Webdunia - Bharat's app for daily news and videos

Install App

ಗೀತಾ ವಿಷ್ಣು ತಮಿಳುನಾಡಿಗೆ ಎಸ್ಕೇಪ್..!

Webdunia
ಸೋಮವಾರ, 2 ಅಕ್ಟೋಬರ್ 2017 (13:47 IST)
ಸೆ.29ರಂದು ಸೌತ್ ಎಂಡ್ ಸರ್ಕಲ್`ನಲ್ಲಿ ನಡೆದಿದ್ದ ಻ಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಉದ್ಯಮಿ ಆದಿಕೇಶವುಲು ಮೊಮ್ಮಗ ಗೀತಾ ವಿಷ್ಣು ಬಂಧನಕ್ಕೆ ಬಲೆ ಬೀಸಿರುವುದಾಗಿ ಡಿಸಿಪಿ ಶರಣಪ್ಪ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಸೆ.29ರಂದು ಘಟನೆ ಬಳಿಕ ಮಲ್ಯ ಆಸ್ಪತ್ರೆಗೆ ದಾಖಲಾಗಿದ್ದ ಗೀತಾ ವಿಷ್ಣು ಅಲ್ಲಿಂದಲೇ ಎಸ್ಕೇಪ್ ಆಗಿದ್ದ. ಬಳಿಕ ಸ್ನೇಹಿತ ವಿನಯ್ ಜೊತೆ ವೋಲ್ವೋ ಕಾರಿನಲ್ಲಿ  ಶಾಂತಿನಿಕೇತನ ಅಪಾರ್ಟ್`ಮೆಂಟ್`ಗೆ ತೆರಳಿದ್ದಾನೆ. ಅಲ್ಲಿಂದ ಮೂವರೂ ಹೈದ್ರಾಬಾದ್`ಗೆ ತೆರಳಿದ್ದಾರೆ. ಗೀತಾ ವಿಷ್ಣು ಹೈದ್ರಾಬಾದ್`ನ ಸಂಬಂಧಿಕರ ಮನೆಗೆ ತೆರಳಿರುವ ಮಾಹಿತಿ ಆಧರಿಸಿ ಪೊಲೀಸರ ತಂಡ ಸಹ ಹೈದ್ರಾಬಾದ್`ಗೆ ತೆರಳಿದೆ. ಆದರೆ, ಪೊಲೀಸರು ಬರುತ್ತಿರುವ ಮಾಹಿತಿ ಅರಿತ ಗೀತಾ ವಿಷ್ಣು ಅಲ್ಲಿಂದಲೂ ಕಾಲ್ಕಿತ್ತಿದ್ದು, ತಮಿಳುನಾಡಿನ ಮತ್ತೊಬ್ಬ ಸಂಬಂಧಿಕರ ಮನೆಗೆ ದೌಡಾಯಿಸಿದ್ದಾನೆ ಎಂದು ಡಿಸಿಪಿ ತಿಳಿಸಿದ್ದಾರೆ.

ಇತ್ತ, ಬೆಂಗಳೂರಿನಲ್ಲಿ ಪ್ರಕರಣದ ತನಿಖೆ ಚುರುಕುಗೊಳಿಸಿರುವ ಪೊಲಿಸರು ಅಪಘಾತಕ್ಕೂ ಮುನ್ನ ಪಾರ್ಟಿ ಮಾಡಿದ್ದ ಎಲ್ಲರಿಗೂ ನೋಟಿಸ್ ನೀಡಿದ್ದು, ವಿಚಾರಣೆ ನಡೆಸುತ್ತಿದ್ದಾರೆ. ಪ್ರಣವ್ ದೇವರಾಜ್, ಶಶಾಂಕ್ ವಿಚಾರಣೆಗೆ ಹಾಜರಾಗಿದ್ದಾರೆ.

 ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

 

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments