Select Your Language

Notifications

webdunia
webdunia
webdunia
webdunia

ಜಿ.ಪರಮೇಶ್ವರ್‌ನದ್ದು ಉತ್ತರ ಕುಮಾರನ ಪೌರುಷ: ಶ್ರೀನಿವಾಸ್ ಪ್ರಸಾದ್

ಜಿ.ಪರಮೇಶ್ವರ್‌ನದ್ದು ಉತ್ತರ ಕುಮಾರನ ಪೌರುಷ: ಶ್ರೀನಿವಾಸ್ ಪ್ರಸಾದ್
ಮೈಸೂರು , ಸೋಮವಾರ, 24 ಅಕ್ಟೋಬರ್ 2016 (19:40 IST)
ಉತ್ತರ ಕುಮಾರನ ಪೌರುಷ ಏನು ಎನ್ನುವುದು ಜನರಿಗೆ ಗೊತ್ತಿದೆ ಎಂದು ಜಿ.ಪರಮೇಶ್ವರ್ ಹೇಳಿಕೆಗೆ ಮಾಜಿ ಸಚಿವ ಶ್ರೀನಿವಾಸ್ ಪ್ರಸಾದ್ ಟಾಂಗ್ ನೀಡಿದ್ದಾರೆ. 
 
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನೇನು, ಅವರೇನು ಎನ್ನುವುದು ರಾಜ್ಯದ ಜನತೆಗೆ ಗೊತ್ತಿದೆ. ನಮ್ಮಂತೆ ಇವರು ಹೋರಾಟದ ಹಿನ್ನೆಲೆಯಿಂದ ರಾಜಕೀಯಕ್ಕೆ ಬಂದವರೇ, ಜನತೆಯ ಕಷ್ಟನಷ್ಟ ಅರಿತವರೇ, ಇವರು ಯಾವ ರೀತಿ ಮಂತ್ರಿಯಾಗಿದ್ದಾರೆ ಎನ್ನುವುದು ನನಗೆ ಗೊತ್ತಿಲ್ಲವೇ ಎಂದು ಗೃಹ ಸಚಿವ ಪರಮೇಶ್ವರ್ ವಿರುದ್ಧ ಕಿಡಿಕಾರಿದರು. 
 
ಕಳೆದ ಚುನಾವಣೆಯಲ್ಲಿ ನಾನು ಗೆದ್ದರೆ ಮುಖ್ಯಮಂತ್ರಿ ಆಯ್ಕೆ ಸಂದರ್ಭದಲ್ಲಿ ತೊಡಕಾಗಬಹುದು ಎಂಬ ಕಾರಣದಿಂದ ಸಿಎಂ ಸಿದ್ದರಾಮಯ್ಯ ನನ್ನನ್ನು ಸೋಲಿಸಿದರು. ಅವರೇ ನನ್ನ ಸೋಲಿಗೆ ನೇರ ಕಾರಣ ಎಂದು ಹೇಳಿಕೊಂಡು ಪರಮೇಶ್ವರ್ ಓಡಾಡಲಿಲ್ಲವೇ ಎಂದರು. 
 
ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಕಿಕೊಂಡಿದ್ದ ಹ್ಯೊಬ್ಲೆಟ್ ವಾಚ್ ಕುರಿತು ನನ್ನೊಂದಿಗೆ ಚರ್ಚಿಸಲಿಲ್ಲವೇ? ಕದ್ದಿರುವ ವಾಚ್‌ನ್ನು ಸಿಎಂ ಕೈಗೆ ಕಟ್ಟಿಕೊಂಡಿದ್ದಾರೆ. ಈ ಕುರಿತು ನನ್ನ ಬಳಿ ದಾಖಲೆ ಇದೆ ಎಂದು ಹೇಳಿದ್ದಾಗಿ ಮಾಜಿ ಸಚಿವ ಶ್ರೀನಿವಾಸ್ ಪ್ರಸಾದ್ ಟಾಂಗ್ ತಿರುಗೇಟು ನೀಡಿದರು. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಹೆಲಿಕಾಪ್ಟರ್ ತುಮ್ಹಾರೆ ಬಾಪ್ ಕಾ ಹೈ: ಅಖಿಲೇಶ್ ಬೆಂಬಲಿಗರಿಗೆ ಶಿವಪಾಲ್ ಪ್ರತಿಕ್ರಿಯೆ