Select Your Language

Notifications

webdunia
webdunia
webdunia
webdunia

ಬೆಂಗಳೂರಿನಲ್ಲಿ ಮತ್ತೆ ಅತ್ಯಾಚಾರ

ಬೆಂಗಳೂರಿನಲ್ಲಿ ಮತ್ತೆ ಅತ್ಯಾಚಾರ
ಬೆಂಗಳೂರು , ಶುಕ್ರವಾರ, 29 ಏಪ್ರಿಲ್ 2016 (08:35 IST)
ಪಡೆದುಕೊಂಡಿದ್ದ ಸಾಲದ ಹಣ ಮರಳಿಸುವ ನೆಪದಲ್ಲಿ ಯುವತಿಯನ್ನು ಕರೆದೊಯ್ದು ಸಾಮೂಹಿಕ ಅತ್ಯಾಚಾರವೆಸಗಿದ ಘಟನೆ ನಗರದಲ್ಲಿ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. 
 
ಆರೋಪಿಗಳನ್ನು ಮಂಗಮ್ಮನಪಾಳ್ಯ ನಿವಾಸಿಗಳಾದ ದೀಪಕ್ ಹಾಗೂ ರಮೇಶ್  ಎಂದು ಗುರುತಿಸಲಾಗಿದೆ.
 
ಮಹಾರಾಷ್ಟ್ರ ಮೂಲದ ಯುವತಿ 6 ತಿಂಗಳ ಹಿಂದೆ ಕೆಲಸ ಹುಡುಕಿಕೊಂಡು ನಗರಕ್ಕೆ ಬಂದಿದ್ದು ಆಗ ಪರಿಚಿತನಾದ ದೀಪಕ್ ಆಕೆಯಿಂದ ಹಣ ಸಾಲ ಪಡೆದಿದ್ದ. ಎಷ್ಟು ಪ್ರಯತ್ನಪಟ್ಟರೂ ಆಕೆಗೆ ಕೆಲಸ ಸಿಕ್ಕಿರಲಿಲ್ಲ. ಕೆಲಸ ಸಿಗದಿದ್ದರಿಂದ ಜೀವನ ನಿರ್ವಹಣೆ ಕಷ್ಟವಾಗಿ, ಹಣ ವಾಪಸ್ ಕೊಡುವಂತೆ ಯುವತಿ ಕೇಳಿದ್ದಳು.
 
ಸರಿ ಕೊಡುತ್ತೇನೆ ಎಂದು ಭರವಸೆ ನೀಡಿದ್ದ ದೀಪಕ್ ಸೋಮವಾರ ರಾತ್ರಿ ಯುವತಿಯನ್ನು ಮಂಗಮ್ಮನಪಾಳ್ಯ ಮುನೇಶ್ವರ ವೃತ್ತಕ್ಕೆ ಕರೆಯಿಸಿಕೊಂಡಿದ್ದ. 
 
ಬಳಿಕ ಸ್ನೇಹಿತನಿಂದ ಹಣ ಪಡೆದುಕೊಂಡು ನೀಡುವುದಾಗಿ ಹೇಳಿ ಮನೆಗೆ ಕರೆದುಕೊಂಡು ಹೋಗಿ ಹಣ ಕೊಡಿಸುವುದಾಗಿ ಹೇಳಿ ಮನೆಗೆ ಕರೆದೊಯ್ದು ಅತ್ಯಾಚಾರ ಎಸಗಿದ್ದ. ಅಲ್ಲಿಗೆ ಬಂದ ದೀಪಕ್ ಸ್ನೇಹಿತ ರಮೇಶ್ ಸಹ ಆಕೆಯ ಮೇಲೆ ಅತ್ಯಾಚಾರ ಎಸಗಿದ. 
 
ಬೆಳಗಾಗುತ್ತಿದ್ದಂತೆ ಅವರಿಂದ ತಪ್ಪಿಸಿಕೊಂಡು ಬಂದ ಯುವತಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾಳೆ. ಬೊಮ್ಮನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

 
ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆ್ಯಪ್‌ನ್ನು ಡೌನ್‌ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ವಿಜಯ್ ಮಲ್ಯ ಗಡಿಪಾರಿಗೆ ಬ್ರಿಟನ್‌ಗೆ ಕೇಂದ್ರ ಸರಕಾರ ಪತ್ರ