Select Your Language

Notifications

webdunia
webdunia
webdunia
webdunia

ಕಾವ್ಯಾತ್ಮಕವಾಗಿ ರಾಜೀನಾಮೆಗೆ ಕಾರಣ ನೀಡಿದ ಎಚ್. ವಿಶ್ವನಾಥ್

ಕಾವ್ಯಾತ್ಮಕವಾಗಿ ರಾಜೀನಾಮೆಗೆ ಕಾರಣ ನೀಡಿದ ಎಚ್. ವಿಶ್ವನಾಥ್
Bangalore , ಶುಕ್ರವಾರ, 23 ಜೂನ್ 2017 (11:24 IST)
ಬೆಂಗಳೂರು: ಕಾಂಗ್ರೆಸ್ ಪಕ್ಷಕ್ಕೆ ಗುಡ್ ಬೈ ಹೇಳುತ್ತಿರುವ ಹಿರಿಯ ನಾಯಕರ ಪೈಕಿಗೆ ಎಚ್. ವಿಶ್ವನಾಥ್ ಸೇರ್ಪಡೆಯಾಗಿದ್ದಾರೆ. ಇಂದು ಅಧಿಕೃತವಾಗಿ ರಾಜೀನಾಮೆ ನೀಡಿದ ವಿಶ್ವನಾಥ್, ಕಾವ್ಯಾತ್ಮಕವಾಗಿ ರಾಜೀನಾಮೆ ಪತ್ರ ಓದಿದರು.

 
ಮೂಲತಃ ಸಾಹಿತಿಯೂ ಆಗಿರುವ ವಿಶ್ವನಾಥ್ ರಾಜೀನಾಮೆ ನೀಡಲು ಕಾರಣವನ್ನು ಆಸಕ್ತಿಕರವಾಗಿ ವಿವರಿಸಿದ್ದಾರೆ. ಇದೇ ಸಂದರ್ಭದಲ್ಲಿ ಸ್ವ ಹಿತಾಸಕ್ತಿ ದೃಷ್ಟಿಯಿಂದ ಕಾಂಗ್ರೆಸ್ ಗೆ ರಾಜೀನಾಮೆ ನೀಡುತ್ತಿಲ್ಲ.

ಯಾವ ತತ್ವದ ಆಧಾರದಲ್ಲಿ ಕಾಂಗ್ರೆಸ್ ಸ್ಥಾಪನೆಯಾಯಿತೋ, ಅದರ ಆಶಯಕ್ಕೆ ತಕ್ಕಂತೆ ಅಲ್ಲಿ ಯಾವುದೂ ನಡೆಯುತ್ತಿಲ್ಲ ಎಂಬ ಕಾರಣಕ್ಕೆ ಪಕ್ಷ ಬಿಡುತ್ತೇನೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಪತ್ರಿಕಾಗೋಷ್ಠಿಯ ನಂತರ ವಿಶ್ವನಾಥ್ ಅಧಿಕೃತವಾಗಿ ರಾಜೀನಾಮೆ ಪತ್ರ ನೀಡಲಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಭೂತ ಹೇಳಿತೆಂದು ಮಗಳ ಕಿವಿ ಕತ್ತರಿಸಿದ ತಂದೆ..!