Select Your Language

Notifications

webdunia
webdunia
webdunia
webdunia

ಗೋವಿಂದಪುರ 6ಜನರ ಹತ್ಯೆ ಪ್ರಕರಣ: ತನಿಯಲ್ಲಿ ಮಹತ್ವದ ಬೆಳವಣಿಗೆ

Govindpur murder case
ಬೆಂಗಳೂರು: ಜಿಲ್ಲೆಯ ಭೀಮಾತೀರದ ಚಡಚಣ ತಾಲೂಕಿನ ಗೋವಿಂದಪುರ ಗ್ರಾಮದಲ್ಲಿ 6 ಜನರ ಬರ್ಬರ ಹತ್ಯೆ ಪ್ರಕರಣ ಸಂಬಂಧ ಮತ್ತೇ 6 ಆರೋಪಿಗಳನ್ನು ಬಂಧಿಸಲಾಗಿದೆ. 

ಇಲ್ಲಿನ ಅಪ್ಪುಗೌಡ ಲಗಮನಗೌಡ ಉರ್ಫ್ ಲಕ್ಕನಗೌಡ ಪಾಟೀಲ (49), ಶಂಕ್ರೆಪ್ಪ ಮಾದೇವ ಅರಕೇರಿ (33), ಅಪ್ಪಾಸಾಬ ಉರ್ಫ್ ಕಿಶನ್‌ ಶಂಕರ ಭೋವಿ (56), ಸತ್ಯೆಪ್ಪ ಜಕ್ಕಪ್ಪ ಬಿರಾದಾರ (46), ಸುಲ್ತಾನ ಮಾದೇವ ಬಿರಾದಾರ (24), ಮಹೇಶ ಬೆಳ್ಳೆಣ್ಣಿ ಬಿರಾದಾರ (25) ಬಂಧಿತ ಆರೋಪಿಗಳು.

ಈಗಾಗಲೇ ಕಳೆದ ಜೂ.1, 2026 ರಂದು 12 ಜನ ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ಹೀಗೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೂ ಒಟ್ಟು 18 ಜನ ಆರೋಪಿಗಳನ್ನು ಬಂಧನ ಮಾಡಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ತಿಳಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಬಿರಿಯಾನಿ ಹಾಗೇ ಹುಲ್ಲು ಸೇವಿಸಿದ ಯುವಕ, ಇವನ ಆರೋಗ್ಯದ ಕತೆಯೇನು, Video