Select Your Language

Notifications

webdunia
webdunia
webdunia
webdunia

ಗುಜರಾತ್ ಅಭಿವೃದ್ಧಿ ಮಾದರಿ ಟೊಳ್ಳು, ಕರ್ನಾಟಕ ಮಾದರಿ ಉತ್ತಮವಾಗಿದೆ: ಮೋದಿಗೆ ಸಿದ್ದರಾಮಯ್ಯ ಟಾಂಗ್

CM Siddaramaiah
ತುಮಕೂರು: ಮೋರ್ಬಿ ಘಟನೆಯ ನಂತರ 'ಗುಜರಾತ್ ಅಭಿವೃದ್ಧಿ ಮಾದರಿ'  ಟೊಳ್ಳಾಗಿದೆ.  ಆದರೆ ಕಲ್ಯಾಣ ಆಧಾರಿತ 'ಕರ್ನಾಟಕ ಮಾದರಿ' ಉತ್ತಮವಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಲಿದರು. 

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಮೂರು ವರ್ಷಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ ತುಮಕೂರಿನಲ್ಲಿ ನಡೆದ 'ಸ್ಟೀರಿಂಗ್ ಕರ್ನಾಟಕ ಅಭಿವೃದ್ಧಿಯತ್ತ' ಕಾರ್ಯಕ್ರಮದಲ್ಲಿ ಮಾತನಾಡಿದರು. 

ತಮ್ಮ ಸರ್ಕಾರವು ಅಭಿವೃದ್ಧಿ ಕಾರ್ಯಗಳು ಮತ್ತು ವ್ಯವಸ್ಥಿತ ಸುಧಾರಣೆಗಳನ್ನು ಕೈಗೊಳ್ಳುವುದರ ಜೊತೆಗೆ ₹1.40 ಲಕ್ಷ ಕೋಟಿಗೂ ಹೆಚ್ಚು ಮೌಲ್ಯದ ಕಲ್ಯಾಣ ಖಾತರಿಗಳನ್ನು ಜಾರಿಗೆ ತಂದಿದೆ ಎಂದು ಹೇಳಿದರು.

ಗುಜರಾತ್‌ನ ಮೋರ್ಬಿ ಜಿಲ್ಲೆಯಲ್ಲಿ 2,000 ರೂ. ಬಾಡಿಗೆ ಪಾವತಿಸಲು ವಿಫಲನಾದ ವ್ಯಕ್ತಿಯೊಬ್ಬ ಮನೆಯ ಮಾಲೀಕರು ಮತ್ತು ಆತನ ಸಹಾಯಕನಿಗೆ ತನ್ನ ಪತ್ನಿ ಮತ್ತು 13 ವರ್ಷದ ಮಗಳ ಮೇಲೆ ಪದೇ ಪದೇ ಅತ್ಯಾಚಾರ ಮಾಡಲು ಅವಕಾಶ ಮಾಡಿಕೊಟ್ಟಿದ್ದಾನೆ ಎಂದು ವರದಿಯಾಗಿತ್ತು. 


Share this Story:

Follow Webdunia kannada

ಮುಂದಿನ ಸುದ್ದಿ

ಮೋದಿ ಮೋದಿ ಎಂದು ಕುಣಿಯುತ್ತಿದ್ದವರಿಗೆ ಭ್ರಮನಿರಸವಾಗಿದೆ: ಸಿದ್ದರಾಮಯ್ಯ ವಾಗ್ದಾಳಿ