ಅಪ್ಪಯ್ಯ..ಅಪ್ಪಯ್ಯ… ಎಂದು ಸಿದ್ದರಾಮಯ್ಯ ಪುತ್ರನ ಮಿಮಿಕ್ರಿ ಮಾಡಿದ ಎಚ್ ಡಿ ಕುಮಾರಸ್ವಾಮಿ

Krishnaveni K
ಶನಿವಾರ, 10 ಆಗಸ್ಟ್ 2024 (16:38 IST)
ಮೈಸೂರು: ಬಿಜೆಪಿ-ಜೆಡಿಎಸ್ ಪಾದಯಾತ್ರೆ ಸಮಾವೇಶದಲ್ಲಿ ಕೇಂದ್ರ ಸಚಿವ, ಜೆಡಿಎಸ್ ನಾಯಕ ಎಚ್ ಡಿ ಕುಮಾರಸ್ವಾಮಿ ಸಿದ್ದರಾಮಯ್ಯ ಪುತ್ರ ಯತೀಂದ್ರರನ್ನು ಮಿಮಿಕ್ರಿ ಮಾಡಿ ಗಮನ ಸೆಳೆದರು.

ಈ ಹಿಂದೆ ಸಿಎಸ್ ಆರ್ ಫಂಡ್ ದುರ್ಬಳಕೆ ವಿಚಾರದಲ್ಲಿ ಯತೀಂದ್ರ ಮತ್ತು ಸಿದ್ದರಾಮಯ್ಯ ಹೆಸರು ಕೇಳಿಬಂದಿತ್ತು. ಯತೀಂದ್ರ ಫೋನ್ ನಲ್ಲೇ ತಮ್ಮ ತಂದೆಗೆ ‘ಅಪ್ಪಯ್ಯ ನಾನು ಹೇಳಿದ ಹೆಸರು ಇಲ್ಲಿಲ್ಲ. ಲಿಸ್ಟ್ ಲ್ಲಿ ಇಲ್ಲದ ಹೆಸರು ಬೇಡ’ ಎಂದ ವಿಡಿಯೋ ಎಲ್ಲೆಡೆ ವೈರಲ್ ಆಗಿತ್ತು.

ಈ ವಿಚಾರವನ್ನೇ ಇಂದು ಎಚ್ ಡಿಕೆ ಭಾಷಣದಲ್ಲಿ ಪ್ರಸ್ತಾಪಿಸಿದ್ದು ಥೇಟ್ ಯತೀಂದ್ರ ಸ್ಟೈಲ್ ನಲ್ಲೇ ಅಪ್ಪಯ್ಯ.. ಅಪ್ಪಯ್ಯ.. ಎಂದು ಮಿಮಿಕ್ರಿ ಮಾಡಿ ಅಲ್ಲಿದ್ದವರ ನಗೆಗಡಲಲ್ಲಿ ತೇಲಿಸಿದರು. ಅಪ್ಪ-ಮಗನ ಇಂತಹ ಹಗರಣಗಳು ಸಾಕಷ್ಟಿವೆ. ಆದರೆ ನಾನು ಎಲ್ಲವನ್ನೂ ಹೇಳಕ್ಕೆ ಹೋಗಲ್ಲ ಎಂದರು.

ಇನ್ನು, ನಾನು ಸಿದ್ದರಾಮಯ್ಯಗೆ ಬಂಡೆಯಂತೆ ಎಂದಿದ್ದ ಡಿಕೆ ಶಿವಕುಮಾರ್ ಗೂ ಕುಮಾರಸ್ವಾಮಿ ಟಾಂಗ್ ಕೊಟ್ಟಿದ್ದಾರೆ. ಅದೇ ಬಂಡೆಯಿಂದಲೇ  ನಾನು ಕೆಟ್ಟೆ. ಈ ಸಿದ್ದರಾಮಯ್ಯನೂ ಹಾಳಾಗ್ತಾರೆ ಎಂದು ಎಚ್ ಡಿ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಹಲವು ಮಕ್ಕಳ ಕಣ್ಣಿಗೆ ಗಾಯ ಬೆನ್ನಲ್ಲೇ 59 ಕಾರ್ಬೈಡ್ ಗನ್ ವಶಕ್ಕೆ, ಇಬ್ಬರು ಅರೆಸ್ಟ್‌

ಕರ್ನೂಲ್ ಭೀಕರ ಬಸ್ ಬೆಂಕಿ ಅವಘಡ, ಡಿಸಿಎಂ ಡಿಕೆ ಶಿವಕುಮಾರ್ ನೀಡಿದ ಸಲಹೆ ಹೀಗಿದೆ

ಪೊಲೀಸ್ ಅಧಿಕಾರಿಯಿಂದ ಅತ್ಯಾಚಾರ: ಅಂಗೈಯಲ್ಲಿ ಡೆತ್‌ನೋಟ್ ಬರೆದಿಟ್ಟು ವೈದ್ಯೆ ಸೂಸೈಡ್

ನನ್ನನ್ನು ಕತ್ತಲಲ್ಲಿ ಯಾಕೆ ಹುಡುಕ್ತೀಯಾ, ನಾನು ಹಾಗಲ್ಲ: ಪ್ರದೀಪ್ ಈಶ್ವರ್

ರಾಷ್ಟ್ರ ರಾಜಧಾನಿಯಲ್ಲಿ ಗಾಳಿ ಗುಣಮಟ್ಟ ಕಳಪೆ: ದೆಹಲಿಯಲ್ಲಿ ಈ ವ್ಯಾಪಾರದಲ್ಲಿ ಭಾರೀ ಏರಿಕೆ

ಮುಂದಿನ ಸುದ್ದಿ
Show comments