Webdunia - Bharat's app for daily news and videos

Install App

ಯಲಹಂಕ- ಕೋಗಿಲು ಭಾಗದಲ್ಲಿ ಹಫ್ತಾ ವಸೂಲಿ ದಂಧೆ

Webdunia
ಮಂಗಳವಾರ, 7 ಫೆಬ್ರವರಿ 2023 (15:12 IST)
ಬೆಂಗಳೂರಿನಲ್ಲಿ ಮತ್ತೆ ನಟೋರಿಯಸ್ ರೌಡಿಶೀಟರ್ ಅನೀಸ್ ಅಹಮದ್ ಬಾಲ ಬಿಚ್ಚಿದ್ದಾರೆ.ಯಲಹಂಕ - ಕೋಗಿಲು‌ ಭಾಗದಲ್ಲಿ ಹಫ್ತಾ ವಸೂಲಿ ದಂಧೆ ಜೋರಾಗಿ ನಡೆಯುತ್ತಿದೆ.ಉದ್ಯಮಿಗಳು, ಅಂಗಡಿ ಮಾಲೀಕರನ್ನ ಬೆದರಿಸಿ ವಸೂಲಿ ಮಾಡ್ತಿದ್ದಾರೆ.
 
ಮಾಮೂಲಿ ಕೊಡದಿದ್ದಕ್ಕೆ ಉದ್ಯಮಿಯನ್ನ ಬೆದರಿಸಿ ದುಬಾರಿ ಕಾರು ಸುಲಿಗೆ ಮಾಡಿದ್ದಾರೆ.ಸೈಯದ್ ಇಮ್ತಿಯಾಜ್ ಎಂಬುವವರ ಥಾರ್ ಕಾರು ಕೊಂಡೊಯ್ದು ಜಖಂಗೊಳಿಸಿ ಅನೀಸ್ ಎಸ್ಕೇಪ್ ಆಗಿದ್ದಾನೆ.ಬೆಳ್ಳಹಳ್ಳಿ ಬಳಿ ತಮ್ಮದೇ ಟ್ರಾನ್ಸಪೋರ್ಟ್ ಉದ್ಯಮ ಹೊಂದಿರುವ ಇಮ್ತಿಯಾಜ್  ಬಳಿ ಜನವರಿ 23ರಂದು ಅನೀಸ್ ಹಾಗೂ ಮೆಹಬೂಬ್ ಬಂದು ಬೆದರಿಕೆ ಹಾಕಿದ್ದಾರೆ.
 
ಅನೀಸ್ ಹಣ ನೀಡುವಂತೆ ಧಮ್ಕಿ ಹಾಕಿದ್ದಾನೆ.ಇಮ್ತಿಯಾಜ್ ರನ್ನ ಬೆದರಿಸಿ ಅವರ ಥಾರ್ ಕಾರಿನೊನೊಂದಿಗೆ ಎಸ್ಕೇಪ್ ಆಗಿದ್ದಾನೆ.ಬಾಗಲೂರು ಠಾಣೆಯಲ್ಲಿ ಇಮ್ತಿಯಾಜ್ ಪ್ರಕರಣ ದಾಖಲಿಸಿದ್ದಾರೆ.ಎಫ್ಐಆರ್ ಕಾಪಿ‌ ಜೊತೆ 5 ಲಕ್ಷ ಹಣ ತಗೊಂಡು ಬರುವಂತೆ ಅನೀಸ್ ನಿಂದ ಧಮ್ಕಿ ಹಾಕಲಾಗಿದೆ.ಹಣ ನೀಡದಿದ್ದಾಗ ಕಾರನ್ನ ಜಖಂಗೊಳಿಸಿ ಬಾಣಸವಾಡಿ ಬಳಿ ಬಿಟ್ಟು ಪರಾರಿಯಾಗಿದ್ದಾನೆ.ಸದ್ಯ ಕಾರನ್ನ ವಶಕ್ಕೆ ಪಡೆದಿರುವ ಬಾಗಲೂರು‌ ಪೊಲೀಸರಿಂದ ಆರೋಪಿಗಳಿಗಾಗಿ ಶೋಧ ಕಾರ್ಯ ಮುಂದುವರೆದಿದೆ.
 
ಕೆ.ಜಿ.ಹಳ್ಳಿಯ ನಟೋರಿಯಸ್ ರೌಡಿಶೀಟರ್ ಆಗಿರುವ ಅನೀಸ್ ಅಹಮದ್ ಮೇಲೆ ಕೊಲೆ, ಕೊಲೆಯತ್ನ, ದರೋಡೆ ಸೇರಿದಂತೆ 20ಕ್ಕೂ ಅಧಿಕ‌ ಪ್ರಕರಣಗಳಿವೆ.2020ರಲ್ಲಿ ಆರೋಪಿಯ ಕಾಲಿಗೆ ಗುಂಡು ಹಾರಿಸಿ ಕೆ.ಜಿ.ಹಳ್ಳಿ ಪೊಲೀಸರು ವಶಕ್ಕೆ ಪಡೆದಿದ್ರು.

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments