ಹರ್ಷ ಕೊಲೆ ಕೈವಾಡ

Webdunia
ಮಂಗಳವಾರ, 22 ಫೆಬ್ರವರಿ 2022 (16:05 IST)
ಹಿಂದೂ ಹರ್ಷನ ಕೊಲೆ ಸಿಗೇಹಟ್ಟಿ ಸಮೀಪದ ಭಾರತಿ ಕಾಲೋನಿ ಕ್ರಾಸ್​ ನಲ್ಲಿ ಸಂಭವಿಸಿತ್ತು. ಅದರ ಬಳಿಕ ನಿನ್ನೆ ನಡೆದ ಅಂತ್ಯಸಂಸ್ಕಾರದ ಮೆರವಣಿಗೆ ವೇಳೆ ಕಲ್ಲೂತೂರಾಟ, ಲಾಠಿ ಪ್ರಹಾರ, ಟಿಯರ್​ ಗ್ಯಾಸ್​ ಪ್ರಯೋಗಗಳು ನಡೆದಿದ್ದವು.ಇದಾದ ಬಳಿಕ ನಿನ್ನೆ ರಾತ್ರಿಯೇ ಶಿವಮೊಗ್ಗ ಜಿಲ್ಲಾಡಳಿತ 144 ಸೆಕ್ಷನ್​ನ್ನ ವಿಸ್ತರಿಸಿ, ಕರ್ಪ್ಯೂ ಜಾರಿಗೊಳಿಸಿ ಆದೇಶ ಹೊರಡಿಸಿತ್ತು.
ನಿನ್ನೆ ನಡೆದ ಘಟನೆಗಳಾದರೇ, ಇವತ್ತು ಶಿವಮೊಗ್ಗದಲ್ಲಿ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡಂತತ್ತಿತ್ತು. ಮುಖ್ಯವಾಗಿ ಎಲ್ಲೆಡೆ ಹೆಚ್ಚುವರಿ ಪೊಲೀ ಸರನ್ನ ನಿಯೋಜಿಸಲಾಗಿತ್ತು. ವಿವಿಧ ಜಿಲ್ಲೆಗಳಲ್ಲಿ ಶಿವಮೊಗ್ಗಕ್ಕೆ ಪೊಲೀಸರನ್ನ ಕರೆಸಿಕೊಳ್ಳಲಾಗಿದ್ದು, ಪ್ರತಿ ಏರಿಯಾದಲ್ಲಿಯು ಬ್ಯಾರಿಕೇಡ್​ಗಳನ್ನ ಅಳವಡಿಸಿ ಸಂಪೂರ್ಣ ಸಂಚಾರ ಬಂದ್ ಮಾಡಲಾಗಿತ್ತು.
 
ತುಂಗಾನಗರದಲ್ಲಿ 2 ಆಟೋ ದ್ವಿಚಕ್ರ ವಾಹನಕ್ಕೆ ಬೆಂಕಿ
 
ಇನ್ನೂ ಇವತ್ತು ಬೆಳಗ್ಗಿನ ಜಾವವೇ ತುಂಗಾನಗರ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಟಿಪ್ಪುನಗರ ಹಾಗೂ ಕೊರಮರಕೇರಿಯಲ್ಲಿ ಒಟ್ಟು ಮೂರು ಆಟೋ ಹಾಗೂ 2 ದಿಚಕ್ರವಾಹನಗಳಿಗೆ ಬೆಂಕಿ ಹಾಕಿದ್ದ ಘಟನೆ ವರದಿಯಾಗಿದೆ. ಈ ಸಂಬಂಧ ತುಂಗಾನಗರ ಪೊಲೀಸ್​ ಠಾಣೆಯಲ್ಲಿ ಕೇಸ್​ ಕೂಡ ದಾಖಲಾಗಿದೆ.
 
ಭದ್ರತೆಗಾಗಿ ಹೊರ ಜಿಲ್ಲೆಗಳ ಪೊಲೀಸರ ನಿಯೋಜನೆ
 
ಇನ್ನೂ ನಿನ್ನೆಯ ಘಟಾನವಳಿಗಳ ಹಿನ್ನೆಲೆಯಲ್ಲಿ ಇವತ್ತು ಹೆಚ್ಚುವರಿ ಪೊಲೀಸರನ್ನ ನಿಯೋಜಿಸಲಾಗಿತ್ತು. ಶಿವಮೊಗ್ಗ ನಗರದ ವ್ಯಾಪ್ತಿಗೆ ಒಳಪಡುವ ಎಲ್ಲಾ ಪ್ರದೇಶಗಳಲ್ಲಿ ಮೂವರು SP , Addl SP-01, DySP-12, PI-39, PSI-54, ASI-48, HC/PC-819 ಸೇರಿದಂತೆ 20-KSRP ತುಕಡಿಗಳು, 10-DAR ತುಕಡಿಗಳು ಮತ್ತು 01-RAF ತುಕಡಿಯನ್ನು ನಿಯೋಜನೆ ಮಾಡಲಾಗಿತ್ತು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ರಾಜ್ಯಪಾಲರ ಅಂಕಿತಕ್ಕೆ ಕಳುಹಿಸಿದ್ದ ಎರಡೂ ಮಸೂದೆ ವಾಪಸ್‌, ಯಾವುದು ಗೊತ್ತಾ

ಬಳ್ಳಾರಿ ಶೂಟೌಟ್ ಪ್ರಕರಣ: ತನಿಖೆಯಲ್ಲಿ ದಿಟ್ಟ ನಿರ್ಧಾರ ಕೈಗೊಂಡ ರಾಜ್ಯ ಸರ್ಕಾರ

ಹಿ.ಪ್ರದೇಶ: ಕಂದಕಕ್ಕೆ ಉರುಳಿದ ಖಾಸಗಿ ಬಸ್‌, 9 ಮಂದಿ ಸಾವು, 40ಮಂದಿಗೆ ಗಾಯ

ಮಮತಾ ಬ್ಯಾನರ್ಜಿ ಹೆಣ್ಣು ಹುಲಿ, ಶರಣಾಗಲ್ಲ: ಮೆಹಬೂಬಾ ಮುಫ್ತಿ

ಆತ್ಮಹತ್ಯೆಗೆ ಶರಣಾದ ಡೆಂಟಲ್ ವಿದ್ಯಾರ್ಥಿನಿ, ಇದೇ ಕಾರಣಕ್ಕೆ ಪ್ರಾಣ ಕಳೆದುಕೊಂಡ್ಳ ಯುವತಿ

ಮುಂದಿನ ಸುದ್ದಿ
Show comments