Select Your Language

Notifications

webdunia
webdunia
webdunia
webdunia

ಮಹದೇವಪ್ರಸಾದ್ ಅಕಾಲಿಕ ನಿಧನಕ್ಕೆ ದೇವೇಗೌಡ ಸಂತಾಪ

ಮಹದೇವಪ್ರಸಾದ್ ಅಕಾಲಿಕ ನಿಧನಕ್ಕೆ ದೇವೇಗೌಡ ಸಂತಾಪ
ಮಂಡ್ಯ , ಮಂಗಳವಾರ, 3 ಜನವರಿ 2017 (14:26 IST)
ಸಹಕಾರಿ ಮತ್ತು ಸಕ್ಕರೆ ಸಚಿವ ಎಚ್.ಎಸ್.ಮಹದೇವಪ್ರಸಾದ್ ಅವರ ಅಕಾಲಿಕ ನಿಧನದಿಂದ ದಿಗ್ಬ್ರಮೆಯಾಗಿದೆ ಎಂದು ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರು ಸಂತಾಪ ಸೂಚಿಸಿದರು.
 
ಮಂಡ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹದೇವಪ್ರಸಾದ್ ಅವರ ಅಕಾಲಿಕ ನಿಧನದಿಂದ ದಿಗ್ಬ್ರಮೆಯಾಗಿದೆ. ಜೊತೆಗೆ ಸಹಪಾಠಿಯನ್ನು ಕಳೆದುಕೊಂಡ ನೋವು ಕಾಡುತ್ತಿದೆ. ದೇವರು ಪ್ರಸಾದ್ ಅವರ ಕುಟುಂಬಕ್ಕೆ ದುಖಃ ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸಿದರು. 
 
ಚಿಕ್ಕಮಗಳೂರು ಜಿಲ್ಲೆಯ ಕೊಪ್ಪದಲ್ಲಿರುವ ಖಾಸಗಿ ರೆಸಾರ್ಟ‌್‌ನಲ್ಲಿ ತಂಗಿದ್ದ ಸಹಕಾರ-ಸಕ್ಕರೆ ಸಚಿವ ಸಚಿವ ಎಚ್.ಸಿ.ಮಹದೇವಪ್ರಸಾದ್ ಅವರು, ಇಂದು ಮುಂಜಾನೆ ಹೃದಯಘಾತದಿಂದ ವಿಧಿವಶರಾಗಿದ್ದರು. 
 
ಇಂದು ಸರಕಾರಿ ರಜೆ......
 
ಸಚಿವರ ಅಕಾಲಿಕ ನಿಧನದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಸರಕಾರಿ ರಜೆ ಘೋಷಿಸಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಮೋದಿ ಭಾಷಣ ಕೇವಲ ಚುನಾವಣಾ ಗಿಮಿಕ್: ಸಚಿವ ಯು.ಟಿ. ಖಾದರ್