Select Your Language

Notifications

webdunia
webdunia
webdunia
webdunia

ಚಿಕ್ಕಮಗಳೂರಿನಲ್ಲಿ ನಾಲ್ವರು ನಕ್ಸಲ್‌ರ ಶರಣಾಗತಿ......

ಚಿಕ್ಕಮಗಳೂರು , ಸೋಮವಾರ, 14 ನವೆಂಬರ್ 2016 (15:50 IST)
ಸರಕಾರದ ನಕ್ಸಲ್ ಪ್ಯಾಕೇಜ್ ಅಡಿಯಲ್ಲಿ ಇಂದು ಚಿಕ್ಕಮಗಳೂರು ಜಿಲ್ಲಾ ಕಮಿಟಿ ಮುಂದೆ ನಾಲ್ವರು ನಕ್ಸಲ್‌ರು ಶರಣಾಗುವ ಮೂಲಕ ಸಮಾಜದ ಮುಖ್ಯವಾಹಿನಿಗೆ ಬರಲು ನಿರ್ಧರಿಸಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯ ರಾಜು, ರಾಯಚೂರು ಮೂಲದ ರಿಜ್ವಾನ್ ಬೇಗಂ, ನಿಲುವಳಿ ಪದ್ಮನಾಭ ಹಾಗೂ ಭಾರತಿ ನಾಗರಿಕ ವೇದಿಕೆಯ ಪತ್ರಕರ್ತೆ ಗೌರಿ ಲಂಕೇಶ್ ಹಾಗೂ ಎಂ.ಕೆ.ಸುಬ್ಬಯ್ಯ ನೇತೃತ್ವದಲ್ಲಿ ಚಿಕ್ಕಮಗಳೂರು ಜಿಲ್ಲಾಧಿಕಾರಿ ಮತ್ತು ಪೊಲೀಸಂ ವರಿಷ್ಠಾಧಿಕಾರಿಗಳ ಮುಂದೆ ಶರಣಾಗಿದ್ದಾರೆ. 
 
ನಿಲುವಳಿ ಪದ್ಮನಾಭ ಹಾಗೂ ಭಾರತಿ ಮತ್ತು ರಾಜು ಹಾಗೂ ರಿಜ್ವಾನ್ ಬೇಗಂ ವಿವಾಹವಾಗಿದ್ದು, ಈ ನಕ್ಸಲ್ ದಂಪತಿಗಳು ಸರಕಾರದ ನಕ್ಸಲ್ ಪ್ಯಾಕೆಜ್ ಅಡಿಯಲ್ಲಿ ಚಿಕ್ಕಮಗಳೂರು ಜಿಲ್ಲಾ ಕಮಿಟಿ ಮುಂದೆ ಶರಣಾಗಿದ್ದಾರೆ. 
 
ಈ ಇಬ್ಬರು ಯುವತಿಯರು ಮುಸ್ಲಿಂ ಧರ್ಮಕ್ಕೆ ಸೇರಿದ್ದವರು ಎನ್ನುವ ಮಾಹಿತಿ ಸಿಕ್ಕಿದ್ದು, ಕಳೆದ ವರ್ಷ ಸಿರಿಮನಿ ನಾಗರಾಜ್ ಹಾಗೂ ನೂರ್ ಶ್ರೀಧರ್ ಶರಣಾಗಿದ್ದರು. 


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಮಾಯಾವತಿ ವಿರುದ್ಧ ರಾಖಿ ಸಾವಂತ್ ಕಣಕ್ಕೆ