Webdunia - Bharat's app for daily news and videos

Install App

19 ರಿಂದ 29 ನೇ ತಾರೀಖಿನ ವರೆಗೆ ನಡೆಯಲಿರುವ ಫಲಪುಷ್ಪ ಪ್ರದರ್ಶನ

Webdunia
ಶನಿವಾರ, 14 ಜನವರಿ 2023 (18:31 IST)
ಸಿಲಿಕಾನ್ ಸಿಟಿಯ ಪ್ರೇಮಿಗಳ ನೆಚ್ಚಿನ ತಾಣ ಹಾಗೂ ವಾಯುವಿಹಾರಿಗಳ ಸ್ವರ್ಗ ಎಂದು ಕರೆಸಿಕೊಳ್ಳುವ ಲಾಲ್ ಬಾಗ್ ನಲ್ಲಿ ಪ್ರತಿ ವರ್ಷ ದಂತೆ ಈ ವರ್ಷವೂ ಗಣರಾಜ್ಯ ದಿನಾಚರಣೆ ಪ್ರಯುಕ್ತ ತೋಟಗಾರಿಕೆ ಇಲಾಖೆಯಿಂದ ರಾಜಧಾನಿ ಜನ್ರಿಗೆ 213 ಫಲಪುಷ್ಪ ಪ್ರದರ್ಶನ ಏರ್ಪಡಿಸಲಾಗುತ್ತಿದ್ದು ಈ ಫಲಪುಷ್ಪ ಪ್ರದರ್ಶನವನ್ನು ಹತ್ತಿರದಿಂದ ನೋಡಿ ಕಣ್ತುಂಬಿಕ್ಕೋಳ್ಳೋಕೆ ಲಾಲ್ ಬಾಗ್ ಸಿದ್ದವಾಗ್ತಾ ಇದೆ. ಹಾಗಾದ್ರೆ ಈ ಬಾರಿ ಫಲಪುಷ್ಪ ಪ್ರದರ್ಶನದ ತಯಾರಿ ನಡಿತಾ ಇದೆ.
 
ಪ್ರತಿ ವರ್ಷ ಸಸ್ಯ ಕಾಶಿ ಲಾಲ್ ಬಾಗ್ ನಲ್ಲಿ ಹೂವಿನ ಲೋಕ ಮೇಳೈಸುತ್ತೆ.  ಕಳೆದ ಎರೆಡು ವರ್ಷಗಳಿಂದ ಕರೋನಾ ಹಿನ್ನಲೆ ಲಾಲ್ ಬಾಗ್ ನಲ್ಲಿ ಫಲಪುಷ್ಪ ಪ್ರದರ್ಶನಕ್ಕೆ ಬ್ರೇಕ್ ಹಾಕಲಾಗಿತ್ತು. ಆದರೆ ಈ ಬಾರಿ ಕರೋನ ಸೋಂಕು ಕಡಿಮೆಯಾಗಿದ್ದು  ಸಿಲಿಕಾನ್ ಸಿಟಿಯಲ್ಲಿ ಎಲ್ಲ ಚಟುವಟಿಕೆಗಳು ಗರಿಗೇದರಿದ್ದು ಜನರೆಲ್ಲ ಮತ್ತೆ ಲವಲವಿಕೆಯಿಂದ ಮನೆಯಿಂದ ಹೊರಗಡೆ ಬರುತಿದ್ದು, ಹೀಗಾಗಿ  ಲಾಲ್ ಬಾಗ್ ನಲ್ಲಿ ಹೂವಿನ ಲೋಕ ಅನಾವರಣಗೊಳ್ಳಲಿದ್ದು,ಇದಕ್ಕೆ ಈಗಾಗಲೇ ಭರದ ಸಿದ್ಧತೆ ಆರಂಭ ಗೊಂಡಿದೆ .
 
