Select Your Language

Notifications

webdunia
webdunia
webdunia
webdunia

ಜಿ ಪರಮೇಶ್ವರ್ ಎಂತಹ ಶಿಕ್ಷಿತರೋ ಗೊತ್ತಿಲ್ಲ, ಆದ್ರೆ ಅನಕ್ಷರಸ್ಥರಂತೆ ವರ್ತನೆ: ಜೆಡಿಎಸ್

ಜಿ ಪರಮೇಶ್ವರ್ ಎಂತಹ ಶಿಕ್ಷಿತರೋ ಗೊತ್ತಿಲ್ಲ, ಆದ್ರೆ ಅನಕ್ಷರಸ್ಥರಂತೆ ವರ್ತನೆ: ಜೆಡಿಎಸ್
ಬೆಂಗಳೂರು , ಸೋಮವಾರ, 26 ಡಿಸೆಂಬರ್ 2016 (14:48 IST)
ಗೃಹ ಸಚಿವ ಜಿ ಪರಮೇಶ್ವರ್ ಎಂತಹ ಶಿಕ್ಷಿತರೋ ಗೊತ್ತಿಲ್ಲ ಅನಕ್ಷರಸ್ಥರ ತರಹ ಮಾತನಾಡುತ್ತಾರೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಕಿಡಿಕಾರಿದ್ದಾರೆ.
 
ಸರಕಾರಿ ಕಾರಿಗೆ ಸೈರನ್ ಹಾಕಿಕೊಂಡು ಹೋಗಲು ಮಂತ್ರಿ ಪದವಿ ಬೇಕಾಗಿತ್ತಾ. ಮಂತ್ರಿ ಪದವಿಯೊಂದು ಅವರಿಗೆ ಕೇಡು ಎಂದು ಲೇವಡಿ ಮಾಡಿದ್ದಾರೆ.
 
ಸ್ವಲ್ಪವಾದರೂ ಆತ್ಮಗೌರವ ಬೇಡವೇ, ಐಜಿಪಿ, ಡಿಜಿಪಿಯನ್ನು ಅಧಿಕಾರದಲ್ಲಿ ಮುಂದುವರಿಸುವುದು ನೋಡಿದಲ್ಲಿ ಮುಂಬರುವ ಚುನಾವಣೆಗಾಗಿ ಹಣ ಸಂಗ್ರಹ ಮಾಡುತ್ತಿದ್ದಾರೆ ಎನ್ನುವ ಅನುಮಾನ ಕಾಡುತ್ತಿದೆ ಎಂದು ಆರೋಪಿಸಿದ್ದಾರೆ.
 
ಮಂಡ್ಯ ಜಿಲ್ಲೆಯಲ್ಲಿ ಇಬ್ಬರು ಜೆಡಿಎಸ್ ಕಾರ್ಯಕರ್ತರ ಹತ್ಯೆಯಾಗಿದೆ. ಇಲ್ಲಿಯವರೆಗೆ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ವಿಫಲವಾಗಿದ್ದಾರೆ. ಗೃಹ ಸಚಿವರಿಗೆ ಮಾನ ಮರ್ಯಾದೆ ಇದ್ದಲ್ಲಿ ನೈತಿಕತೆ ಹೊತ್ತು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲಿ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಹಣ ವಸೂಲಿ ಬಗ್ಗೆ ಕೇಳಿದ್ರೆ ತಮ್ಮ ಹರಾಮಿ ಬಾಯಿ ತೆಗೆಯುವ ಸಿಎಂ: ಕುಮಾರಸ್ವಾಮಿ