Select Your Language

Notifications

webdunia
webdunia
webdunia
webdunia

ರಾಜ್ಯಪಾಲರಿಂದ ಕನ್ನಡ ಶಾಲೆ ಮುಚ್ಚಿ ಕನ್ನಡಿಗರಿಗೆ ಅವಮಾನ: ವಾಟಾಳ್

ರಾಜ್ಯಪಾಲರಿಂದ ಕನ್ನಡ ಶಾಲೆ ಮುಚ್ಚಿ ಕನ್ನಡಿಗರಿಗೆ ಅವಮಾನ: ವಾಟಾಳ್
ಬೆಂಗಳೂರು , ಶನಿವಾರ, 9 ಜುಲೈ 2016 (15:20 IST)
ನಾಲ್ಕು ದಶಕಗಳ ಇತಿಹಾಸ ಹೊಂದಿರುವ ಕನ್ನಡ ಶಾಲೆಯನ್ನು ಮುಚ್ಚಲು ಯತ್ನಿಸುವ ಮೂಲಕ ರಾಜ್ಯಪಾಲ ವಜೂಬಾಯಿ ವಾಲಾ ಅವರು ಕನ್ನಡಿಗರಿಗೆ ಅವಮಾನ ಮಾಡುತ್ತಿದ್ದಾರೆ ಎಂದು ಕನ್ನಡಪರ ಹೋರಾಟಗಾರ ವಾಟಳ್ ನಾಗರಾಜ್ ಆರೋಪಿಸಿದ್ದಾರೆ.
 
ಬೆಂಗಳೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕನ್ನಡಪರ ಹೋರಾಟಗಾರ ವಾಟಳ್ ನಾಗರಾಜ್, ಕರ್ನಾಟಕದ ರಾಜ್ಯಭವನದಲ್ಲಿರುವ ನಾಲ್ಕು ದಶಕದಷ್ಟು ಹಳೆಯ ಕನ್ನಡ ಶಾಲೆಯನ್ನು ಮುಚ್ಚಿಸಲು ರಾಜ್ಯಪಾಲರು ಯತ್ನಿಸುತ್ತಿದ್ದಾರೆ. ರಾಜ್ಯಪಾಲರ ಆದೇಶದ ಮೇರಿಗೆ ಶಾಲೆಯನ್ನು ಮುಚ್ಚಲು ಕ್ರಮ ಕೈಗೊಳ್ಳಲಾಗುತ್ತಿದೆ. ಈ ಮೂಲಕ ವಜೂಬಾಯಿ ವಾಲಾ ಅವರು ಕನ್ನಡಿಗರಿಗೆ ಅವಮಾನ ಮಾಡುತ್ತಿದ್ದಾರೆ ಎಂದು ಗಂಭೀರವಾಗಿ ಆರೋಪಿಸಿದ್ದಾರೆ.
 
ಈ ಕೂಡಲೇ ರಾಜ್ಯ ಸರಕಾರ ಮಧ್ಯ ಪ್ರವೇಶಿಸಿ ಕನ್ನಡ ಶಾಲೆ ಮುಚ್ಚದಂತೆ ರಾಜ್ಯಪಾಲರ ಮೇಲೆ ಒತ್ತಡ ಹೇರಬೇಕು. ಅವರ ಮನವೊಲಿಸಿ ಕನ್ನಡ ಶಾಲೆಯನ್ನು ಪ್ರಾರಂಭಿಸಬೇಕು ಎಂದು ಆಗ್ರಹಿಸಿದ್ದಾರೆ. ಒಂದು ವೇಳೆ ಸರಕಾರ ಕ್ರಮ ಕೈಗೊಳ್ಳದಿದ್ದರೆ, ರಾಜ್ಯಭವನದ ಮುಂದೆ ಪ್ರತಿಭಟನೆ ನಡೆಸುವುದಾಗಿ ವಾಟಾಳ್ ನಾಗಾರಾಜ್ ಎಚ್ಚರಿಕೆ ನೀಡಿದ್ದಾರೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಡಿ.ಕೆ.ರವಿಯದ್ದು ಪ್ರೇಮ ಪ್ರಸಂಗ, ಹಂಡಿಭಾಗ್‌ರದ್ದು ಕಿಡ್ನಾಪ್ ಕೇಸ್, ಗಣಪತಿಯವರನ್ನು ಹುಚ್ಚರೆಂತಿದ್ದಾರೆ: ಕುಮಾರಸ್ವಾಮಿ