Select Your Language

Notifications

webdunia
webdunia
webdunia
webdunia

ಗೃಹ ಇಲಾಖೆ ರಾಜಕೀಯ ಉದ್ದೇಶಕ್ಕೆ ದುರ್ಬಳಕೆ ಆಗ್ತಿದ್ಯಾ?

ಗೃಹ ಇಲಾಖೆ ರಾಜಕೀಯ ಉದ್ದೇಶಕ್ಕೆ ದುರ್ಬಳಕೆ ಆಗ್ತಿದ್ಯಾ?
ಬೆಂಗಳೂರು , ಶನಿವಾರ, 4 ಮೇ 2019 (16:50 IST)
ಬಿಜೆಪಿ ಮುಖಂಡರು ಇದೀಗ ಗೃಹ ಸಚಿವರ ಕ್ರಮದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಗೃಹ ಸಚಿವ ಎಂ.ಬಿ.ಪಾಟೀಲರಿಗೆ ವಿಧಾನಪರಿಷತ್ ಪ್ರತಿಪಕ್ಷ ನಾಯಕ ಕೋಟಾ ಶ್ರೀನಿವಾಸ ಪೂಜಾರಿ ಬಹಿರಂಗ ಪತ್ರ ಬರೆದಿದ್ದಾರೆ.

ಗೃಹ ಇಲಾಖೆಯನ್ನು ರಾಜಕೀಯ ಉದ್ದೇಶಕ್ಕೋಸ್ಕರ ದುರ್ಬಳಕೆ ಮಾಡಿಕೊಳ್ಳುತ್ತಿರುವ ಆರೋಪ ಕೇಳಿಬಂದಿದೆ.

ಬಿಜೆಪಿ ಕಾರ್ಯಕರ್ತರನ್ನು ಬಂಧಿಸಿ ಜೈಲಿಗಟ್ಟುತ್ತಿರುವ ಬಗ್ಗೆ ಖಂಡನೆ ವ್ಯಕ್ತಪಡಿಸಿದ್ದಾರೆ. ಔರಾದ್ಕರ್ ವರದಿ ಜಾರಿಗೊಳಿಸಿ, ಪೊಲೀಸರಲ್ಲಿ ಆತ್ಮಸ್ಥೈರ್ಯ ಹೆಚ್ಚಿಸಬೇಕಿದ್ದ ನೀವು ಕ್ಷುಲ್ಲಕ ಕಾರಣಕ್ಕೆ, ಸಣ್ಣಪುಟ್ಟ ರಾಜಕೀಯ ದ್ವೇಷಕ್ಕೆ ಮನಸ್ಸುಕೊಡುತ್ತಿದ್ದೀರಿ.

ಕಾರಣ ಇಲ್ಲದೇ ಬಿಜೆಪಿ ಕಾರ್ಯಕರ್ತರನ್ನು ಬಂಧಿಸಿ ಜೈಲಿಗಟ್ಟುತ್ತಿರುವುದು ಸರಿಯಲ್ಲ. ಇದು  ಖಂಡನೀಯ ಎಂದಿದ್ದಾರೆ ಕೋಟಾ ಶ್ರೀನಿವಾಸ ಪೂಜಾರಿ.



Share this Story:

Follow Webdunia kannada

ಮುಂದಿನ ಸುದ್ದಿ

ಕಾಡಾನೆ ದಾಳಿಗೆ ಸಾವನ್ನಪ್ಪಿದ್ದು ಯಾರು?