 ಈ ಬಾರಿ ಪ್ಲವರ್ ಶೋ ವಿಶೇಷ ವೆನೆಂದ್ರೆ ಮೊದಲ ಬಾರಿಗೆ ಪ್ರದರ್ಶನದ ಮುಖ್ಯ ವಿಷಯವನ್ನು ಗಾಜಿನ ಮನೆಯ ಹೊರಗಿನ ವಿಶೇಷ ಮಂಟಪದಲ್ಲಿ ಚಿತ್ರಿಸಲಾಗುತ್ತೆ 1,500 ವರ್ಷಗಳ ಬೆಂಗಳೂರು ಇತಿಹಾಸ ಆಧಾರಿತ ಪರಿಕಲ್ಪನೆಯನ್ನು ಈ ವರ್ಷದ ಮಖ್ಯ ವಿಷಯವನ್ನಾಗಿಕೊಂಡಿದೆ  ಈ ವರ್ಷದ ಮಖ್ಯ  ಗಾಜಿನ ಮನೆಯಲ್ಲಿ ಅಲಂಕಾರಿಕ ಸಸ್ಯಗಳು  ಆಯ್ದ ಕತ್ತರಿಸಿದ ಹೂವುಗಳ ವ್ಯವಸ್ಥೆ ಮತ್ತು ಪ್ರದರ್ಶನಕ್ಕೆ ಮುಖ್ಯ ಗಮನವನ್ನು ನೀಡಲಾಗುತ್ತಿದೆ, ಊಟಿ ಹಾಗೂ ಹಲವು ಕಡೆಗಳಿಂದ ಹೂವಿನ ಗಿಡಗಳನ್ನು ತರಿಸಿಕೊಳ್ಳಲಾಗುತತ್ತಿದೆ, ಇನ್ನು ಪ್ಲವರ್ ಶೋ ನ ಉಘ್ಘಾಟನೆಯನ್ನು ಕರ್ನಾಟಕದ ಮಾನ್ಯ ಮುಖ್ಯಮಂತ್ರಿಗಳು  ,ತೋಟಗಾರಿಕೆ ಸಚಿವರು ಶಾಸಕ ಶ್ರೀ.ಉದಯ್.ಬಿ. ಗರುಡಾಚರ್  ಎಂ.ಪಿ. ಶ್ರೀ. ತೇಜಸ್ವಿ ಸೂರ್ಯ, ಸೇರಿದಂತೆ ಅನೇಕ ಗಣ್ಯರು ನೇರವೇರಿಸಲಿದ್ದಾರೆ .
 
 ಫಲಪುಷ್ಪ ಪ್ರದರ್ಶನದ ತಾಯಾರಿ ಅದ್ದೂರಿಯಾಗಿ ಸಾಗಿ ಬರುತ್ತಿದ್ದು ಬೆಂಗಳೂರಿಗರಂತೂ ಹೂವಿನ ಸೌಂದರ್ಯವನ್ನು ನೋಡಿ ಕಣ್ಣು ತುಂಬಿಸಕೊಳ್ಳಲು ಕಾತುರದಿಂದ ಕಾಯುತ್ತಿದ್ದಾರೆ .
 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ತಮಿಳುನಾಡು, ತಂದೆ ಮಗನ ಜಗಳವನ್ನು ಬಿಡಿಸಲು ಹೋಗಿ ಪ್ರಾಣ ಕಳೆದುಕೊಂಡ ಸಬ್‌ ಇನ್‌ಸ್ಪೆಕ್ಟರ್‌

ಕೆಆರ್ ಎಸ್ ಡ್ಯಾಮ್ ಕಟ್ಟುವ ಯೋಜನೆ ಟಿಪ್ಪುಗಿತ್ತು ಎಂದ ಜಮೀರ್ ಅಹ್ಮದ್ ಗೆ ಟಾಂಗ್ ಕೊಟ್ಟ ಬಿಜೆಪಿ

ಮುಂಬೈ, ಶಸ್ತ್ರಚಿಕಿತ್ಸೆ ಬೆನ್ನಲ್ಲೇ ಐವರಿಗೆ ಕಣ್ಣಿನ ಸೋಂಕು: ವೈದ್ಯರ ವಿರುದ್ಧ ಎಫ್‌ಐಆರ್‌

ಪ್ರಜ್ವಲ್ ಥರಾ ಪ್ರತಾಪ್ ಸಿಂಹ ಮೊಬೈಲ್ ನೋಡಿದ್ರೆ ಜೈಲಿಗೇ ಹಾಕ್ಬೇಕಾಗುತ್ತೆ: ಎಂ ಲಕ್ಷ್ಮಣ

ಮದರಸಾ ಗುರುಗಳಿಗೆ ಕನ್ನಡ, ಅಲ್ಪಸಂಖ್ಯಾತರ ಸಾಮೂಹಿಕ ಮದುವೆಗೆ 50000 ಕೊಡ್ತೇವೆ: ಜಮೀರ್ ಅಹ್ಮದ್

ಮುಂದಿನ ಸುದ್ದಿ
Show comments