Publish Date: Tue, 01 Sep 2020 (22:16 IST)
Updated Date: Tue, 01 Sep 2020 (22:17 IST)
ರಾಜ್ಯದ ಸಚಿವರೊಬ್ಬರು ತಹಸೀಲ್ದಾರ್ ವಿರುದ್ಧ ಗರಂ ಆಗಿ ಫುಲ್ ಕ್ಲಾಸ್ ತೆಗೆದುಕೊಂಡ ಘಟನೆ ನಡೆದಿದೆ.
ಕೋರ್ಟ್ ಕಾಂಪ್ಲೆಕ್ಸ್ ಕಟ್ಟಡಕ್ಕೆ ನಿವೇಶನ ನೀಡಲು ವಿಳಂಬ ನೀತಿ ಅನುಸರಿಸುತ್ತಿರುವ ತಹಸೀಲ್ದಾರ್ ರನ್ನು ಕರೆಸಿಕೊಂಡ ಸಚಿವ ಪ್ರಭು ಚವ್ಹಾಣ್ ಕ್ಲಾಸ್ ತೆಗೆದುಕೊಂಡಿದ್ದಾರೆ.
ಔರಾದ್ ನ್ಯಾಯಾಲಯ ಆವರಣಕ್ಕೆ ಸಚಿವ ಪ್ರಭು ಚವ್ಹಾಣ್ ಭೇಟಿ ನೀಡಿದಾಗ ಈ ಘಟನೆ ನಡೆದಿದೆ.
2017-18ನೇ ಸಾಲಿನಲ್ಲಿ ಔರಾದ ಕೋರ್ಟ್ ಕಾಂಪ್ಲೆಕ್ಸ್ ನಿರ್ಮಾಣಕ್ಕೆ ಸರ್ಕಾರದಿಂದ ಮಂಜೂರಾತಿ ಸಿಕ್ಕಿದೆ.
ಬೇಗ ನಿವೇಶನ ನೀಡುವಂತೆ ತಿಳಿಸಲಾಗಿದೆ. ಆದರೂ ಸಹ ನಿವೇಶನ ನೀಡಿಲ್ಲವೆಂದು ಗರಂ ಆಗಿದ್ದಾರೆ.