Select Your Language

Notifications

webdunia
webdunia
webdunia
webdunia

ಗಾಂಜಾ ಮತ್ತಿನಲ್ಲಿ 6 ಜನರಿಗೆ ಚೂರಿ ಇರಿದ ಯುವಕ

ಗಾಂಜಾ ಮತ್ತಿನಲ್ಲಿ 6 ಜನರಿಗೆ ಚೂರಿ ಇರಿದ ಯುವಕ
ಕೋಲಾರ , ಭಾನುವಾರ, 28 ಮೇ 2017 (12:18 IST)
ಕೋಲಾರ : ಕೋಲಾರದ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದ ಬಳಿ ಯುವಕನೊಬ್ಬ ಗಾಂಜಾ ಮತ್ತಿನಲ್ಲಿ  ಪೊಲೀಸ್‌ ಪೇದೆ ಸೇರಿದಂತೆ 6 ಮಂದಿಗೆ ಚೂರಿಯಿಂದ ಇರಿದಿರುವ ಘಟನೆ ನಡೆದಿದೆ.
 
ಸ್ಥಳೀಯ ನಿವಾಸಿ 22 ವರ್ಷದ ಮುಬಾರಕ್‌ ಎಂಬ ಯುವಕ ಈ  ಕೃತ್ಯ ಎಸಗಿದ್ದಾನೆ. ಕೂಡಲೇ ಸಾರ್ವಜನಿಕರು ಆತನನ್ನು ಹಿಡಿದಿದ್ದು ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
 
ಸಾರ್ವಜನಿಕರಿಗೆ ಇರಿಯುತ್ತಿದ್ದ ವೇಳೆ ತಡೆಯಲು ಬಂದ ಪೊಲೀಸ್‌ ಪೇದೆಯೊಬ್ಬರಿಗೂ ಇರಿದಿದ್ದಾನೆ. ಟಮಕ ನಿವಾಸಿ ಶ್ರೀನಿವಾಸ್, ಕೀಲುಕೋಟೆಯ ವೆಂಕಟೇಶಪ್ಪ ಎಂಬುವವರಿಗೂ ಚಾಕುವಿನಿಂದ ಇರಿದಿದ್ದಾನೆ. ಈತನಿಂದ ಒಟ್ಟು 6 ಮಂದಿ ಗಂಭೀರವಾಗಿ ಗಾಯಗೊಂಡಿದ್ದು  ಇಬ್ಬರು ಕೋಲಾರ ಜಿಲ್ಲಾಸ್ಪತ್ರೆ ಮತ್ತು ನಾಲ್ವರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 
 
ಸ್ಥಳಕ್ಕೆ ಎಸ್‌ಪಿ ದಿವ್ಯಾ ಗೋಪಿನಾಥ್‌ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೋಲಾರ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 
 

Share this Story:

Follow Webdunia kannada

ಮುಂದಿನ ಸುದ್ದಿ

ಸನತ್ ಜಯಸೂರ್ಯರ ಖಾಸಗಿ ವಿಡಿಯೋ ಲೀಕ್