Select Your Language

Notifications

webdunia
webdunia
webdunia
webdunia

ರಾಜ್ಯದ ಜನತೆಗೆ ದರ ಏರಿಕೆಯ ಕರೆಂಟ್ ಶಾಕ್ ನೀಡಿದ ಸರಕಾರ

ರಾಜ್ಯದ ಜನತೆಗೆ ದರ ಏರಿಕೆಯ ಕರೆಂಟ್ ಶಾಕ್ ನೀಡಿದ ಸರಕಾರ
ಬೆಂಗಳೂರು , ಸೋಮವಾರ, 10 ಏಪ್ರಿಲ್ 2017 (20:24 IST)
ನಂಜನಗೂಡು, ಗುಂಡ್ಲುಪೇಟೆ ಉಪಚುನಾವಣೆ ಹಿನ್ನೆಲೆಯಲ್ಲಿ ದರ ಪರಿಷ್ಕರಣೆಯನ್ನು ತಡೆಹಿಡಿದಿದ್ದ ಸರಕಾರ ಇದೀಗ ಪ್ರತಿ ಯೂನಿಟ್‌ಗೆ 1.49 ಪೈಸೆ ಹೆಚ್ಚಳಗೊಳಿಸಿ ಆದೇಶ ಹೊರಡಿಸಿದೆ.
 
ನಾಳೆ ನಡೆಯಲಿರುವ ಸಭೆಯಲ್ಲಿ ದರ ಏರಿಕೆಯನ್ನು ಸರಕಾರ ಪ್ರಕಟಿಸಲಿದ್ದು, ಬಿಸಿಲಿನ ಬೇಗೆಯಿಂದ ಕಂಗಾಲಾಗಿರುವ ಜನತೆಗೆ ಕರೆಂಟ್ ಶಾಕ್ ಮತ್ತಷ್ಟು ಬಿಸಿಯನ್ನು ಮುಟ್ಟಿಸಲಿದೆ.
 
ಕರೆಂಟ್ ದರವನ್ನು ಹೆಚ್ಚಿಸುವಂತೆ ರಾಜ್ಯದ ಎಸ್ಕಾಂಗಳು ಸರಕಾರದ ಮುಂದೆ ಪ್ರಸ್ತಾವನೆ ಸಲ್ಲಿಸಿದ್ದವು. ಆದರೆ, ಉಪಚುನಾವಣೆ ನಿಮಿತ್ಯವಾಗಿ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ದರ ಪರಿಷ್ಕರಣೆಯನ್ನು ಕೆಲ ಕಾಲ ಮುಂದೂಡಲಾಗಿತ್ತು.
 
ಏಪ್ರಿಲ್ 1 ರಿಂದಲೇ ನೂತನ ದರ ಜಾರಿಗೆ ಬರುವುದಾಗಿ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗದ ಮೂಲಗಳು ತಿಳಿಸಿವೆ. 
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಕಣ್ಣಿಗೆ ಬಟ್ಟೆ ಕಟ್ಟಿ 7 ಗಂಟೆಗಳ ಕಾಲ ಕೀಬೋರ್ಡ್ ನುಡಿಸಿದ ಪೋರ