ಯಲಹಂಕ- ಕೋಗಿಲು ಭಾಗದಲ್ಲಿ ಹಫ್ತಾ ವಸೂಲಿ ದಂಧೆ

Webdunia
ಮಂಗಳವಾರ, 7 ಫೆಬ್ರವರಿ 2023 (15:12 IST)
ಬೆಂಗಳೂರಿನಲ್ಲಿ ಮತ್ತೆ ನಟೋರಿಯಸ್ ರೌಡಿಶೀಟರ್ ಅನೀಸ್ ಅಹಮದ್ ಬಾಲ ಬಿಚ್ಚಿದ್ದಾರೆ.ಯಲಹಂಕ - ಕೋಗಿಲು‌ ಭಾಗದಲ್ಲಿ ಹಫ್ತಾ ವಸೂಲಿ ದಂಧೆ ಜೋರಾಗಿ ನಡೆಯುತ್ತಿದೆ.ಉದ್ಯಮಿಗಳು, ಅಂಗಡಿ ಮಾಲೀಕರನ್ನ ಬೆದರಿಸಿ ವಸೂಲಿ ಮಾಡ್ತಿದ್ದಾರೆ.
 
ಮಾಮೂಲಿ ಕೊಡದಿದ್ದಕ್ಕೆ ಉದ್ಯಮಿಯನ್ನ ಬೆದರಿಸಿ ದುಬಾರಿ ಕಾರು ಸುಲಿಗೆ ಮಾಡಿದ್ದಾರೆ.ಸೈಯದ್ ಇಮ್ತಿಯಾಜ್ ಎಂಬುವವರ ಥಾರ್ ಕಾರು ಕೊಂಡೊಯ್ದು ಜಖಂಗೊಳಿಸಿ ಅನೀಸ್ ಎಸ್ಕೇಪ್ ಆಗಿದ್ದಾನೆ.ಬೆಳ್ಳಹಳ್ಳಿ ಬಳಿ ತಮ್ಮದೇ ಟ್ರಾನ್ಸಪೋರ್ಟ್ ಉದ್ಯಮ ಹೊಂದಿರುವ ಇಮ್ತಿಯಾಜ್  ಬಳಿ ಜನವರಿ 23ರಂದು ಅನೀಸ್ ಹಾಗೂ ಮೆಹಬೂಬ್ ಬಂದು ಬೆದರಿಕೆ ಹಾಕಿದ್ದಾರೆ.
 
ಅನೀಸ್ ಹಣ ನೀಡುವಂತೆ ಧಮ್ಕಿ ಹಾಕಿದ್ದಾನೆ.ಇಮ್ತಿಯಾಜ್ ರನ್ನ ಬೆದರಿಸಿ ಅವರ ಥಾರ್ ಕಾರಿನೊನೊಂದಿಗೆ ಎಸ್ಕೇಪ್ ಆಗಿದ್ದಾನೆ.ಬಾಗಲೂರು ಠಾಣೆಯಲ್ಲಿ ಇಮ್ತಿಯಾಜ್ ಪ್ರಕರಣ ದಾಖಲಿಸಿದ್ದಾರೆ.ಎಫ್ಐಆರ್ ಕಾಪಿ‌ ಜೊತೆ 5 ಲಕ್ಷ ಹಣ ತಗೊಂಡು ಬರುವಂತೆ ಅನೀಸ್ ನಿಂದ ಧಮ್ಕಿ ಹಾಕಲಾಗಿದೆ.ಹಣ ನೀಡದಿದ್ದಾಗ ಕಾರನ್ನ ಜಖಂಗೊಳಿಸಿ ಬಾಣಸವಾಡಿ ಬಳಿ ಬಿಟ್ಟು ಪರಾರಿಯಾಗಿದ್ದಾನೆ.ಸದ್ಯ ಕಾರನ್ನ ವಶಕ್ಕೆ ಪಡೆದಿರುವ ಬಾಗಲೂರು‌ ಪೊಲೀಸರಿಂದ ಆರೋಪಿಗಳಿಗಾಗಿ ಶೋಧ ಕಾರ್ಯ ಮುಂದುವರೆದಿದೆ.
 
ಕೆ.ಜಿ.ಹಳ್ಳಿಯ ನಟೋರಿಯಸ್ ರೌಡಿಶೀಟರ್ ಆಗಿರುವ ಅನೀಸ್ ಅಹಮದ್ ಮೇಲೆ ಕೊಲೆ, ಕೊಲೆಯತ್ನ, ದರೋಡೆ ಸೇರಿದಂತೆ 20ಕ್ಕೂ ಅಧಿಕ‌ ಪ್ರಕರಣಗಳಿವೆ.2020ರಲ್ಲಿ ಆರೋಪಿಯ ಕಾಲಿಗೆ ಗುಂಡು ಹಾರಿಸಿ ಕೆ.ಜಿ.ಹಳ್ಳಿ ಪೊಲೀಸರು ವಶಕ್ಕೆ ಪಡೆದಿದ್ರು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಬಿಹಾರ ವಿಧಾನಸಭೆ ಚುನಾವಣೆ, ನಾಳೆ ಎನ್‌ಡಿಎ ಪ್ರಣಾಳಿಕೆ ಬಿಡುಗಡೆ

ಮಕ್ಕಳು ಸೇರಿದಂತೆ 17ಮಂದಿಯನ್ನು ಒತ್ತೆಯಾಳಾಗಿ ಇರಿಸಿಕೊಂಡಿದ್ದ ಆರ್ಯ ಗುಂಡೇಟಿಗೆ ಬಲಿ

ನಿಮ್ಮ ಮಗನೇ ಚಿನ್ನ ಕದ್ದಿದ್ದು ಎಂದಿದ್ದಕ್ಕೆ ಜೀವನೇ ತೆಗೆದ್ಬಿಟ್ಟ

ಇವರಿಗಿಂತ, ಇಂದಿರಾ ಗಾಂಧಿಗೆ ಧೈರ್ಯ ಜಾಸ್ತಿಯಾಗಿತ್ತು: ರಾಹುಲ್ ಗಾಂಧಿ ಕಿಡಿ

ಮಗಳ ಶವ ಮುಂದಿಟ್ಟು ಲಂಚಕ್ಕೆ ಬೇಡಿಕೆ: ತಂದೆಯ ಭಾವುಕ ಪೋಸ್ಟ್ ಬೆನ್ನಲ್ಲೇ ಪೊಲೀಸರಿಗೆ ಶಾಕ್‌

ಮುಂದಿನ ಸುದ್ದಿ
Show comments