Select Your Language

Notifications

webdunia
webdunia
webdunia
webdunia

ಜಾತಿ ವ್ಯವಸ್ಥೆ ಮಾಡಿದ್ದು ದೇವರಲ್ಲ, ಸ್ವಾರ್ಥಿಗಳು: ಸಿಎಂ ಸಿದ್ದರಾಮಯ್ಯ

ಜಾತಿ ವ್ಯವಸ್ಥೆ ಮಾಡಿದ್ದು ದೇವರಲ್ಲ, ಸ್ವಾರ್ಥಿಗಳು: ಸಿಎಂ ಸಿದ್ದರಾಮಯ್ಯ
ಮೈಸೂರು , ಬುಧವಾರ, 1 ಫೆಬ್ರವರಿ 2017 (18:31 IST)
ಜಾತಿ ವ್ಯವಸ್ಥೆ ಮಾಡಿದ್ದು ದೇವರಲ್ಲ. ಸಮಾಜದಲ್ಲಿ ಬದುಕಲು ಅವಕಾಶ ಸಿಕ್ಕ ಸ್ವಾರ್ಥಿಗಳು ಜಾತಿ ವ್ಯವಸ್ಥೆ ನಿರ್ಮಾಣ ಮಾಡಿದ್ದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬೇಸರ ವ್ಯಕ್ತಪಡಿಸಿದ್ದಾರೆ.
 
ಮೈಸೂರು ಜಿಲ್ಲೆಯ ಜೆ.ಕೆ.ಮೈದಾನದಲ್ಲಿ ಏರ್ಪಡಿಸಲಾಗಿದ್ದ ಶ್ರೀ ಮಾಚಿದೇವರ ಜಯಂತ್ಯುತ್ಸವ ಹಾಗೂ ಜಾಗೃತ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಸಮಾಜದಲ್ಲಿ ಜಾತಿ ವ್ಯವಸ್ಥೆ ಆಳವಾಗಿ ಬೇರೂರಿದೆ. ಸಂತರು ಹಾಗೂ ಶರಣರು ಸಮಾಜದಲ್ಲಿ ಜಾತಿ ವ್ಯವಸ್ಥೆ ವಿರುದ್ಧ ಹೋರಾಟ ಮಾಡಿ ಜಾಗೃತಿ ಮೂಡಿಸಿದರು. ಅ7ರ ಕಲಿಯುವ ಅವಕಾಶ ಸಿಕ್ಕರೆ ಆರ್ಥಿಕ ಹಾಗೂ ಸಾಮಾಜಿಕವಾಗಿ ಹಿಂದುಳಿಯುವುದಿಲ್ಲ. ಆದರೆ, ಶಿಕ್ಷಣದಿಂದ ವಂಚಿತರಾದವರ ಮೇಲಿನ ಶೋಷಣೆ ಹೆಚ್ಚಾಗತೊಡಗುತ್ತವೆ. ಇಂದಿಗೂ ಶೂದ್ರ ಜನಾಂಗ ಅಕ್ಷರ ಸಂಸ್ಕೃತಿಯಿಂದ ವಂಚಿತರಾಗಿದ್ದಾರೆ. ಇಂತಹ ಜನಾಂಗಕ್ಕೆ ಶಿಕ್ಷಣದ ಅಗತ್ಯವಿದೆ ಎಂದು ತಿಳಿಸಿದರು. 
 
ಮಡಿವಾಳ ಜನಾಂಗವನ್ನು ಎಸ್‌ಎಸಿ ವರ್ಗಕ್ಕೆ ಸೇರಿಸಲು ಕ್ಯಾಬಿನೆಟ್‌ನಲ್ಲಿ ಚರ್ಚೆ ನಡೆಯಬೇಕು. ಅಲ್ಲಿನ ತೀರ್ಮಾನದಂತೆ ಕೇಂದ್ರ ಸರಕಾರಕ್ಕೆ ಶಿಫಾರಸ್ಸು ಮಾಡಲಾಗುತ್ತದೆ ಎಂದು ಸ್ಪಷ್ಟಪಡಿಸಿದರು. 
 
ಮಂದಿನ ವರ್ಷದಿಂದ ಮಡಿವಾಳ ಮಾಚಿದೇವರ ಜಯಂತ್ಯುತ್ಸವವನ್ನು ರಾಜ್ಯ ಸರಕಾರದ ವತಿಯಿಂದಲೇ ಆಚರಣೆ ಮಾಡಲಾಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಹಿತಿ ನೀಡಿದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಉಗ್ರ ಹಫೀಜ್ ಸಯೀದ್ ವಿರುದ್ಧ ಎಫ್‌ಐಆರ್ ದಾಖಲು: ಪಾಕ್ ಸಚಿವ