ಖಾವಿಯ ಬಗ್ಗೆ ಗೌರವವಿಲ್ಲದ ಹರಿಪ್ರಸಾದ್‌ಗೆ ಡಿಎನ್‌ಎ ಪರೀಕ್ಷೆ ನಡೆಸಬೇಕು: ಹರೀಶ್ ಪೂಂಜ

Sampriya
ಸೋಮವಾರ, 28 ಅಕ್ಟೋಬರ್ 2024 (19:20 IST)
Photo Courtesy X
ಮಂಗಳೂರು: ಕಾಂಗ್ರೆಸ್ ನಾಯಕ ಬಿ.ಕೆ.ಹರಿಪ್ರಸಾದ್ ಅವರದು ಹಿಂದೂ ಡಿಎನ್‌ಎಯೇ ಆಗಿದ್ದರೆ ಸ್ವಾಮೀಜಿ ಬಗ್ಗೆ ಈ ರೀತಿ ಹೇಳಿಕೆ ನೀಡುತ್ತಿರಲಿಲ್ಲ. ಅವರ ಡಿಎನ್‌ಎ ಪರೀಕ್ಷೆ ಮಾಡಿಸಿದ್ದಲ್ಲಿ, ಅವರು ಯಾಕೆ ಹೀಗೇ ಮಾತನಾಡುತ್ತಾರೆಂದು ತಿಳಿಯುತ್ತದೆ ಎಂದು ಬೆಳ್ತಂಗಡಿಯ ಶಾಸಕ ಹರೀಶ್ ಪೂಂಜ ಹೇಳಿದರು.

ಈ ಕುರಿತು ಸುದ್ದಿಗಾರರಿಗೆ ಸೋಮವಾರ ಪ್ರತಿಕ್ರಿಯೆ ನೀಡಿದ ಅವರು, ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನತೀರ್ಥ ಸ್ವಾಮೀಜಿಯನ್ನು ಕಾಂಗ್ರೆಸ್‌ ಮುಖಂಡ ಬಿ.ಕೆ.ಹರಿಪ್ರಸಾದ್ ಪುಡಿ ರಾಜಕಾರಣಿಗಳಿಗೆ ಹೋಲಿಸಿರುವುದನ್ನು ಪೂಂಜ ಖಂಡಿಸಿ, ಆಕ್ರೋಶ ಹೊರಹಾಕಿದರು.

ಹರಿಪ್ರಸಾದ್‌ ಅವರು ಕೇಸರಿ ಹಾಗೂ ಖಾವಿ ಬಗ್ಗೆ ಗೌರವವಿಲ್ಲ. ಅವರ ಡಿಎನ್‌ಎ ಪರೀಕ್ಷೆ ಮಾಡಿಸಿದರೆ ಅದರಲ್ಲಿ ಕೇಸರಿ ಇದೆಯೇ, ಹಸಿರು ಇದೆಯೇ ಬಿಳಿ ಇದೆಯೇ ಎಂದು ತಿಳಿಯುತ್ತದೆ ಎಂದರು.

ಹಿಂದೂ ಮತ್ತು ಮುಸಲ್ಮಾನರ ಡಿಎನ್‌ಎ ಒಂದೇ ಎಂದು ಬಿ.ಕೆ.ಹರಿಪ್ರಸಾದ್ ಹಿಂದೊಮ್ಮೆ ಹೇಳಿಕೆ ನೀಡಿದ್ದರು. ಅವರ ಹೇಳಿಕೆಗೆ ನಾವು ಬದ್ಧರಾಗಿಲ್ಲ. ಹಿಂದೂಗಳದು ಶ್ರೀರಾಮನ, ಶ್ರೀ ಕೃಷ್ಣನ ಡಿಎನ್‌ಎ ಎಂದರು.

ಮುಸಲ್ಮಾನ ಧರ್ಮಗುರು ಅಥವಾ ಕ್ರೈಸ್ತರ ಪಾದ್ರಿ ಬಗ್ಗೆ ಈ ರೀತಿ ಹೇಳಿಕೆ ನೀಡಲು ಅವರಿಗೆ ತಾಕತ್ತು ಇದೆಯೇ. ಸ್ವಾಮೀಜಿ ಬಗ್ಗೆ ಈ ರೀತಿ ಮಾತನಾಡಿದ್ದಕ್ಕೆ ಹಿಂದೂ ಸಮಾಜ ಅವರಿಗೆ ತಕ್ಕ ಉತ್ತರ ನೀಡಲಿದೆ ಎಂದರು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಅಯೋಧ್ಯೆ ಕೇಸರಿ ಧ್ವಜದಿಂದ ಮುಸ್ಲಿಮರಿಗೆ ಅನ್ಯಾಯ ಎಂದ ಪಾಕ್: ನಿಮ್ದು ಎಷ್ಟಿದೆಯೋ ನೋಡ್ಕೊಳ್ಳಿ ಎಂದ ಭಾರತ

ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಭವಿಷ್ಯ ಇಂದು ತೀರ್ಮಾನಿಸಲಿದ್ದಾರೆ ಈ ನಾಲ್ವರು

ಅಧಿಕಾರ ಹಂಚಿಕೆ ಫೈಟ್ ನಡುವೆಯೇ ಬಿಜೆಪಿ, ಜೆಡಿಎಸ್ ಗೆ ಮಹತ್ವದ ಸಂದೇಶ ಕೊಟ್ಟ ಡಿಕೆ ಶಿವಕುಮಾರ್

ಒಪ್ಪಂದದ ಬಗ್ಗೆ ಸಂಚಲನ ಸೃಷ್ಟಿಸುತ್ತಿದೆ ಡಿಕೆ ಶಿವಕುಮಾರ್ ಇಂದಿನ ಟ್ವೀಟ್

ಪಹಲ್ಗಾಮ್ ದಾಳಿ ಆಂತರಿಕ ದಂಗೆ ಎಂದಿದ್ದ ಅಮೆರಿಕಾ: ಈಗ ವೈಟ್ ಹೌಸ್ ದಾಳಿಯನ್ನು ಉಗ್ರರದ್ದು ಎನ್ನುತ್ತಿದೆ

ಮುಂದಿನ ಸುದ್ದಿ
Show comments