Select Your Language

Notifications

webdunia
webdunia
webdunia
webdunia

ತಮಿಳುನಾಡಿಗೆ ನೀರು ಬಿಟ್ರೆ ನಿಮ್ಮನ್ನು ಓಡಾಡೋಕೆ ಬಿಡೋಲ್ಲ: ಮಾದೇಗೌಡ ಎಚ್ಚರಿಕೆ

ತಮಿಳುನಾಡಿಗೆ ನೀರು ಬಿಟ್ರೆ ನಿಮ್ಮನ್ನು ಓಡಾಡೋಕೆ ಬಿಡೋಲ್ಲ: ಮಾದೇಗೌಡ ಎಚ್ಚರಿಕೆ
ಮೈಸೂರು , ಶುಕ್ರವಾರ, 30 ಜೂನ್ 2017 (13:38 IST)
ತಮಿಳುನಾಡಿಗೆ ನೀರು ಬಿಟ್ರೆ ನಿಮ್ಮನ್ನು ಓಡಾಡೋಕೆ ಬಿಡೋಲ್ಲ ಎಂದು ಕಾವೇರಿ ಹಿತರಕ್ಷಣಾ ಸಮಿತಿ ಅಧ್ಯಕ್ಷ ಜಿ.ಮಾದೇಗೌಡ ಸರಕಾರವನ್ನು ಎಚ್ಚರಿಸಿದ್ದಾರೆ.
 
ತಮಿಳುನಾಡಿಗೆ ನೀರು ಬಿಟ್ಟಿದ್ದೆ ಆದಲ್ಲಿ ರೈತರು ಆಕ್ರೋಶಕ್ಕೆ ಗುರಿಯಾಗುತ್ತೀರಿ. ಹುಷಾರಾಗಿರಿ ಜನ ನಮ್ಮ ನಿಮ್ಮನ್ನೆಲ್ಲಾ  ಹೊಡೆದುಹಾಕ್ತಾರೆ ಎಂದು ತಿಳಿಸಿದ್ದಾರೆ.
 
ನೀರಾವರಿ ನಿಗಮದ ಅಧಿಕಾರಿಗೆ ದೂರವಾಣಿ ಕರೆ ಮಾಡಿ ಎಚ್ಚರಿಕೆ ನೀಡಿದ ಗೌಡರು, ಕಾನೂನು ಗೀನೂನು ಪಕ್ಕಕ್ಕಿಡಿ. ಮೊದಲು ತಮಿಳುನಾಡಿಗೆ ನೀರು ಹರಿಸುವುದನ್ನು ನಿಲ್ಲಿಸಿ ಎಂದು ಗುಡುಗಿದ್ದಾರೆ. 
 
ಜಲಾಶಯ ಭರ್ತಿಯಾಗುವ ಮುನ್ನವೇ ತಮಿಳುನಾಡಿಗೆ ನೀರು ಹರಿವು ಬಿಟ್ಟಿರುವುದು ರೈತರ ಅಸಮಾಧಾನಕ್ಕೆ ಕಾರಣವಾಗಿದೆ. ಕೂಡಲೇ ತಮಿಳುನಾಡಿಗೆ ನೀರು ಹರಿಸುವುದನ್ನು ನಿಲ್ಲಿಸಬೇಕು ಎನ್ನುವಾದಲ್ಲಿ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ರೈತ ಮುಖಂಡರು ತಿಳಿಸಿದ್ದಾರೆ.
 
ಬೆಂಗಳೂರು - ಮೈಸೂರು ಹೆದ್ದಾರಿಯಲ್ಲಿ ಪ್ರತಿಭಟನಾಕಾರರು ಪ್ರತಿಭಟನೆ ಆರಂಭಿಸಿದ್ದರಿಂದ ರಸ್ತೆ ಸಂಚಾರದಲ್ಲಿ ಅಸ್ಥವ್ಯಸ್ಥೆ ಉಂಟಾಗಿದೆ ಎಂದು ಮೂಲಗಳು ತಿಳಿಸಿವೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಜಿಎಸ್`ಟಿ ಎಂದರೆ ಬಿಜೆಪಿ ಸಚಿವರಿಗೇ ಗೊತ್ತಿಲ್ಲ.. ವೈರಲ್ ವಿಡಿಯೋ