Select Your Language

Notifications

webdunia
webdunia
webdunia
webdunia

ಜಿ.ಪರಮೇಶ್ವರ್ ದಲಿತ ಸಮುದಾಯದ ನಕ್ಷತ್ರವಿದ್ದಂತೆ: ಕಾಂಗ್ರೆಸ್

ಜಿ.ಪರಮೇಶ್ವರ್
ಬೆಂಗಳೂರು , ಬುಧವಾರ, 20 ಜುಲೈ 2016 (15:26 IST)
ಗೃಹ ಖಾತೆ ಸಚಿವ ಡಾ.ಜಿ.ಪರಮೇಶ್ವರ್ ಅವರು ದಲಿತರ ಪರವಾಗಿ ನಿರಂತರವಾಗಿ ಹೋರಾಟ ಮಾಡಿಕೊಂಡು ಬಂದವರು. ಅವರು ದಲಿತ ಸಮುದಾಯದ ನಕ್ಷತ್ರವಿದ್ದಂತೆ ಎಂದು ಮಾಜಿ ಕೇಂದ್ರ ಸಚಿವ ಜಾಫರ್ ಷರೀಫ್ ತಿಳಿಸಿದ್ದಾರೆ.
 
ದಲಿತ ಸಮುದಾಯದ ನಾಯಕರಲ್ಲಿ ಜೆ.ಪರಮೇಶ್ವರ್ ಅವರು ಎದ್ದು ಕಾಣುವ ನಕ್ಷತ್ರ. ಅವರು ಏಕೆ ರಾಜ್ಯದ ಮುಖ್ಯಮಂತ್ರಿ ಆಗಬಾರದು ಎಂದು ಮತ್ತೆ ದಲಿತ ಮುಖ್ಯಮಂತ್ರಿ ವಿಚಾರವನ್ನು ಪ್ರಸ್ತಾಪಿಸಿದ್ದಾರೆ.
 
ಕೇಂದ್ರ ಸಂಸದೀಯ ಸಚಿವ ಮಲ್ಲಿಕಾರ್ಜುನ ಖರ್ಗೆ ಕುರಿತ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಮಾಜಿ ಕೇಂದ್ರ ಸಚಿವ ಜಾಫರ್ ಷರೀಫ್, ಗೃಹ ಖಾತೆ ಸಚಿವ ಡಾ.ಜಿ.ಪರಮೇಶ್ವರ್ ಅವರಿಗೆ ಏನು ಕಡಿಮೆಯಾಗಿದೆ. ಅಭಿವೃದ್ಧ ಪರ ಕೆಲಸ ಮಾಡಿಲ್ಲವೇ ಅವರೇಕೆ ರಾಜ್ಯದ ಮುಖ್ಯಮಂತ್ರಿಯಾಗಬಾರದು ಎಂದು ಪ್ರಶ್ನಿಸಿದ್ದಾರೆ.
 
ನಾನು ಯಾರ ಪರವಾಗಿಯೂ ಮಾತನಾಡುತ್ತಿಲ್ಲ. ನನ್ನ ಮನಸ್ಸಿಗೆ ಅನಿಸಿರುವುದನ್ನು ನೇರವಾಗಿ ಹೇಳುತ್ತಿದ್ದೇನೆ ಎಂದು ತಿಳಿಸಿದರು.
 
ಮುಖ್ಯಮಂತ್ರಿ ಸ್ಥಾನ ಯಾರ ಮನೆಯ ಸ್ವತ್ತು ಅಲ್ಲ ಎಂದು ಮಾಜಿ ಕೇಂದ್ರ ಸಚಿವ ಜಾಫರ್ ಷರೀಫ್ ಪರೋಕ್ಷವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಟಾಂಗ್ ನೀಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಮಲ್ಲಿಕಾರ್ಜುನ ಖರ್ಗೆ ಸಿಎಂ ಆಗಬೇಕಾಗಿತ್ತು: ಮನದಾಳ ಹೊರಹಾಕಿದ ಜಿ. ಪರಮೇಶ್ವರ್