Webdunia - Bharat's app for daily news and videos

Install App

ಸಿಎಂ ಬಿ.ಎಸ್.ಯಡಿಯೂರಪ್ಪಗೆ ಘೇರಾವ್

Webdunia
ಶುಕ್ರವಾರ, 4 ಅಕ್ಟೋಬರ್ 2019 (18:12 IST)
ಗಡಿ ಜಿಲ್ಲೆ ಬೆಳಗಾವಿ ಪ್ರವಾಸದಲ್ಲಿರುವ ಸಿಎಂ ವಿರುದ್ಧ ರೈತರು ಧಿಕ್ಕಾರ ಕೂಗಿದ್ದಾರೆ. ಸರ್ಕಾರ- ಸಿಎಂ ವಿರುದ್ಧ ಘೋಷಣೆ ಕೂಗಿರುವ ಬೆಳೆಗಾರರು, ಬೊಬ್ಬೆ ಹೊಡೆದುಕೊಂಡು ಸಂಸದರ ವಿರುದ್ಧ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಕಿಡಿ ಕಾರಿದ್ದಾರೆ. 

ಪ್ರವಾಹದಿಂದ ಆದ ಬೆಳೆಹಾನಿ ಪರಿಹಾರ ಕೊಡುವಂತೆ ಆಗ್ರಹಿಸಿ ಬೆಳಿಗ್ಗೆ ಬೆಳಗಾವಿಯ ಪ್ರವಾಸಿ ಮಂದಿರದ ಬಳಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪಗೆ ಘೇರಾವ್ ಹಾಕಲು ರೈತರು ಬಂದಿದ್ದರು. ಆದರೆ ಘೇರಾವ್ ಹಾಕಲು ಬಂದಿದ್ದ ರೈತರನ್ನು ತಡೆದು ಪೊಲೀಸರು ಬಂಧಿಸಿದರು.

ಪ್ರವಾಹಕ್ಕೆ ನಾಶವಾದ ಬೆಳೆಗೆ ಪರಿಹಾರ ನೀಡುವಂತೆ ರೈತರ ನಿಯೋಗ ಸಿಎಂ ಭೇಟಿ ಮಾಡಿತ್ತು. ರೈತರಿಗೆ ಸಿಎಂ‌ ಕಡೆಯಿಂದ ಸಮರ್ಪಕ ಸ್ಪಂದನೆ ಸಿಕ್ಕಿರಲಿಲ್ಲ. ಹೀಗಾಗಿ ಸಿಎಂ ಹೋದಲೆಲ್ಲ ಘೇರಾವ್ ಹಾಕಲು ರೈತರು ತೀರ್ಮಾನಿಸಿದ್ದರು. ಬೆಳಿಗ್ಗೆ ಸಾರ್ವಜನಿಕ ಅಹವಾಲು ಸ್ವೀಕಾರ ಬಳಿಕ ಸಿಎಂ ಅಥಣಿ ತಾಲೂಕಿಗೆ ಪ್ರಯಾಣ ಬೆಳೆಸುವ ವೇಳೆ ಪ್ರವಾಸಿ ಮಂದಿರದ ಗೇಟ್ ಬಳಿ ರೈತರು‌ ಅಡ್ಡ ಮಲಗಿ ಪ್ರತಿಭಟನೆಗೆ ಮುಂದಾಗಿದ್ದಾರೆ. ಆಗ ರೈತರನ್ನು ತಡೆಯಲು ಪೊಲೀಸರು ಮುಂದಾಗಿದ್ದಾರೆ.‌

ಸಿಎಂ ವಾಹನಕ್ಕೆ ರೈತರು ಮುತ್ತಿಗೆ ಹಾಕುತ್ತಿದ್ದಂತೆ ರೈತರನ್ನು ಎಳೆದಾಡಿ ಪೊಲೀಸರು ‌ಬಂಧಿಸಿದರು. ಬಳಿಕ ರೈತರನ್ನು‌ ಬಂಧಿಸಿ ಎಪಿಎಂಸಿ ‌ಠಾಣೆಗೆ ಕರೆ ತಂದರು.

ಎಪಿಎಂಸಿ ಠಾಣೆಯಲ್ಲಿರುವ ರೈತರು, ಸರ್ಕಾರ- ಸಿಎಂ ವಿರುದ್ಧ ಘೋಷಣೆ ಕೂಗಿದ್ರು. ಬೊಬ್ಬೆ ಹೊಡೆದುಕೊಂಡು ಸಂಸದರ ವಿರುದ್ಧ ಮತ್ತು ಕೇಂದ್ರ ಸರ್ಕಾರದ ವಿರುದ್ಧ ರೈತರು ಧಿಕ್ಕಾರ ಕೂಗಿದರು.


ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

MahakumbhMela: ನಾಪತ್ತೆಯಾಗಿದ್ದ ಚಿಕ್ಕಮಗಳೂರಿನ ಅರ್ಚಕ 6 ತಿಂಗಳ ಬಳಿಕ ಪತ್ತೆ

Bengaluru: ಇಬ್ಬರು ಮಕ್ಕಳಿದ್ದರು ಮತ್ತೇ ಪ್ರೀತಿಯಲ್ಲಿ ಬಿದ್ದ ಮಹಿಳೆ, ಬದುಕು ದುರಂತ ಅಂತ್ಯ

B Dayanand: ಬಿ ದಯಾನಂದ್ ಎಷ್ಟು ಕರ್ತವ್ಯ ನಿಷ್ಠರು ಎನ್ನುವುದಕ್ಕೆ ಈ ವಿಡಿಯೋನೇ ಸಾಕ್ಷಿ

ಬಿಜೆಪಿ ನಾಯಕರಿಗೆ ಎರಡು ನಾಲಿಗೆ, ಗಳಿಗೆಗೊಂದು ಬಣ್ಣ: ಸಿಎಂ ಸಿದ್ದರಾಮಯ್ಯ

Indore murder: ಖತರ್ನಾಕ್ ಸೋನಮ್ ರಘುವಂಶಿ ಲವ್ವರ್ ಫೋಟೋ ರಿವೀಲ್: ಇವನಿಗಾಗಿ ಇಷ್ಟೆಲ್ಲಾ ಮಾಡಿದ್ಳಾ

ಮುಂದಿನ ಸುದ್ದಿ
Show comments