Select Your Language

Notifications

webdunia
webdunia
webdunia
webdunia

ಫ್ಲೆಕ್ಸ್ ತೆರವು: ಚಾಮರಾಜನಗರದಲ್ಲಿ ಗುಂಪು ಘರ್ಷಣೆ, ಕಲ್ಲು ತೂರಾಟ

ಫ್ಲೆಕ್ಸ್ ತೆರವು: ಚಾಮರಾಜನಗರದಲ್ಲಿ ಗುಂಪು ಘರ್ಷಣೆ, ಕಲ್ಲು ತೂರಾಟ
ಚಾಮರಾಜನಗರ , ಭಾನುವಾರ, 19 ಏಪ್ರಿಲ್ 2015 (11:11 IST)
ಚಾಮರಾಜನಗರದಲ್ಲಿ ಎರಡು ಗುಂಪುಗಳ ನಡುವೆ ಮತ್ತೆ ಗುಂಪು ಘರ್ಷಣೆ ನಡೆದಿದ್ದು, ಪೊಲೀಸರು ಲಾಠಿ ಪ್ರಹಾರ ನಡೆಸಿದರು.  ನಿನ್ನೆ ರಾತ್ರಿ ಫ್ಲೆಕ್ಸ್ ತೆರವು ಸಂಬಂಧಪಟ್ಟಂತೆ ಎರಡು ಗುಂಪುಗಳ ನಡುವೆ ಘರ್ಷಣೆಯಾಗಿತ್ತು.

ಧರಣಿಯ ವೇಳೆ ಎರಡು ಗುಂಪುಗಳ ನಡುವೆ ಮತ್ತೆ ಕಲ್ಲು ತೂರಾಟ ನಡೆದು  ಸಂತೆಮರಹಳ್ಳಿ ಸರ್ಕಲ್ ಬಳಿ ಪರಿಸ್ಥಿತಿ ಉದ್ವಿಗ್ನಗೊಂಡಿದ್ದು, ಪೊಲೀಸರು ಜನರನ್ನು ಚದುರಿಸಲು ಅಶ್ರುವಾಯು ಸಿಡಿಸಿದರು.

ಉಪ್ಪಾರ ಬಡಾವಣೆ, ನಾಯಕ ಬಡಾವಣೆಯಲ್ಲಿ ನಿಷೇಧಾಜ್ಞೆ ವಿಧಿಸಲಾಗಿದೆ.ಭಗೀರಥ ಉತ್ಸವ ಆಚರಣೆ ಸಂಬಂಧ ಫ್ಲೆಕ್ಸ್ ಹಾಕಲಾಗಿತ್ತು. ಆದರೆ ಒಂದು  ಗುಂಪಿನ ಜನರು ಫ್ಲೆಕ್ಸ್ ತೆರವುಗೊಳಿಸಿದ್ದರಿಂದ ಪರಿಸ್ಥಿತಿ ಉದ್ವಿಗ್ನಗೊಂಡಿತ್ತು. ಉದ್ರಿಕ್ತರ ಗುಂಪು ಪರಿಸ್ಥಿತಿ ನಿಯಂತ್ರಣಕ್ಕೆ ಯತ್ನಿಸಿದ ಪೊಲೀಸರ ಮೇಲೂ ಕಲ್ಲುತೂರಾಟ ನಡೆಸಿದರು. ಶಾಸಕ ಪುಟ್ಟರಂಗಶೆಟ್ಟಿ ಶಾಂತಿ ಕಾಪಾಡುವಂತೆ ಮನವಿ ಮಾಡಿದರೂ ಅವರ ಎದುರೇ ಜನರು ಪರಸ್ಪರ ಕಲ್ಲುತೂರಾಟ ನಡೆಸಿದರೆಂದು ತಿಳಿದುಬಂದಿದೆ. 

Share this Story:

Follow Webdunia kannada