Webdunia - Bharat's app for daily news and videos

Install App

ಬಿಬಿಎಂಪಿ ಇಂದ ಪುಡ್ ಪ್ರಿಯರಿಗೆ ಗುಡ್ ನ್ಯೂಸ್

Webdunia
ಸೋಮವಾರ, 18 ಜುಲೈ 2022 (17:26 IST)
ನಾಳೆಯಿಂದ ನಿಮ್ಮ ಮನೆಗೆ ಡಿಲೇವರಿ ಆಗುತ್ತೆ ಬೀದಿ ಬದಿಯ ಸ್ವೇಷಲ್ ಪುಡ್.ಹೈ ಫೈ ಹೊಟೇಲ್ ಗುಣಮಟ್ಟದಂತೆ ನಿಮಗೆ ತಲುಪುತ್ತೆ ಆಹಾರ.ವಿನೂತನ ಪ್ರಯೋಗಕ್ಕೆ ಈಗ  ಬಿಬಿಎಂಪಿ ಮುಂದಾಗಿದ್ದು,ಬೀದಿ ಬದಿ ಆಹಾರ  ಮಾರಟಗಾರರ ವಹಿವಾಟು ಹೆಚ್ಚಿಸಲು ಬಿಬಿಎಂಪಿ ಚಿಂತನೆ ನಡೆಸಿದೆ.ಆನ್ ಲೈನ್ ನಲ್ಲಿ ಬೀದಿ ಬದಿ ಆಹಾರ  ಮಾರಟಕ್ಕೆ ಬಿಬಿಎಂಪಿ  ವೇದಿಕೆ ಕಲ್ಪಿಸಿದೆ.ಪ್ರತಿಷ್ಟಿತ ಸ್ವಿಗ್ಗಿ,ಜೊಮೇಟೊ ದಂತಹ ಆನ್ ಲೈನ್ ಡಿಲವರಿ ಆ್ಯಫ್ ಗಳ ಜೊತೆ ಒಪ್ಪಂದಕ್ಕೆ ಮಾಡಿಕೊಳ್ಳಲು ಸಿದ್ದತೆ ಕೂಡ ನಡೆಸಿದೆ.ಗುಣಮಟ್ಟದ ಆಹಾರ ಪೊರೈಸಲು ಬೀದಿ ಬದಿ ಆಹಾರ ಮಾರಾಟಗಾರರಿಗೆ ತರಬೇತಿ ನೀಡಲು ಮುಂದಾಗಿದ್ದು ,ಕೇಂದ್ರ ಸರ್ಕಾರದ ದೀನದಯಾಳ್ ಅಂತ್ಯೋದಯ ಯೋಜನೆ-ರಾಷ್ಟ್ರೀಯ ನಗರ ಜೀವನೋಪಾಯ ಮಿಷನ್ (ಡೆ-ನಲ್‌ಮ್‌)ಅಡಿಯಲ್ಲಿ  ತರಬೇತಿ  ನೀಡಲು ಸಿದ್ಧತೆ ನಡೆಸಿದೆ.ಆಹಾರ ತಯಾರಿಕೆ ವೇಳೆ ಸ್ವಚ್ಛತೆ ಮತ್ತು ಗುಣಮಟ್ಟ ಕಾಪಾಡಿಕೊಳ್ಳುವ ಬಗ್ಗೆ ತರಬೇತಿ ನೀಡುತ್ತಿದ್ದಾರೆ.ಬಿಬಿಎಂಪಿ ಅಧಿಕಾರಿಗಳಿಂದ ಆಗಸ್ಟ್ 15 ರೊಳಗೆ ಯೋಜನೆ ಪೂರ್ಣಗೊಳಿಸುವ ಭರವಸೆ ಕೂಡ ನೀಡಿದ್ದಾರೆ.ಅದಕ್ಕಾಗಿ ನಗರದಲ್ಲಿ ಬೀದಿ ಆಹಾರ ಮಾರಟಗಾರರ ಬಳಿ ಬಿಬಿಎಂಪಿ ಮಾಹಿತಿ ಕಲೆ ಹಾಕಿದೆ.
 
ನಗರದಲ್ಲಿ 40 ಸಾವಿರ ಬೀದಿಬದಿ ಅಹಾರ ಮಾರಾಟಗಾರರಿರುವ ಕುರಿತಂತೆ ಅಂದಾಜು ನಡೆಸಿದೆ.ಇದಕ್ಕಾಗಿ ಬಿಬಿಎಂಪಿಯಿಂದ ಬೀದಿ ಮಾರಟಗಾರರಿಗೆ ಸೀಗುವ ಸವಲತ್ತು, ಮಾರಾಟ ವಿಸ್ತರಿಸಲು ಅವಕಾಶ ನೀಡುವುದು. ಸೇರಿದಂತೆ ಬಿಬಿಎಂಪಿಯಿಂದ ಸಾಲವನ್ನೂ ಕೊಡಿಸುವುದು ಹೀಗೆ ನಾನಾ ಪ್ಲ್ಯಾನ್ ಬಿಬಿಎಂಪಿ ಮಾಡಿಕೊಂಡಿದೆ . ಇನ್ನು ಪಾಲಿಕೆ  ನಿಗದಿ ಮಾಡಿದ ಬ್ಯಾಂಕ್‌ಗಳಿಂದ 2 ಲಕ್ಷದವರಗೆ ಸಾಲ ನೀಡಲಾಗ್ತದೆ.ಆಹಾರ ಸರಬರಾಜು ಆ್ಯಫ್ ಗಳ ಜೊತೆ ಒಡಂಬಡಿಕೆ ಮಾಡಿಕೊಳ್ಳಲು ಕೂಡ ಬಿಬಿಎಂಪಿ   ಸಹಕಾರ ನೀಡುತ್ತದೆ.
 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಸಾಲು ಸಾಲು ಪ್ರತಿಭಟನೆ ಬೆನ್ನಲ್ಲೇ ದೊಡ್ಡ ಮಟ್ಟದ ಸಭೆ ನಡೆಸಿದ ಮಲ್ಲಿಕಾರ್ಜುನ ಖರ್ಗೆ

ಆರ್ಯಭಟ್ಟರು ಸೊನ್ನೆಯಿಂದ ಇತಿಹಾಸ ನಿರ್ಮಿಸಿದರು: ಪ್ರಧಾನಿ ಮೋದಿ

ಲಕ್ಷ್ಮೀ ಹೆಬ್ಬಾಳಕರ, ರಾಜ್ಯಪಾಲರ ಸಹಿ ನಕಲು ಮಾಡಿ ಲಕ್ಷಾಂತರ ವಂಚನೆ: ಬಿಗ್ ಅಪ್ಡೇಟ್ ನೀಡಿದ ಎಸ್‌ಪಿ

ಲಾಲ್‌ ಬಾಗ್‌, ಕಬ್ಬನ್ ಪಾರ್ಕ್‌ನಂತಹ ಇನ್ನಷ್ಟು ಉದ್ಯಾನವನಗಳ ಅಗತ್ಯವಿದೆ: ಈಶ್ವರ್ ಖಂಡ್ರೆ

ವಿಧಾನಸಭೆಯಲ್ಲೂ ಪ್ರತಿಧ್ವನಿಸಿದ ಧರ್ಮಸ್ಥಳ ಶವ ಹೂತಿಟ್ಟ ಪ್ರಕರಣ: ವರದಿ ಬಿಡುಗಡೆಗೆ ಬಿಜೆಪಿ ಆಗ್ರಹ

ಮುಂದಿನ ಸುದ್ದಿ
Show comments