Webdunia - Bharat's app for daily news and videos

Install App

ಹಾಸನಾಂಬೆ ದರ್ಶನ ಭಕ್ತರ ಪಾಲಿಗೆ ಇಂದು ಕೊನೇ ದಿನ

Krishnaveni K
ಶನಿವಾರ, 2 ನವೆಂಬರ್ 2024 (10:15 IST)
ಹಾಸನ: ಇತಿಹಾಸ ಪ್ರಸಿದ್ಧ ಹಾಸನಾಂಬೆ ದೇವಾಲಯದ ಗರ್ಭಗುಡಿ ನಾಳೆ ಮುಚ್ಚಲಿದ್ದು, ಇಂದು ಭಕ್ತರ ಪಾಲಿಗೆ ಕೊನೆಯ ದಿನ ದರ್ಶನಕ್ಕೆ ಅವಕಾಶ ನೀಡಲಾಗುತ್ತಿದೆ.

ಸಾರ್ವಜನಿಕ ದರ್ಶನಕ್ಕೆ ಇಂದು ಕೊನೆಯ ದಿನವಾಗಿರುವುದರಿಂದ ಸಾಕಷ್ಟು ಸಂಖ್ಯೆಯಲ್ಲಿ ದೇವಿಯ ದರ್ಶನಕ್ಕೆ ಭಕ್ತರು ಬರುತ್ತಿದ್ದಾರೆ. ಜೊತೆಗೆ ವೀಕೆಂಡ್ ಕೂಡಾ ಆಗಿರುವುದರಿಂದ ಸಾಕಷ್ಟು ಸಂಖ್ಯೆಯಲ್ಲಿ ಭಕ್ತರು ಬರುತ್ತಿದ್ದಾರೆ. ಈ ಬಾರಿ ಅವ್ಯವಸ್ಥೆಗಳ ನಡುವೆಯೂ ದಾಖಲೆಯ ಆದಾಯ ಸಂಗ್ರಹವಾಗಿದೆ.

ವರ್ಷಕ್ಕೊಮ್ಮೆ ಮಾತ್ರ ಹಾಸನಾಂಬೆ ದೇವಿಯ ಗರ್ಭಗುಡಿ ತೆರೆಯಲಾಗುತ್ತದೆ. ನಾಳೆಗೆ ಗರ್ಭಗುಡಿ ಮುಚ್ಚಿದರೆ ಮುಂದಿನ ವರ್ಷವೇ ಮತ್ತೆ ತೆರೆಯಲಾಗುತ್ತದೆ. 13 ದಿನಗಳ ಕಾಲ ಅದ್ಧೂರಿಯಾಗಿ ಜಾತ್ರೆ ನಡೆದಿದ್ದು ಈ ಬಾರಿ ದೀಪಾಲಂಕಾರ, ವಿಶೇಷ ಸಾಂಸ್ಕೃತಿ ಕಾರ್ಯಕ್ರಮಗಳೊಂದಿಗೆ ನೋಡುಗರ ಮನ ಸೆಳೆದಿದೆ.

ಈ ಬಾರಿ ಕೇವಲ ವಿಶೇಷ ಪಾಸ್ ನಿಂದಲೇ ಕೋಟ್ಯಾಂತರ ರೂಪಾಯಿ ಆದಾಯ ಗಳಿಕೆಯಾಗಿದೆ. ಹಾಸನಾಂಬ ದೇವಾಲಯದ ಜಾತ್ರೆ ಅದ್ಧೂರಿಯಾಗಿ ನಡೆಸಲು ಪೌರ ಕಾರ್ಮಿಕರಿಂದ ಹಿಡಿದು ಪೊಲೀಸ್ ಇಲಾಖೆ, ಅಧಿಕಾರಿಗಳವರೆಗೂ ಶ್ರಮಿಸಿದ್ದಾರೆ. ಎಲ್ಲರ ಶ್ರಮದ ಫಲವಾಗಿ ಅದ್ಧೂರಿಯಾಗಿ ಜಾತ್ರೆ ನೆರವೇರಿದೆ.
 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಕೇರಳದಲ್ಲಿ ಮಿದುಳು ತಿನ್ನುವ ಅಮೀಬಾ ಪತ್ತೆ, ಇದುವರೆಗೆ 41 ಪ್ರಕರಣ ದಾಖಲು

Video: ತಲಪಾಡಿಯಲ್ಲಿ ಕೆಎಸ್ ಆರ್ ಟಿಸಿ ಬಸ್ ದುರಂತ: ಆರು ಮಂದಿ ಸಾವು

ಶಿವಕುಮಾರ್ ತಮ್ಮ ಹೇಳಿಕೆಯನ್ನು ತಕ್ಷಣ ಹಿಂಪಡೆಯಲಿ: ವಿಜಯೇಂದ್ರ ಆಗ್ರಹ

ಮತದಾರರ ಅಧಿಕಾರ ಯಾತ್ರೆಯಲ್ಲಿ ಮೋದಿ ತಾಯಿಯ ವಿರುದ್ಧ ಅವಾಚ್ಯ ಶಬ್ದ: ಬಿಜೆಪಿ ಆರೋಪ

ಬೀದರ್‌; ಸ್ಲೀಪರ್‌ ಬಸ್‌ನಲ್ಲೇ ಆತ್ಮಹತ್ಯೆಗೆ ಶರಣಾದ ಬಸ್‌ ಚಾಲಕ, ಪರಿಹಾರಕ್ಕೆ ಆಗ್ರಹ

ಮುಂದಿನ ಸುದ್ದಿ
Show comments