Webdunia - Bharat's app for daily news and videos

Install App

ಹ್ಯಾಕರ್​ ಶ್ರೀಕಿ ನನಗೂ ಸಂಭಂದವಿಲ್ಲ-ವಿಷ್ಣು ಭಟ್ ಹೊಸ ಕಥೆ

Webdunia
ಸೋಮವಾರ, 8 ನವೆಂಬರ್ 2021 (19:27 IST)
ಬೆಂಗಳೂರು: ಭೀಮಾ ಜ್ಯುವಲ್ಲರ್ಸ್ ಮಾಲೀಕನ​​ ಮಗ ವಿಷ್ಣು ಭಟ್​ ಹಾಗೂ ಹ್ಯಾಕರ್​ ಶ್ರೀಕಿ ಹೋಟೆಲ್​ ಗಲಾಟೆ ಪ್ರಕರಣಕ್ಕೆ ಟ್ವಿಸ್ಟ್​ ಮೇಲೆ ಟ್ಚಿಸ್ಟ್​ ಸಿಗುತ್ತಿದ್ದು, ಇದೀಗ ಪೊಲೀಸ್​ ಬಂಧನದಲ್ಲಿರುವ ವಿಷ್ಣು ಭಟ್​ ನನಗೆ ಶ್ರೀಕಿ ಅಂದರೆ ಯಾರು ಎಂದು ಗೊತ್ತೇ ಇಲ್ಲ ಎಂದಿರುವ ಮಾಹಿತಿ ದೊರೆತಿದೆ.
 
ಸ್ನೇಹಿತ ಅಭಯ್ ನನ್ನು ಭೇಟಿಯಾಗಲು ರಾಯಲ್ ಆರ್ಚಿಡ್ ಹೋಟೆಲ್ ಗೆ ಬಂದಿದ್ದೆ ಎಂದು ಪೊಲೀಸರಿಗೆ ಹೊಸ ಕಥೆ ಹೇಳುತ್ತಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
 
ಹೋಟೆಲ್ ಒಳಗೆ ಹೋದಾಗ ಲಿಫ್ಟ್ ಹತ್ತಿ ಅಭಯ್ ಇದ್ದ ರೂಂ ಕಡೆ ಹೊರಟಿದ್ದೆ, ಆದರೆ ನಶೆಯಲ್ಲಿದ್ದ ಕಾರಣ ಅಭಯ್ ಇದ್ದ ರೂಂ ಮಿಸ್ಸಾಗಿ ಶ್ರೀಕಿ ರೂಂ ಬಾಗಿಲು ತಟ್ಟಿದೆ. ಲಿಫ್ಟ್ ನಲ್ಲೇ ಮ್ಯಾನೇಜರ್ ಮೇಲೆ ಹಲ್ಲೆ ಮಾಡಿದಕ್ಕೆ  ಹೋಟೆಲ್ ಸಿಬ್ಬಂದಿ ಹೊಯ್ಸಳಕ್ಕೆ ಕರೆ ಮಾಡಿದ್ದರು ಎಂದು ಹೇಳಿಕೆ ನೀಡಿದ್ದಾನೆ ಎನ್ನಲಾಗುತ್ತಿದೆ.
 
ಪೊಲೀಸರು ಹೋಗೋದಕ್ಕೂ ಶ್ರೀಕಿ ಬಾಗಿಲು ತೆಗೆಯೋದಕ್ಕೂ ಒಂದೇ ಟೈಮಿಂಗ್ಸ್ ಆಗಿತ್ತು. ಈ ವೇಳೆ ಶ್ರೀಕಿ‌ ಹಾಗೂ ನನ್ನ ನಡುವೆ ಮಾತಿಗೆ ಮಾತು‌ ಬೆಳೆದು ತಳ್ಳಾಟವಾಗಿತ್ತು. ಈ ಸಂದರ್ಭದಲ್ಲಿ ಪೊಲೀಸರು ಶ್ರೀಕಿ ಹಾಗೂ ನನ್ನನ್ನು ಠಾಣೆಗೆ ಕರೆತಂದರು ಎಂದು ವಿಷ್ಣು ಭಟ್​ ವಿಚಾರಣೆ ವೇಳೆ ಎಸಿಪಿ ಕುಮಾರ್ ಮುಂದೆ ಹೇಳಿದ್ದಾನೆ ಎಂದು ಪೊಲೀಸ್ ಮೂಲಗಳಿಂದ ಮಾಹಿತಿ ದೊರೆತಿದೆ.
sriki

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments