Webdunia - Bharat's app for daily news and videos

Install App

ನನ್ನಿಂದ ತಪ್ಪಾದರೆ ಹೇಳಿ, ಜೆಡಿಎಸ್ ಪಕ್ಷ ನನ್ನದು, ದೇವೇಗೌಡರದ್ದಲ್ಲ: ಎಚ್ ಡಿ ಕುಮಾರಸ್ವಾಮಿ

Krishnaveni K
ಶುಕ್ರವಾರ, 14 ಜೂನ್ 2024 (13:37 IST)
Photo Credit: Facebook
ಬೆಂಗಳೂರು: ಕೇಂದ್ರ ಮಂತ್ರಿಯಾದ ಬಳಿಕ ಮೊದಲ ಬಾರಿಗೆ ಕರ್ನಾಟಕಕ್ಕೆ ಬಂದ ಜೆಡಿಎಸ್ ನಾಯಕ ಎಚ್ ಡಿ ಕುಮಾರಸ್ವಾಮಿಗೆ ಅದ್ಭುತ ಸ್ವಾಗತ ದೊರೆತಿದೆ. ಈ ವೇಳೆ ಅವರು ಜನರನ್ನುದ್ದೇಶಿಸಿ ಭಾವುಕರಾಗಿ ಮಾತನಾಡಿದ್ದಾರೆ.

ಎಚ್ ಡಿ ಕುಮಾರಸ್ವಾಮಿ ಜೊತೆಗೆ ಪುತ್ರ ನಿಖಿಲ್ ಕುಮಾರಸ್ವಾಮಿ ಕೂಡಾ ಇದ್ದರು. ಅಭಿಮಾನಿಗಳು ನೂತನ ಕೇಂದ್ರ ಸಚಿವ ಕುಮಾರಸ್ವಾಮಿಗೆ ಬೃಹತ್ ಸೇಬಿನ ಹಾರ ಹಾಕಿ ಸ್ವಾಗತಿಸಿದ್ದಾರೆ. ಈ ವೇಳೆ ಮಾತನಾಡಿದ ಅವರು ಜೆಡಿಎಸ್ ಪಕ್ಷ ನನ್ನದು ಅಥವಾ ದೇವೇಗೌಡರದ್ದಲ್ಲ. ನಿಮ್ಮದು ಎಂದು ಭಾವುಕರಾಗಿ ಹೇಳಿದ್ದಾರೆ.

‘ದೇವರ ಆಶೀರ್ವಾದದಿಂದ ನಾನು ಈವತ್ತು ಕೇಂದ್ರ ಮಂತ್ರಿಯಾಗಿದ್ದೇನೆ. ನಿಮ್ಮೆಲ್ಲರ ಸಮಸ್ಯೆಗಳಿಗೆ ಒಂದೊಂದಾಗಿ ಪರಿಹಾರ ನೀಡಲು ಪ್ರಯತ್ನಿಸುತ್ತೇನೆ. ನನಗೆ ಈಗಲೇ ಸನ್ಮಾನ ಸ್ವೀಕರಿಸಲು ಇಷ್ಟವಿಲ್ಲ. ನಾನು ಮಾಡುವ ಕೆಲಸ ನೋಡಿಕೊಂಡು ಅಭಿನಂದಿಸಿ. ನನ್ನನ್ನು ಯಾವಾಗಲೂ ಹೊಗಳುವುದಲ್ಲ. ನನ್ನಿಂದ ತಪ್ಪಾದರೂ ಮುಚ್ಚುಮರೆಯಿಲ್ಲದೇ ಹೇಳಿ. ಆಗ ನಾನು ತಿದ್ದಿಕೊಳ್ಳುತ್ತೇನೆ.

ಜೆಡಿಎಸ್ ಪಕ್ಷ ನನ್ನದು, ದೇವೇಗೌಡರದ್ದಲ್ಲ, ಇದು ನಿಮ್ಮ ಪಕ್ಷ, ನೀವೇ ಬೆಳೆಸಿದ ಪಕ್ಷ. ನನ್ನ ಕ್ಷೇತ್ರದಲ್ಲಿ ಈಗ ನನಗೇ ಎಲ್ಲಾ ಕೆಲಸ ಮಾಡಲು ಸಾಧ್ಯವಾಗದೇನೋ. ಆದರೆ ನನ್ನ ಬದಲು ನಿಖಿಲ್ ಕುಮಾರಸ್ವಾಮಿಯವರಿರುತ್ತಾರೆ. ನಿಮ್ಮ ಜೊತೆಗೆ ನಾವು ಯಾವಾಗಲೂ ಇರುತ್ತೇವೆ’ ಎಂದು ಜನರಿಗೆ ಭರವಸೆ ನೀಡಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments