್ಚೆ ನಡೆಯುತ್ತಿದೆ. ರಾಜ್ಯಾದ್ಯಕ್ಷರೂ ಪಕ್ಷ ಸಂಘಟನೆಗೆ ಹಲವು ಸಲಹೆಗಳನ್ನು ಕೊಟ್ಟಿದ್ದಾರೆ. ನಮ್ಮಲ್ಲಿ ಯಾವುದೇ ಗೊಂದಲಗಳಿಲ್ಲ. ನಮ್ ಸಿಎಂ ಬಹಳ ಕೂಲ್ ಆಗಿ ಇದ್ದಾರೆ ಎಂದು ಸಚಿವ ಬಂಡೆಪ್ಪ ಕಾಶೆಂಪೂರ ಹೇಳಿದ್ದಾರೆ.
ಹಾಸನದಲ್ಲಿ ಮಾತನಾಡಿದ ಅವರು, ಜೆಡಿಎಸ್ ಬಲವರ್ಧನೆಗೆ ಹಾಗೂ ಲೋಕಸಭೆ ಚುನಾವಣೆಗೆ ಪಕ್ಷವನ್ನು ಬಲ ಪಡಿಸಲಾಗುತ್ತಿದೆ.
ಉತ್ತರ ಕರ್ನಾಟಕದ ರಾಯಚೂರು, ಬಿಜಾಪುರ ಜಿಲ್ಲೆಗಳಲ್ಲಿ ಪಕ್ಷ ಸಂಘಟನೆಗೆ ಒತ್ತು ನೀಡಲು ಚರ್ಚೆ ನಡೆಸುತ್ತಿದ್ದೇವೆ.
ನಿಗಮ ಮಂಡಳಿಗಳಿಗೆ ಆದಷ್ಟು ಬೇಗನೆ ಅಧ್ಯಕ್ಷರ ನೇಮಕಕ್ಕೆ ಸಿಎಂಗೆ ಹೆಚ್.ಡಿ.ಡಿ.ಯಿಂದ ನಿರ್ದೇಶನ ಸಿಗಲಿದೆ ಎಂದು ಹೇಳಿದರು.