Webdunia - Bharat's app for daily news and videos

Install App

ರಾಮನಗರದಲ್ಲಿ ನಾನು ನಿಮಗೆ ಏನು ಅನ್ಯಾಯ ಮಾಡಿದ್ದೆ ಎಂದು ಕುಮಾರಸ್ವಾಮಿ ಕಣ್ಣೀರು

Krishnaveni K
ಶುಕ್ರವಾರ, 7 ಮಾರ್ಚ್ 2025 (10:00 IST)
Photo Credit: X
ರಾಮನಗರ: ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ರಾಮನಗರಕ್ಕೆ ಭೇಟಿ ನೀಡಿದ್ದು ನಾನು ನಿಮಗೆ ಏನು ಅನ್ಯಾಯ ಮಾಡಿದ್ದೆ ಎಂದು ನನ್ನ ಮಗನನ್ನು ಸೋಲಿಸಿದಿರಿ ಎಂದು ಕಣ್ಣೀರು ಹಾಕಿದ್ದಾರೆ.
 

ಚನ್ನಪಟ್ಟಣ ಉಪಚುನಾವಣೆಯಲ್ಲಿ ಮಗ ನಿಖಿಲ್ ಕುಮಾರಸ್ವಾಮಿ ಸೋಲಿನ ಕಹಿ ಕುಮಾರಸ್ವಾಮಿ ಮನಸ್ಸಿನಿಂದ ಇನ್ನೂ ಮರೆಯಾಗಿಲ್ಲ. ಇದೀಗ ರಾಮನಗರದ ಅಕ್ಕೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಭಾವುಕರಾಗಿ ಕಣ್ಣೀರು ಹಾಕಿದ್ದಾರೆ.

‘ಯಾವುದೇ ಒಂದು ಯೋಜನೆಯನ್ನು ಪೂರ್ಣಾವಧಿಗೆ ಅಧಿಕಾರ ಕೊಟ್ಟರೆ ಮಾಡಬಹುದು. ಯಾವುದೋ ದೇವರ ಅನುಗ್ರಹದಲ್ಲಿ 15 ತಿಂಗಳೋ, 20 ತಿಂಗಳಲ್ಲಿ ಯಾರದ್ದೋ ಮುಲಾಜಿನಲ್ಲಿ ಸರ್ಕಾರ ಮಾಡಿ ಅಂತಹ ಸಂದರ್ಭದಲ್ಲೂ ನಿಮಗೆ ಒಳ್ಳೆಯ ಕೆಲಸ ಮಾಡಿಕೊಡಲಿಲ್ವಾ ನಾನು? ಏನು ಅನ್ಯಾಯ ಮಾಡಿದೆ ಈ ರಾಜ್ಯದ ಜನತೆಗೆ? ದೇವೇಗೌಡರು ಏನು ಅನ್ಯಾಯ ಮಾಡಿದ್ದಾರೆ?

ಅದೆಂಥದೋ ಮೇಕೆ ದಾಟು, ಮೇಕೆ ದಾಟು ಅಂತೀರಿ, ಅದೀಗ ನಟ್ಟು, ಬೋಲ್ಟ್ ಸರಿ ಮಾಡ್ತಾರಂತೆ. ನೀವು ಮೇಕೆದಾಟು ಯೋಜನೆ ಮಾಡ್ತಾರೆ ಅಂತಾರಲ್ವಾ ನಿಮಗೆ ಅಧಿಕಾರ ಕೊಟ್ಟಿದ್ದರು. ಈಗ ಕುಮಾರಸ್ವಾಮಿ ಅನುಮತಿ ಕೊಡಿಸಿಲ್ಲ ಎಂದು ನನ್ನ ಮೇಲೆ ಹೇಳ್ತಾರೆ.

ನಾನು ಅನುಮತಿ ಕೊಡಿಸಲು ನೀವು ಪಾರ್ಟನರ್ ಆಗಿ ಇಟ್ಟುಕೊಂಡಿದ್ದೀರಲ್ಲಾ ತಮಿಳುನಾಡಿನಲ್ಲಿ ಡಿಎಂಕೆ ಪಕ್ಷ. ಮೊದಲು ತಮಿಳುನಾಡಿನಲ್ಲಿ ಅವರನ್ನು ಒಪ್ಪಿಸಿಕೊಂಡು ಬನ್ನಿ. ಅವರನ್ನು ಒಪ್ಪಿಸಿದರೆ 10 ನಿಮಿಷದಲ್ಲಿ ಪ್ರಧಾನಿ ಮೋದಿ ಬಳಿ ಅನುಮತಿ ಕೊಡಿಸೋಣ’ ಎಂದಿದ್ದಾರೆ.

‘ಒಂದು ನಾನು ಹೇಳ್ತೇನೆ, ನಾನು, ದೇವೇಗೌಡರು ಬರುವ ಮೊದಲು ಚನ್ನಪಟ್ಟಣ, ರಾಮನಗರ ಹೇಗಿತ್ತು, ನಾವು ಬಂದ ಮೇಲೆ ಹೇಗಿದೆ ಎಂದು ನೋಡಿ. 1999, 2000, 2001, 2002 ರಲ್ಲಿ ಪ್ರತೀ ದಿನ 30-40 ಮದುವೆ ಅಟೆಂಡ್ ಮಾಡಿದ್ದೇನೆ. ಪ್ರತೀ ದಿನ ರಾಮನಗರ, ಚನ್ನಪಟ್ಟಣ, ಮೈಸೂರು ಎಲ್ಲಾ ಸುತ್ತಿದ್ದೇನೆ. ಆಗ ರಾಮಗರ, ಚನ್ನಪಟ್ಟಣ ರಸ್ತೆ ಹೇಗಿತ್ತು? ಈಗ ಹೇಗಿದೆ ನೋಡಿ. ನಾವು ಏನೇನು ವ್ಯವಸ್ಥೆ ಮಾಡಿಲ್ಲ? ಈಗ ನಾನು ಏನು ಮಾಡಿದ್ದೆ ಎಂದು ಪ್ರಶ್ನೆ ಮಾಡ್ತಿದ್ದಾರೆ. ಅಂತಹವರ ಮಾತು ನೀವು ನಂಬ್ತೀರಾ, ಇದರಿಂದ ನನಗೇನೂ ನಷ್ಟವಿಲ್ಲ’ ಎಂದಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Indus Water treaty: ಸಿಂಧೂ ನದಿ ಒಪ್ಪಂದ ಎಂದರೇನು, ಇದನ್ನ ಮಾಡಿದವರು ಯಾರು: ಪಾಕಿಸ್ತಾನಕ್ಕೆ ಆಗುವ ನಷ್ಟವೇನು

Pahalgram: ಸಕಲ ಸರ್ಕಾರಿ ಗೌರವಗಳೊಂದಿಗೆ ಮಂಜುನಾಥ್‌, ಭರತ್ ಭೂಷಣ್‌ಗೆ ಅಂತ್ಯಕ್ರಿಯೆ

Pehlagam ಪ್ರವಾಸಿಗರ ರಕ್ಷಣೆಗೆ ಹೋಗಿ ಜೀವ ಕಳೆದುಕೊಂಡ ಮುಸ್ಲಿಂ ಯುವಕ, ತಂದೆಯ ಮಾತು ಕೇಳಿದ್ರೆ ಮೈ ರೋಮಾಂಚನ

‌Pahalgam Terror Attack:ಸರ್ವಪಕ್ಷ ಸಭೆಗೂ ಮುನ್ನಾ ರಾಷ್ಟ್ರಪತಿಯನ್ನು ಭೇಟಿಯಾದ ಅಮಿತ್ ಶಾ

Pahalgam Terror Attack: ವಾಘಾ ಅಟ್ಟಾರಿ ಗಡಿ ಬಂದ್‌ನಿಂದ ಪಾಕ್‌ನ ಮೇಲೆ ಬೀರುವ ಪರಿಣಾಮಗಳು

ಮುಂದಿನ ಸುದ್ದಿ
Show comments