Select Your Language

Notifications

webdunia
webdunia
webdunia
webdunia

ರಾಜ್ಯ ಸರಕಾರ ನನಗೆ ನೀಡಿ, ಸಾಕ್ಷಿ ನೀಡುತ್ತೇನೆ: ಕರಂದ್ಲಾಜೆ ಸವಾಲ್

ರುದ್ರೇಶ್ ಹತ್ಯೆ ಪ್ರಕರಣ
ಮೈಸೂರು , ಸೋಮವಾರ, 7 ನವೆಂಬರ್ 2016 (14:00 IST)
ಬಿಜೆಪಿ ಮುಖಂಡ ರುದ್ರೇಶ್ ಹತ್ಯೆ ಪ್ರಕರಣದಲ್ಲಿ ಸರಕಾರದ ಕೈವಾಡವಿದೆ. ಒಂದು ವೇಳೆ ರಾಜ್ಯ ಸರಕಾರ ನನಗೆ ನೀಡಿದ್ರೆ ಸಾಕ್ಷಿ ನೀಡುತ್ತೇನೆ ಎಂದು ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ಗುಡುಗಿದ್ದಾರೆ.
 
ರುದ್ರೇಶ್ ಹತ್ಯೆಯ ಹಿಂದೆ ಸಚಿವ ರೋಷನ್ ಬೇಗ್ ಕೈವಾಡವಿ ಎನ್ನುವುದಕ್ಕೆ ಪ್ರಕರಣದ ತನಿಖೆ ನಡೆಸುತ್ತಿರುವ ಅಧಿಕಾರಿಗಳ ಬಳಿ ಸಾಕ್ಷ್ಯಗಳಿವೆ. ಆದರೆ, ರಾಜ್ಯ ಸರಕಾರ ತನಿಖಾಧಿಕಾರಿಗಳ ಮೇಲೆ ಒತ್ತಡ ಹೇರಿ ಪ್ರಕರಣ ಮುಚ್ಚಿಹಾಕಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದರು.
 
ಯಾವುದೇ ಸಾಕ್ಷಿಯಿಲ್ಲದೇ ಆರೋಪ ಮಾಡುತ್ತಿದ್ದೇನೆ ಎಂದು ಕಾಂಗ್ರೆಸ್ ಮುಖಂಡರು ಆರೋಪಿಸುತ್ತಿದ್ದಾರೆ. ಆದರೆ, ನಾವು ಹಿಂದೆ ಸರಕಾರ ನಡೆಸಿದ್ದೇವೆ. ನನಗೆ ಕೆಲ ಮೂಲಗಳು ಗೊತ್ತಿರುವುದರಿಂದ ಮಾಹಿತಿ ಲಭಿಸಿದೆ ಎಂದರು.
 
ಮುಖ್ಯಮಂತ್ರಿ ಸಿದ್ದರಾಮಯ್ಯ ಸರಕಾರಕ್ಕೆ ತಾಕತ್ ಇದ್ರೆ ಪ್ರಕರಣವನ್ನು ಎನ್‌ಐಎ ತನಿಖಾ ಸಂಸ್ಥೆಗೆ ನೀಡಲಿ. ಇಲ್ಲವಾದ್ರೆ ನನ್ನ ಕೈಗೆ ಸರಕಾರ ನೀಡಿ ಸಾಕ್ಷಿಗಳನ್ನು ನಾನು ನೀಡುತ್ತೇನೆ ಎಂದು ಸವಾಲ್ ಹಾಕಿದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

Share this Story:

Follow Webdunia kannada

ಮುಂದಿನ ಸುದ್ದಿ

ಬೆಳಗಾವಿಯಲ್ಲಿ ಕನ್ನಡ ಶಾಲೆಗೆ ಬೆಂಕಿ ಹಚ್ಚಿದ ದುಷ್ಕರ್ಮಿಗಳು