Select Your Language

Notifications

webdunia
webdunia
webdunia
webdunia

ಗುಂಡ್ಲುಪೇಟೆ: ಸರಕಾರಿ ಅಧಿಕಾರಿ ಕಾರಿನಲ್ಲಿ ಕಂತೆ ಕಂತೆ ಹಣ ಪತ್ತೆ

ಗುಂಡ್ಲುಪೇಟೆ: ಸರಕಾರಿ ಅಧಿಕಾರಿ ಕಾರಿನಲ್ಲಿ ಕಂತೆ ಕಂತೆ ಹಣ ಪತ್ತೆ
ಗುಂಡ್ಲುಪೇಟೆ , ಶುಕ್ರವಾರ, 7 ಏಪ್ರಿಲ್ 2017 (13:21 IST)
ಉಪಚುನಾವಣೆ ನಡೆಯಲಿರುವ ಗುಂಡ್ಲುಪೇಟೆಯ ಖಾಸಗಿ ಹೋಟೆಲ್ ಮುಂದೆ ಸರಕಾರಿ ಅಧಿಕಾರಿ ಕಾರಿನಲ್ಲಿ 20 ಲಕ್ಷ ರೂಪಾಯಿಗಳ ಪತ್ತೆಯಾಗಿವೆ.
 
ವಾಯುವ್ಯ ಕರ್ನಾಟಕ ಸಾರಿಗೆ ಸಂಸ್ಥೆಯ ನಿರ್ದೇಶಕರ ಕಾರಿನಲ್ಲಿ 2 ಸಾವಿರ ಮುಖಬೆಲೆಯ ಸುಮಾರು 20 ಲಕ್ಷ ರೂಪಾಯಿಗಳು ಪತ್ತೆಯಾಗಿವೆ. ಬಿಜೆಪಿ ಕಾರ್ಯಕರ್ತರು ಕಾರಿನಲ್ಲಿ ಹಣವಿರುವುದನ್ನು ಪತ್ತೆಹಚ್ಚಿದ್ದಾರೆ.
 
ಏ.9 ರಂದು ಗುಂಡ್ಲುಪೇಟೆ, ನಂಜನಗೂಡಿನಲ್ಲಿ ನಡೆಯಲಿರುವ ಉಪಚುನಾವಣೆಯಲ್ಲಿ ಹಣ ಹಂಚಲು ಸರಕಾರಿ ಅಧಿಕಾರಿ ಕಾರಿನಲ್ಲಿ ಹಣ ತಂದಿದ್ದಾರೆ ಎಂದು ಬಿಜೆಪಿ ಮುಖಂಡರು ಆರೋಪಿಸಿದ್ದಾರೆ.
 
ಪೊಲೀಸರು ಕಾರಿನಲ್ಲಿದ್ದ ಹಣವನ್ನು ವಶಪಡಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಗುಂಡ್ಲುಪೇಟೆಯಲ್ಲಿ ಸರ್ಕಾರಿ ಕಾರಿನಲ್ಲಿದ್ದ 20 ಲಕ್ಷ ರೂ. ಪತ್ತೆ