Webdunia - Bharat's app for daily news and videos

Install App

ನಾನು ಮಣ್ಣಾಗೋದು ಇದೇ ಸ್ಥಳದಲ್ಲಿ: ಎಚ್ ಡಿ ಕುಮಾರಸ್ವಾಮಿ ಭವಿಷ್ಯ

Krishnaveni K
ಮಂಗಳವಾರ, 29 ಅಕ್ಟೋಬರ್ 2024 (16:55 IST)
ಬೆಂಗಳೂರು: ನಾನು ರಾಮನಗರ ಜಿಲ್ಲೆಗೆ ಹೊರಗಿನವನಲ್ಲ, ನಾನು ಮಣ್ಣಾಗೋದು ಕೇತಗಾನಹಳ್ಳಿಯಲ್ಲೇ ಎಂದು ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಕಾಂಗ್ರೆಸ್ ನಾಯಕರಿಗೆ ತಿರುಗೇಟು ಕೊಟ್ಟಿದ್ದಾರೆ.

ಚನ್ನಪಟ್ಟಣ ಉಪ ಚುನಾವಣೆಗೆ ತಮ್ಮ ಪುತ್ರನನ್ನು ನಿಲ್ಲಿಸಿ ಮಗನ ಪರ ಪ್ರಚಾರಕ್ಕೆ ಬಂದಿದ್ದಕ್ಕೆ ಕಾಂಗ್ರೆಸ್ ನಾಯಕರು ವಲಸಿಗ ಎಂದಿದ್ದಕ್ಕೆ ಎಚ್ ಡಿ ಕುಮಾರಸ್ವಾಮಿ ಈ ರೀತಿ ತಿರುಗೇಟು ಕೊಟ್ಟಿದ್ದಾರೆ. ರಾಮನಗರಕ್ಕೆ ನಾನು ಹೇಗೆ ಹೊರಗಿನವಾಗ್ತೀನಿ. ನನ್ನನ್ನು ಬೆಳೆಸಿದ್ದ ಕೇತಗಾನಹಳ್ಳಿಯ ಗ್ರಾಮ. ನಾನು ಇಲ್ಲಿಯೇ ಮಣ್ಣಾಗುವುದು ಎಂದು ಹೇಳಿದ್ದಾರೆ.

ನಾನು ಹುಟ್ಟಿದ್ದು ಹಾಸನದಲ್ಲಿಯೇ ಇರಬಹುದು. ಆದರೆ ರಾಮನಗರ ನನಗೆ ಪುನರ್ ಜನ್ಮ ಕೊಟ್ಟ ಜಿಲ್ಲೆ. ಇಲ್ಲಿಗೆ ನಾನು ಯಾವತ್ತೂ ಹೊರಗಿನವಲ್ಲ. ಇಟೆಲಿಯಲ್ಲಿ ಹುಟ್ಟಿದ ಪ್ರಿಯಾಂಕ ಗಾಂಧಿಯನ್ನು ವಯನಾಡಿಗೆ ತಂದು ಚುನಾವಣೆಗೆ ನಿಲ್ಲಿಸಬಹುದು. ನಾನು ಇಲ್ಲಿನ ಕನ್ನಡಿಗ. ಕನ್ನಡಿಗನಾಗಿ ನಾನು ಇಲ್ಲಿಗೆ ಬರಬಾರದಾ ಎಂದು ಪ್ರಶ್ನೆ ಮಾಡಿದ್ದಾರೆ.

ಇನ್ನು, ಉಪ ಚುನಾವಣೆ ಪ್ರಚಾರಕ್ಕೆ ಬಂದಿರುವುದಕ್ಕೆ ಟಾಂಗ್ ಕೊಟ್ಟಿರುವ ಕಾಂಗ್ರೆಸ್ ನಾಯಕರಿಗೆ ತಿರುಗೇಟು ಕೊಟ್ಟಿರುವ ಕುಮಾರಸ್ವಾಮಿ, ಇದು ಉಪ ಚುನಾವಣೆ. ನಾನು ಜನರಲ್ ಎಲೆಕ್ಷನ್ ಇರುವಾಗ ಬಂದಿರಲಿಲ್ಲ. ಈಗ ಪ್ರತೀ ಹಳ್ಳಿಗೆ ಬರುವ ನಿರ್ಧಾರ ಮಾಡಿದ್ದೇನೆ. ನಾನು ಬರಲು ಇವರ ಅಪ್ಪಣೆ ಪಡೀಬೇಕಾ ಎಂದಿದ್ದಾರೆ.
 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Heavy Rain, ದ.ಕ ಜಿಲ್ಲೆಯ ಶಾಲೆಗಳಿಗೆ ರಜೆ ಘೋಷಿಸಿದ ಜಿಲ್ಲಾಧಿಕಾರಿ

ಬಿಜೆಪಿ, ಆರ್‌ಎಸ್‌ಎಸ್ ನಡುವಿನ ಒಡನಾಟದ ಬಗ್ಗೆ ಮೋಹನ್ ಭಾಗವತ್ ಸ್ಫೋಟಕ ಮಾತು

ಇನ್‌ಸ್ಟಾಗ್ರಾಂನಲ್ಲಿ ವಿಚ್ಛೇಧನ ನೀಡಿ ಸುದ್ದಿಯಾಗಿದ್ದ ದುಬೈಗೆ ರಾಜಕುಮಾರಿಗೆ ಮತ್ತೇ ಮದುವೆ

ಧರ್ಮಸ್ಥಳ ಕೇಸ್ ಎಸ್‌ಐಟಿಗೆ ನೀಡಿದ ಹಿಂದಿನ ಉದ್ದೇಶ ಬಿಚ್ಚಿಟ್ಟ ಸಚಿವ ಎಂಬಿ ಪಾಟೀಲ್‌

ಭಾರತದ ವಾಯುಮಾಲಿನ್ಯದ ಬಗ್ಗೆ ಶಾಕಿಂಗ್ ವರದಿ, ಇಲ್ಲಿದೆ

ಮುಂದಿನ ಸುದ್ದಿ
Show comments