Webdunia - Bharat's app for daily news and videos

Install App

ದೊಣ್ಣೆ ಹಿಡ್ಕಂಡು ನಿಂತ್ಕಳಿ ಎಂದ ಮಾಜಿ ಶಾಸಕ…

Webdunia
ಶುಕ್ರವಾರ, 29 ಮಾರ್ಚ್ 2019 (14:06 IST)
ದೊಣ್ಣೆ ಹಿಡ್ಕಂಡು ನಿಂತ್ಕಳಿ ಎಂದು ಶಾಸಕರೊಬ್ಬರು ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.

ನನ್ಮಕ್ಕಳು ಜೆಡಿಎಸ್ ನವರನ್ನ ಹೆದರಿಸ್ಬೇಕೆಂದು ಪ್ರಚೋದನೆ ನೀಡಿದ್ದಾರೆ. ಯಾವುದಕ್ಕೂ ಎದೆಗುಂದಬೇಡಿ ನಾನಿದಿನಿ ಎಂದ ಶಾಸಕ ಹೊಸ ವರಸೆ ತೆಗೆದಿದ್ದಾರೆ.

ಮಾಜಿ ಬಿಜೆಪಿ ಶಾಸಕ ಸುರೇಶ್ ಗೌಡನ‌ ಹೊಸ ವರಸೆ ಇದಾಗಿದೆ. ಗ್ರಾಮಾಂತರ ಕ್ಷೇತ್ರದಲ್ಲಿ ಕಾರ್ಯಕರ್ತರ ಕುರಿತು ಮಾತನಾಡುವಾಗ ಶಾಸಕರ ಮಾತು ವಿವಾದಕ್ಕೆ ಕಾರಣವಾಗಿದೆ. ಜೆಡಿಎಸ್ ನವ್ರು ಕೌರವರಿದ್ದಾಗೆ,ಅವರ ವಿರುದ್ದ ಯುದ್ದ ಮಾಡಿ. ಕೃಷ್ಷ ಪರಮಾತ್ಮನ ಹಾಗೆ ನಿಮ್ಮ ರಕ್ಷಣೆಗೆ ನಾನಿದಿನಿ ಎಂದು ಅಭಯ ನೀಡಿದ್ರು.

ಜೆಡಿಎಸ್ ಸಂಹಾರ ಮಾಡೋಣ ನಿಂತು ಯುದ್ದಮಾಡಿ. ಪ್ರಚಾರಕ್ಕೆ ಬಂದ ವೇಳೆ ಕಿರುಚಿ, ಡಕಾಯಿತ ಅಂತಾ ಘೋಷಣೆ ಕೂಗಿ ಎಂದರು.

 ಕಳ್ಳರನ್ನ ತಂದು ದೇವೇಗೌಡ ಕ್ಷೇತ್ರಕ್ಕೆ ನಿಲ್ಲಿಸ್ತಾರೆ. ಲೂಟಿ ಮಾಡಿ ನಮಗೂ ಪಾಲು ಕೊಡಿ ಎಂದು ಗೌಡರು ಅವಕಾಶ ಕೊಡ್ತಾರೆ. ಕೊಳ್ಳೆ ಹೊಡೆದ ಹಣದಲ್ಲಿ ದೇವೇಗೌಡ್ರಿಗೂ ಪಾಲಿದೆಯಂತೆ. ಚುನಾವಣಾ ಪ್ರಚಾರಕ್ಕೆ ಬಂದ್ರೆ ಶಾಸಕ ಗೌರಿಶಂಕರ್ ಗೆ ಕಳ್ಳ ಎಂದು ಕೂಗಿ ಎಂದು ಪ್ರಚೋದನೆ ನೀಡಿದ್ರು.  



ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments