Select Your Language

Notifications

webdunia
webdunia
webdunia
webdunia

ಜಿಎಸ್‌ಟಿ ಅರ್ಥವ್ಯವಸ್ಥೆಯಲ್ಲಿ ಸ್ವಾತಂತ್ರ್ಯ ಕಹಳೆಯಿದ್ದಂತೆ: ಡಿವಿಎಸ್

ಜಿಎಸ್‌ಟಿ ಅರ್ಥವ್ಯವಸ್ಥೆಯಲ್ಲಿ ಸ್ವಾತಂತ್ರ್ಯ ಕಹಳೆಯಿದ್ದಂತೆ: ಡಿವಿಎಸ್
ಬೆಂಗಳೂರು , ಶುಕ್ರವಾರ, 30 ಜೂನ್ 2017 (17:24 IST)
ಜಿಎಸ್‌ಟಿ ಅರ್ಥವ್ಯವಸ್ಥೆಯಲ್ಲಿ ಸ್ವಾತಂತ್ರ್ಯ ಕಹಳೆಯಿದ್ದಂತೆ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಬಣ್ಣಿಸಿದ್ದಾರೆ.
 
ಪ್ರಧಾನಮಂತ್ರಿ ನರೇಂದ್ರ ಮೋದಿ ಒಂದೇ ದೇಶ ಒಂದೇ ತೆರಿಗೆ ಎನ್ನುವಂತೆ ಜಿಎಸ್‌ಟಿಯನ್ನು ಇಂದು ಮಧ್ಯರಾತ್ರಿ ಜಾರಿಗೊಳಿಸಲಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.
 
ಜಿಎಸ್‌ಟಿ ಜಾರಿಯಿಂದ ಮಾತ್ರ ದೇಶದ ಆರ್ಥಿಕತೆ ಸದೃಢವಾಗಲಿದೆ. ಈಗಾಗಲೇ ಅನೇಕ ದೇಶಗಳು ಜಿಎಸ್‌ಟಿಯನ್ನು ಜಾರಿಗೊಳಿಸಿ ಯಶಸ್ವಿಯಾಗಿವೆ. ಇದರಿಂದ ಭ್ರಷ್ಟಾಚಾರಕ್ಕೆ ಕಡಿವಾಣ ಬೀಳಲಿದೆ ಎಂದು ತಿಳಿಸಿದ್ದಾರೆ.
 
ಜಿಎಸ್‌ಟಿಯನ್ನು ವಿಪಕ್ಷವಾಗಿದೆ ಎನ್ನುವ ಕಾರಣಕ್ಕೆ ಕಾಂಗ್ರೆಸ್ ವಿರೋಧಿಸುತ್ತಿದೆಯೇ ಹೊರತು ಮತ್ಯಾವುದೇ ಕಾರಣಕ್ಕಲ್ಲ ಎಂದು ಲೇವಡಿ ಮಾಡಿದರು. ಕೇಂದ್ರ ಸರಕಾರ ಇಂದು ಸಂಸತ್ತಿನ ಸೆಂಟ್ರಲ್ ಹಾಲ್‌ನಲ್ಲಿ ಆಯೋಜಿಸಿದ ಕಾರ್ಯಕ್ರಮಕ್ಕೆ ವಿಪಕ್ಷಗಳು ಹಾಜರಾಗುವುದು ಸೂಕ್ತ ಎಂದು ಅಭಿಪ್ರಾಯಪಟ್ಟರು.   
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ನಾಳೆ ಹಸೆಮಣೆಯೇರಬೇಕಿದ್ದ ಯೋಧ ಅನಾರೋಗ್ಯಕ್ಕೀಡಾಗಿ ಸಾವು